
ಬಳ್ಳಾರಿ, 04 ಜನವರಿ (ಹಿ.ಸ.) :
ಆ್ಯಂಕರ್ : ಬ್ಯಾನರ್ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು 45 ಜನರನ್ನು ವಿಚಾರಣೆಗೆ ಒಳಪಡಿಸಿ ಪಂಜಾಬ್ನ ಇಬ್ಬರು ಖಾಸಗಿ ಗನ್ ಮನ್ಗಳು ಸೇರಿ 26 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸತೀಶ್ ರೆಡ್ಡಿಯ ಗನ್ಮೆನ್ಗಳಾಗಿರುವ ಪಂಜಾಬ್ನ ಬಲಜಿತ್ ಸಿಂಗ್ ಮತ್ತು ಗುರುಚರಣ್ ಸಿಂಗ್ ಬಂಧಿತರಲ್ಲಿ ಸೇರಿದ್ದು, ಗುರುಚರಣ್ ಸಿಂಗ್ ಅವರು ಹಾರಿಸಿದ್ದ ಗುಂಡು ಯುವಕ ರಾಜಶೇಖರರೆಡ್ಡಿಯ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್