ಬೇಸಿಗೆ-ಬೆಸುಗೆ ಶಿಬಿರ ಹಾಗೂ ಶೂನ್ಯ ನೆರಳು ದಿನ ಕಾರ್ಯಾಗಾರ ಆಯೋಜನೆ
ಧಾರವಾಡ, 17 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಪಂಚಾಯಿತಿ ಧಾರವಾಡ ಸಭಾಂಗಣದಲ್ಲಿ ಬೇಸಿಗೆ-ಬೆಸುಗೆ ಶಿಬಿರ ಮತ್ತು ಶೂನ್ಯ ನೆರಳು ದಿನದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯಿತಿ ಧಾರವಾಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಧ್ಯಕ್ಷತೆ ವಹಿ
Seminar


ಧಾರವಾಡ, 17 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಪಂಚಾಯಿತಿ ಧಾರವಾಡ ಸಭಾಂಗಣದಲ್ಲಿ ಬೇಸಿಗೆ-ಬೆಸುಗೆ ಶಿಬಿರ ಮತ್ತು ಶೂನ್ಯ ನೆರಳು ದಿನದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರಕ್ಕೆ ಜಿಲ್ಲಾ ಪಂಚಾಯಿತಿ ಧಾರವಾಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಯೋಜನಾ ನಿರ್ದೇಶಕ ಬಿ. ಎಸ್. ರಾಠೋಡ, ನ್ಯಾಷನಲ್ ಇನ್ಸ್ಟಿಟ್ಯೂಟ್ ಸಂಪನ್ಮೂಲ ವ್ಯಕ್ತಿಗಳು, ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಹಾಯಕ ನಿರ್ದೇಶಕರು (ಪಿ.ಆರ್.) ಹಾಗೂ ಜಿಲ್ಲೆಯ ಎಲ್ಲಾ ಅರಿವು ಕೇಂದ್ರಗಳ ಮೇಲ್ವಿಚಾರಕರು ಭಾಗವಹಿಸಿದ್ದರು.

ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿದರು. ಬಳಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ದೇವಿದಾಸ ಪಾಟೀಲ ಅವರು ಕಾರ್ಯಾಗಾರದ ಮಹತ್ವ, ಬೇಸಿಗೆ ಶಿಬಿರಗಳ ಉದ್ದೇಶ ಹಾಗೂ ಶೂನ್ಯ ನೆರಳು ದಿನದ ವೈಜ್ಞಾನಿಕ ಹಿನ್ನೆಲೆಯ ಕುರಿತು ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮವನ್ನು ಸಹಾಯಕ ನಿರ್ದೇಶಕ (ಗ್ರಾ.ಉ.) ತಾ.ಪಂ ಧಾರವಾಡದ ಚಂದ್ರು ಪೂಜಾರ್ ನಿರೂಪಿಸಿದರು. ಐಇಸಿ ಸಂಯೋಜಕ ರಮೇಶ್ ಲಮಾಣಿ ಸ್ವಾಗತಿಸಿದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರಗಳ ಮೇಲ್ವಿಚಾರಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande