1 ಡಿಸೆಂಬರ್(ಹಿ.ಸ): ಆ್ಯಂಕರ್ :
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಲೇ ಇದೆ. ಡಿಸೆಂಬರ್ 4ರವರೆಗೆ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ. ಕರಾವಳಿ ತೀರದಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ವ್ಯಾಪಕ ಮಳೆಯಿಂದ ಈಗಾಗಲೇ ತುಂಗಾಭದ್ರಾ, ಭದ್ರಾ, ಕೆಆರ್ಎಸ್, ಕಬಿನಿ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಮಲಪ್ರಭಾ ಶೇ. 91, ಘಟಪ್ರಭಾ ಶೇ. 86, ಲಿಂಗನಮಕ್ಕಿ ಶೇ. 86, ಹಾರಂಗಿ ಶೇ. 93, ಆಲಮಟ್ಟಿ ಶೇ. 86ರಷ್ಟು ಭರ್ತಿಯಾಗಿವೆ.
ಹಿಂದೂಸ್ತಾನ್ ಸಮಾಚಾರ್