




ಬಳ್ಳಾರಿ, 27 ಜುಲೈ (ಹಿ.ಸ.):
ಆ್ಯಂಕರ್: ಕರ್ನಾಟಕ ರಾಜ್ಯಾದ್ಯಂತ ಸಮೃದ್ಧ ಮಳೆಗಾಗಿ ಬಳ್ಳಾರಿ ಜಿಲ್ಲಾ ಜೆಡಿಎಸ್ ಪಟೇಲ್ ನಗರ ಬಡಾವಣೆಯ ಶ್ರೀ ಸಣ್ಣ ದುರ್ಗಮ್ಮ ದೇವಾಲಯದಲ್ಲಿ ವಿಶೇಷ ವರುಣಯಾಗ ಪೂಜೆ - ಪ್ರಾರ್ಥನೆ, ಹೋಮ ಹಾಗೂ ಹವನಗಳು ಸೋಮವಾರ ನಡೆದವು.
ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದಿದ್ದು, ಸೋಮವಾರ ಬೆಳಗ್ಗೆಯಿಂದ
ವಿಶೇಷ ಪೂಜೆ - ಸಂಕಲ್ಪ, ರುದ್ರಾಭಿಷೇಕ, ಹೋಮ - ಹವನಗಳು ನಡೆದು, ಅನ್ನಸಂತರ್ಪಣೆಯೂ ನಡೆಯಿತು.
ಜೆಡಿಎಸ್ ಪಕ್ಷದ ಮುಖಂಡರು - ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು, ವಿವಿಧ ಸಂಘಟನೆಗಳವರು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್