
ಕೋಲಾರ, 0೩ ಎಪ್ರಿಲ್ (ಹಿ.ಸ.) :
ಆ್ಯಂಕರ್ : ೨೦೨೫-೨೬ನೆ ಸಾಲಿಗೆ ಕೇಂದ್ರ ಪುgಸ್ಕೃತ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ೧೦೭೦೦ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ ನೀಡಲಾಗಿದ್ದು,೨೦೧೧ರ ಜನಗಣತಿಯಂತೆ ೭೪.೩೯ ಇದ್ದ ಜಿಲ್ಲೆಯ ಸಾಕ್ಷರತಾ ಪ್ರಮಾಣ ಇದೀಗ ವಿವಿಧ ಸಾಕ್ಷರತಾ ಕಾರ್ಯಕ್ರಮಗಳಿಂದ ಶೇ.೮೪ ಕ್ಕೆ ಹೆಚ್ಚಳವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ. ಬಾಗೇವಾಡಿ ತಿಳಿಸಿದರು.
ಕೋಲಾರ ನಗರದ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಏ.೫ರ ಸಾಕ್ಷರತಾ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ೨೦೨೫-೨೬ನೆ ಸಾಲಿಗೆ ಕೇಂದ್ರ ಪುgಸ್ಕೃತ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
೨೦೨೫ರ ಸಾಕ್ಷರತಾಧ್ಯೇಯವಾಕ್ಯ ‘ಡಿಜಿಟಲ್ ಯುಗದಲ್ಲಿ ಸಾಕ್ಷರತೆಯನ್ನು ಉತ್ತೇಜಿಸುವುದು’ ಆಗಿದ್ದು, ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು ಕರಪತ್ರ, ಸಭೆ ಸಮಾರಂಭ, ಭಾಷಣ, ವಿಚಾರ ಸಂಕೀರ್ಣ ಪ್ರಚಾರ, ಸಪ್ತಾಹ, ಮಾಸಾಚಾರಣೆ, ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾಕ್ಷರತೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಲು ತಿಳಿಸಿದರು.
ಈ ಸಮಯದಲ್ಲಿ ೨೦೨೫-೨೬ನೆ ಸಾಲಿಗೆ ಕೇಂದ್ರ ಪುರಸ್ಕೃತ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ೧೦೭೦೦ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿ ನೀಡಲಾಗಿದೆ, ಅನಕ್ಷರಸ್ಥರ ಜೀವನ ವಿಧಾನ ಮತ್ತು ವೃತ್ತಿಯನ್ನು ಆಧಾರವಾಗಿಟ್ಟುಕೊಂಡು ಸಾಕ್ಷರತಾ ಯೋಜನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.
ಆ ಮೂಲಕ ಅವರಿಗೆ ವಿಜ್ಞಾನ ಮತ್ತು ವೃತ್ತಿಕೌಶಲ್ಯಗಳನ್ನು ಉತ್ಕೃಷ್ಟಗೊಳಿಸುವ ವಿಚಾರಗಳನ್ನು ತಿಳಿಸಬೇಕು, ಎಂಬ ಅಭಿಪ್ರಾಯ ಸಭೆಯಲ್ಲಿ ಮೂಡಿ ಬಂತು. ಈ ರೀತಿಯ ಸಾಕ್ಷರತೆಯಿಂದ ಹಿಂದುಳಿದ ಅನಕ್ಷರಸ್ಥ ಸಮುದಾಯದ ಹಾಗೂ ಸಾಮಾಜಿಕ ಸ್ಥಿತಿಯು ಸುಧಾರಣೆಯಾಗುವುದು. ಇದರಿಂದ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ತೊಡೆದು ಹಾಕಬಹುದೆಂಬ ಆಶಾವಾದ ಮೂಡಿದೆ ಎಂದರು.
೨೦೧೧ರ ಜನಗಣತಿಯಂತೆ ೭೪.೩೯ ಜಿಲ್ಲೆಯ ಸಾಕ್ಷರತಾ ಪ್ರಮಾಣವಿದ್ದು ೨೦೧೧ರಿಂದ ಇದು ವರೆವಿಗೂ ಗ್ರಾಮೀಣ ಪ್ರದೇಶದಲ್ಲಿ ಅನುಷ್ಠಾನಗೊಳಿಸಿದ ವಿವಿದ ಸಾಕ್ಷರತಾ ಕಾರ್ಯಕ್ರಮಗಳಿಂದ ೮೪ಕ್ಕೆ ಸಾಕ್ಷರತಾ ಪ್ರಮಾಣ ಹೆಚ್ಚಳವಾಗಿರುತ್ತದೆ. ಜಿಲ್ಲೆಯಲ್ಲಿ ಶೇ.೧೦೦ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಕರೆ ನೀಡಿದರು.
ಶಿಕ್ಷಣ ಅಕ್ಷರ ಕಲಿಕೆಯ ಜತೆಗೆ ಬದುಕು ರೂಪಿಸಿಕೊಳ್ಳಲು ದಾರಿ ತೋರುವಂತಿರಬೇಕು ಎಂದ ಅವರು, ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿ ಅನಕ್ಷರಸ್ಥರಾಗಿರಬಾರದು, ಈ ರೀತಿಯಲ್ಲಿ ಕಾರ್ಯಯೋಜನೆ ರೂಪಿಸಿ, ಶೇ.೧೦೦ ಸಾಕ್ಷರತೆ ಸಾಧನೆಗೆ ಇಲಾಖೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ಉಮಾ ಅವರು ಸಭೆಗೆ ಮಾಹಿತಿ ನೀಡಿ, ೨೦೨೫-೨೬ ನೇ ಸಾಲಿನಲ್ಲಿ ಜಿಲ್ಲೆಯ ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿರುವ ೩೨ ಗ್ರಾ.ಪಂಗಳನ್ನು ಆಯ್ಕೆ ಮಾಡಿ ಕೊಂಡು ಲಿಂಕ್ ಡಾಕ್ಯುಮೆಂಟ್ ಅನುದಾನದಡಿ ಯಲ್ಲಿ ೬೦೦೦ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿಯೊಂದಿಗೆ ಮೂಲ ಸಾಕ್ಷರತಾ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗಿದೆ.
ಏ.೫ ರಂದು ನಡೆಯುವ ಮೌಲ್ಯಮಾಪನ ಪರೀಕ್ಷೆಯಲ್ಲಿ ೬೦೦೦ ಕಲಿಕಾರ್ಥಿಗಳು ನವ ಸಾಕ್ಷರಾಗುತ್ತಾರೆ. ಎಂದ ಅವರು, ೨೦೨೫-೨೬ನೇ ಸಾಲಿನ ಜಿಲ್ಲೆಯ ಲಿಂಕ್ ಡಾಕ್ಯೂಮೆಂಟ್ ಅನುದಾನದಡಿಯಲ್ಲಿ ಸಾಕ್ಷರತಾ ಕಾರ್ಯಕ್ರಮಕ್ಕೆ ಜಿಲ್ಲೆಯ ೬ ತಾಲ್ಲೂಕುಗಳ ಆಯ್ದ ೩೨ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು ೬೦೦೦ ಅನಕ್ಷರಸ್ಥರಿಗೆ ೧೮೯ ಪರೀಕ್ಷಾ ಕೇಂದ್ರಗಳುಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಪರೀಕ್ಷೆ ಕಾಂiiದ ಉಸ್ತುವಾರಿ ವಹಿಸಿದ್ದು, ಏ.೫ರ ಮೌಲ್ಯಮಾಪನ ಮೇಲ್ವಿಚಾರಣೆಯಲ್ಲಿ ೦೩ ಅವಧಿಗಳಲ್ಲಿ ಪರೀಕ್ಷೆ ನಡೆಯುತ್ತದೆ ಎಂದರು.
ಬಂಗಾರಪೇಟೆ ತಾಲ್ಲೂಕಿನ ೪ ಗ್ರಾ.ಪಂಗಳ ೨೬ ಪರೀಕ್ಷಾ ಕೇಂದ್ರಗಳಲ್ಲಿ ೧ ಸಾವಿರ ಕಲಿಕಾರ್ಥಿಗಳು,ಕೆಜಿಎಫ್ ತಾಲ್ಲೂಕಿನಲ್ಲಿ ೩ ಗ್ರಾ.ಪಂಗಳ ೫ ಪರೀಕ್ಷಾ ಕೇಂದ್ರಗಳಲ್ಲಿ ೨೫೦ ಕಲಿಕಾರ್ಥಿಗಳು, ಕೋಲಾರ ತಾಲ್ಲೂಕಿನ ೧೩ ಗ್ರಾ.ಪಂಗಳಲ್ಲಿ ೭೪ ಪರೀಕ್ಷಾ ಕೇಂದ್ರಗಳಲ್ಲಿ ೧೭೫೦ ಕಲಿಕಾರ್ಥಿಗಳು, ಮಾಲೂರು ತಾಲ್ಲೂಕಿನ ೪ ಗ್ರಾ.ಪಂಗಳಿಂದ ೩೫ ಕೇಂದ್ರಗಳಲ್ಲಿ ೧ಸಾವಿರ ಮಂದಿ, ಮುಳಬಾಗಿಲು ತಾಲ್ಲೂಕಿನ ೬ ಗ್ರಾ.ಪಂ ಗಳಲ್ಲಿ ೪೬ ಪರೀಕ್ಷಾ ಕೇಂದ್ರಗಳಲ್ಲಿ ೧೭೫೦ ಮಂದಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ೨ ಗ್ರಾ.ಪಂ ಗಳಿಂದ ೩ ಪರೀಕ್ಷಾ ಕೇಂದ್ರಗಳಲ್ಲಿ ೨೫೦ ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಹಿರಿಯ ಉಪನ್ಯಾಸಕ ನಾಗರಾಜ್, ಬಿಆರ್ಸಿ ರಶ್ಮಿ, ಜಿಲ್ಲೆಯ ಆರು ತಾಲ್ಲೂಕುಗಳ ಬಿಆರ್ಸಿ ಸಮನ್ವಯಾಧಿಕಾರಿ ಗಳಾದ ರಾಧಮ್ಮ, ಸೋಮೇಶ್, ರಮೇಶ್, ತಾಲ್ಲೂಕುಗಳ ಸಾಕ್ಷರತಾ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್