




ಬಳ್ಳಾರಿ, 14 ಮಾರ್ಚ್ (ಹಿ.ಸ.)
ಆ್ಯಂಕರ್: ವೀರಶೈವ ವಿದ್ಯಾವರ್ಧಕ ಸಂಘದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಾರ್ಮಿಕರು ಮತ್ತು ಅವರ ಮಕ್ಕಳಿಗಾಗಿ ಸಂಸ್ಥೆ ನೀಡುವ `ಡಿಗ್ನಿಟಿ ಇನ್ ಲೇಬರ್ ಸ್ಕಾಲರ್ಶಿಫ್-26’ ವಿತರಿಸಲಾಯಿತು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಅರವಿಂದ ಪಟೇಲ್ ಅವರು, ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಕಾರ್ಮಿಕರ ಜೀವನಮಟ್ಟ ಸುಧಾರಣೆಗಾಗಿ ಅವರ ಮಕ್ಕಳಿಗೆ `ಡಿಗ್ನಿಟಿ ಇನ್ ಲೇಬರ್ ಸ್ಕಾಲರ್ಶಿಫ್-26’ ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಾಜಶೇಖರನ್ ಷಣ್ಮುಗಂ ಅವರು, ನಮ್ಮ ಸಂಸ್ಥೆಯ ಕಾರ್ಮಿಕರು ನಮ್ಮ ಸಂಸ್ಥೆಯ ಭಾಗ. ನಮ್ಮ ಸಂಸ್ಥೆಯ ಕಾರ್ಮಿಕರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಸಿಗುವಂತಾಗಲು `ಡಿಗ್ನಿಟಿ ಇನ್ ಲೇಬರ್ ಸ್ಕಾಲರ್ಶಿಫ್-26’ ನೀಡುತ್ತಿರುವುದು ಶ್ಲಾಘನೀಯ ಎಂದರು.
ಡೀನ್ ಶೈಕ್ಷಣಿಕ ಡಾ. ಹೊಸಳ್ಳಿ ಗಿರೀಶ್, ಡೀನ್ ಪರೀಕ್ಷೆ ಡಾ ಶ್ರೀಪತಿ. ಬಿ ಅವರು, ಶರಣ ಸಂಸ್ಕೃತಿಯಲ್ಲಿ ಕಾಯಕವೇ ಕೈಲಾಸ ಎನ್ನಲಾಗುತ್ತದೆ. ಕಾಯಕದಲ್ಲಿ ಸಮಾನತೆ ಅಗತ್ಯ. ಈ ನಿಟ್ಟಿನಲ್ಲಿ ಕಾಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಡಾ. ಸಾಯಿ ಮಹಾದೇವಿ ಮತ್ತು ಡಾ. ಕೊಟ್ರೇಶ್ ಅವರು ತಮ್ಮ ಅನುಭವಗಳನ್ನು ಹಂಚಿಕೊ0ಡರು. ಶ್ರೀಮತಿ ಸೌಮ್ಯ ಆಲ್ದಳ್ಳಿ ಅವರು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಕೋಶದ ಸಂಯೋಜಕರಾದ ಡಾ. ಶಿವಪ್ರಸಾದ್ ಕೆ.ಎಂ. ಅವರು ವೇದಿಕೆಯ
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್