ಕೋಲಾರ, ೨೯ ಮಾರ್ಚ್ (ಹಿ.ಸ) ಆಂಕರ್ : ಮಕ್ಕಳು ಸಸಿಗಳಂತೆ, ಮರಗಳನ್ನಾಗಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಅವರಿಗೆ ಶಿಕ್ಷಣ ನೀಡದೆ ವಂಚಿಸಬಾರದು. ಅವರಿಗೆ ಬಾಲ್ಯ ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆ ನೀಡೋಣ. ಹಾಗೆಯೇ ಮಕ್ಕಳಿಂದ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ನ್ಯಾಯಮೂರ್ತಿ ಸುನಿಲ ಎಸ್.ಹೊಸಮನಿ ತಿಳಿಸಿದರು.
ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಕೋಲಾರ ಮತ್ತು ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕೋಲಾರ ಇವರ ಸಹಯೋದಲ್ಲಿ ಬಾಲ್ಯಾವಸ್ಥೆ ಮತ್ತು ಕೀಶೋರವಸ್ಥೆ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಈನೆಲ ಈಜಲ ಕಲಾ ತಂಡದಿAದ ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಸಿ ಮಾತನಾಡಿದರು
ಕೋಲಾರ ಜಿಲ್ಲಾಧ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹೆಚ್ಚು ವಾಸವಿರುವ ಸ್ಥಳಗಳಾದ ಮಾಲೂರು ತಾಲ್ಲೂಕು ಟೇಕಲ್, ಕೆಜಿಎಫ್ ತಾಲ್ಲೂಕು ಕೋರಮಂಡಲ್, ಬಂಗಾರಪೇಟೆಯ ದೊಡ್ಡಎಲುವಳ್ಳಿ, ಮುಳಬಾಗಿಲು ತಾಲ್ಲೂಕು ಕಮ್ಮದಟ್ಟಿ ಕಡೆಯದಾಗಿ ಕೋಲಾರ ಅಮ್ಮೇರಹಳ್ಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹದಿನಾಲ್ಕು ವರ್ಷ ಕಡಿಮೆ ಇರುವ ಮಕ್ಕಳಿಗೆ ಬೇಕರಿ, ಮಾಲ್, ಪ್ಯಾಕ್ಟರಿ, ಹೋಟೆಲ್, ತೋಟ ಹೀಗೆ ಕಷ್ಟಕರವಾದ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮಾಲೀಕರಿಗೂ ಹಾಗೂ ಪೋಷಕರಿಗೂ ಸಹ ಇಪ್ಪತ್ತು ಸಾವಿರದಿಂದ ಐವತ್ತು ಸಾವಿರದವರೆಗೆ ದಂಡ ವಿಧಿಸಲಾಗುವುದು. ಮತ್ತು ಆರು ತಿಂಗಳಿAದ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.
ಬಾಲಕಾರ್ಮಿಕ ಪದ್ದತಿಯನ್ನು ಯಾರಾದರೂ ಕಂಡುಬAದರೆ ೧೦೯೮ ಸಹಾಯವಾಣಿಗೆ ಕರೆ ಮಾಡಿ ತಿಳಿಸುವುದು. ಅಂತಹ ಕರೆ ಮಾಡಿದರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿಟ್ಟು ಮಕ್ಕಳನ್ನು ರಕ್ಷಿಸಿ ಶಾಲೆಗೆ ಸೇರಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಮಿಕ ಅಧಿಕಾರಿ ವರಲಕ್ಷಿö್ಮ ಮಾತನಾಡಿ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಅವರನ್ನು ದುಡಿಮೆಗೆ ಹಚ್ಚಿ ಅವರ ಹಕ್ಕುಗಳನ್ನು ಕಿತ್ತುಕೊಳ್ಳಬಾರದು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹಾಗಾಗಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಮಧ್ಯಾಹ್ನ ಬಿಸಿಯೂಟ, ಹಾಲು, ಮೊಟ್ಟೆ, ಸಮವಸ್ತç, ಪುಸ್ತಕ ಇನ್ನಿತರೆ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಾರೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿದರೆ ಉತ್ತಮವಾದ ಶಿಕ್ಷಣ ಪಡೆಯಬಹುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಈನೆಲ ಈಜಲ ಕಲಾ ತಂಡದಿAದ ಅರಿವು ಗೀತೆಗಳು ಮತ್ತು ಬೀದಿ ನಾಟಕ ನಡೆಯಿತು. ಜಿಲ್ಲಾ ಬಾಲ ಕಾರ್ಮಿಕ ಅಧಿಕಾರಿ ಶೃತಿ, ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ, ಕಲಾವಿದರಾದ ಬಿ. ವೆಂಕಟಾಚಲಪತಿ, ಹೆಚ್.ಶಾಂತಮ್ಮ, ರಶ್ಮಿ.ಸಿ.ಹೆಚ್, ಅಭಿಲಾಷ್, ಎಂ.ಶೈಲಜಾ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಮತ್ತು ಈನೆಲ ಈಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಕೋಲಾರ ತಾಲ್ಲೂಕಿನ ಅಮ್ಮೇರಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ ಬಾಲ್ಯಾವಸ್ಥೆ ಮತ್ತು ಕೀಶೋರವಸ್ಥೆ ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್