ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪುಣ್ಯತಿಥಿ: ರಾಷ್ಟ್ರ ನಾಯಕರಿಂದ ನಮನ
ನವದೆಹಲಿ, ಜುಲೈ 27(ಹಿ.ಸ.): ಆ್ಯಂಕರ್: ಭಾರತದ ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯತಿಥಿಯ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಅವರಿಗೆ ಭಾವಪೂ
भारत रत्न डॉ. ए.पी.जे. अब्दुल कलाम (फाइल फोटो)।


ನವದೆಹಲಿ, ಜುಲೈ 27(ಹಿ.ಸ.):

ಆ್ಯಂಕರ್:

ಭಾರತದ ಮಾಜಿ ರಾಷ್ಟ್ರಪತಿ, ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯತಿಥಿಯ ಅಂಗವಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಅವರಿಗೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.

ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು, ಡಾ. ಕಲಾಂ ಅವರು ಅಭಿವೃದ್ಧಿ ಹೊಂದಿದ, ಆತ್ಮನಿರ್ಭರ ಹಾಗೂ ಶಕ್ತಿಶಾಲಿ ಭಾರತದ ಕನಸುಗಾರರಾಗಿದ್ದರು. ಸ್ವದೇಶಿ ಕ್ಷಿಪಣಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಅವರು, ಜ್ಞಾನ, ಶಿಸ್ತು, ಸರಳತೆ ಹಾಗೂ ರಾಷ್ಟ್ರಸೇವೆಯನ್ನು ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು. ನಿದ್ರೆಯಲ್ಲಿ ಕಾಣುವವು ಕನಸುಗಳಲ್ಲ, ನಿದ್ರೆ ಬರದಂತೆ ಮಾಡುವುದೇ ನಿಜವಾದ ಕನಸು ಎಂಬ ಕಲಾಂ ಅವರ ಮಾತು ಇಂದಿಗೂ ಯುವಜನತೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಭಾರತದ ಕ್ಷಿಪಣಿ ಹಾಗೂ ಬಾಹ್ಯಾಕಾಶ ಕಾರ್ಯಕ್ರಮಗಳ ದೂರದರ್ಶಿ ರೂಪಶಿಲ್ಪಿಯಾಗಿದ್ದ ಡಾ. ಕಲಾಂ ಅವರ ವೈಜ್ಞಾನಿಕ ಸಾಧನೆಗಳು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದರು. ಜನರ ರಾಷ್ಟ್ರಪತಿಯಾಗಿ ಅವರು ಎಂದೆಂದಿಗೂ ಆದರ್ಶವಾಗಿರುತ್ತಾರೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಾ. ಕಲಾಂ ಅವರನ್ನು ಜನರ ರಾಷ್ಟ್ರಪತಿ ಹಾಗೂ ಭಾರತದ ಕ್ಷಿಪಣಿ ಪಿತಾಮಹ ಎಂದು ಸ್ಮರಿಸಿ, ದೇಶದ ಸ್ವದೇಶಿ ಕ್ಷಿಪಣಿ ಮತ್ತು ರಕ್ಷಣಾ ಸಾಮರ್ಥ್ಯ ವೃದ್ಧಿಯಲ್ಲಿ ಅವರ ಪಾತ್ರ ಐತಿಹಾಸಿಕವಾಗಿದೆ ಎಂದಿದ್ದಾರೆ.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಜೆ.ಪಿ. ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಮನೋಹರ್ ಲಾಲ್ ಸೇರಿದಂತೆ ಹಲವರು ಡಾ. ಕಲಾಂ ಅವರ ವೈಜ್ಞಾನಿಕ ಸಾಧನೆಗಳು, ಅಗ್ನಿ ಮತ್ತು ಪೃಥ್ವಿ ಕ್ಷಿಪಣಿ ಯೋಜನೆಗಳು, ಎಸ್‌ಎಲ್‌ವಿ–3, ರೋಹಿಣಿ ಉಪಗ್ರಹ ಉಡಾವಣೆ ಹಾಗೂ ಪೋಖ್ರಾನ್–2 ಅಣು ಪರೀಕ್ಷೆಗಳಲ್ಲಿ ಅವರ ಮಹತ್ವದ ಕೊಡುಗೆಯನ್ನು ಸ್ಮರಿಸಿದರು. ಅವರ ಜೀವನ ಯುವಜನತೆಗೆ ರಾಷ್ಟ್ರ ನಿರ್ಮಾಣದ ಸ್ಫೂರ್ತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ ಕೇಜ್ರಿವಾಲ್ ಕೂಡ ಡಾ. ಕಲಾಂ ಅವರಿಗೆ ನಮನ ಸಲ್ಲಿಸಿದರು. ವಿಜ್ಞಾನ, ಶಿಕ್ಷಣ, ಸರಳತೆ ಹಾಗೂ ರಾಷ್ಟ್ರಸೇವೆಯ ಮೂಲಕ ಅವರು ದೇಶಕ್ಕೆ ನೀಡಿದ ಕೊಡುಗೆಗಳು ಚಿರಸ್ಮರಣೀಯವಾಗಿದ್ದು, ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿರಲಿವೆ ಎಂದು ಅವರು ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande