ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಪ್ರವಾಸದ ಕೊನೆಯ ಹಂತದಲ್ಲಿ ಮಾರಿಷಸ್ ಪ್ರಧಾನಿ ಡಾ. ನವೀನಚಂದ್ರ ರಾಮಗೂಲಂ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
ಸೆಪ್ಟೆಂಬರ್ 9ರಿಂದ ಆರಂಭವಾದ ಎಂಟು ದಿನಗಳ ಭಾರತ ಪ್ರವಾಸದ ಅಂಗವಾಗಿ ಪ್ರಧಾನಿ ರಾಮಗೂಲಂ ಮುಂಬೈ, ವಾರಣಾಸಿ, ಅಯೋಧ್ಯೆ, ಋಷಿಕೇಶ, ಹರಿದ್ವಾರ ಮತ್ತು ತಿರುಪತಿಗೆ ಭೇಟಿ ನೀಡಿದ್ದರು.
ರಾಷ್ಟ್ರಪತಿ ಮುರ್ಮು ಅವರು, ಭಾರತದ “ನೆರೆಹೊರೆಯವರು ಮೊದಲು” ನೀತಿ, “ಸಾಗರ ದೃಷ್ಟಿ” ಹಾಗೂ ಜಾಗತಿಕ ದಕ್ಷಿಣದ ಬದ್ಧತೆಯಲ್ಲಿ ಮಾರಿಷಸ್ಗೆ ವಿಶೇಷ ಸ್ಥಾನವಿದೆ ಎಂದು ಹೇಳಿದರು.
ಭಾರತ–ಮಾರಿಷಸ್ ಸಂಬಂಧಗಳು ಹಂಚಿಕೆಯ ಇತಿಹಾಸ, ಭಾಷೆ, ಸಂಸ್ಕೃತಿ ಮತ್ತು ಮೌಲ್ಯಗಳಲ್ಲಿ ಬೇರೂರಿದ್ದು, ಇತ್ತೀಚೆಗೆ ‘ವರ್ಧಿತ ಕಾರ್ಯತಂತ್ರದ ಪಾಲುದಾರಿಕೆ’ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಇಬ್ಬರು ನಾಯಕರು ಒಪ್ಪಿಕೊಂಡರು.
ರಾಷ್ಟ್ರಪತಿ ಮುರ್ಮು ಅವರು, ಪ್ರಧಾನಿ ರಾಮಗೂಲಂ ಅವರ ವ್ಯಾಪಕ ನಾಯಕತ್ವದ ಅನುಭವ ಮುಂದಿನ ದಿನಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa