ರಾಯಚೂರು, 25 ಜೂನ್ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರ 110 ಕೆ.ವಿವಿದ್ಯುತ್ ಉಪ ಕೇಂದ್ರ ಮಲಿಯಾಬಾದ್ ವ್ಯಾಪ್ತಿಗೆ ಬರುವ 11 ಕೆ.ವಿ ಮಾರ್ಗದ ಮೊದಲನೇ ತ್ರೈಮಾಸಿಕ ನಿರ್ವಹಣೆ ಪ್ರಯುಕ್ತ ಜೂನ್ 27ರ ಬೆಳಿಗ್ಗೆ 09 ಗಂಟೆಯಿಂದ ಮಧ್ಯಾಹ್ನ 03 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.
ಅಂದು ಬೆಳಿಗ್ಗೆ ನವೋದಯ ಆಸ್ಪತ್ರೆ, , ಕೆ.ಎಮ್ ಕಾಲೋನಿ, ಆರ್.ಟಿ.ಒ ಸರ್ಕಲ್, ಸತ್ಯನಾಥ ಕಾಲೋನಿ, ಬಿ.ಆರ್.ಬಿ ಸರ್ಕಲ್, ಯರಗೇರಾ ಲೇಔಟ್, ಮಾಣಿಕ್ ನಗರ, ಜಹೀರಾಬಾದ್, ಅಂಬೇಡ್ಕರ್ ಭವನ, ಅಶೋಕ ನಗರ, ಶಶಿಮಹಲ್ ವೃತ್ತ, ಮೋಚಿವಾಡ, ಸರಫ್ ಬಜಾರ್, ಗೀತಾ ಮಂದಿರ, ಬ್ರೇಸ್ತವಾರ ಪೇಟೆ, ಶೆಟ್ಟಿಬಾವಿ ಚೌಕ್, ಪೂರ್ಣಿಮಾ ಇಂಟರ್ ನ್ಯಾಷನಲ್ ಸ್ಕೂಲ್, ಟ್ಯಾಗೋರ್ ಪಾಲಿಟೆಕ್ನಿಕ್ ಕಾಲೇಜ್, ಮಾರುತಿ ನಗರ, ಆಲ್ ಇಂಡಿಯಾ ರೇಡಿಯೋ ಸ್ಟೇಷನ್, ಐ.ಡಿ.ಎಸ್.ಎಮ್.ಟಿ ಲೇಔಟ್, ಜ್ಯೋತಿ ಕಾಲೋನಿ, ಬಶೀರ್ ಬಾಗ್ ಲೇಔಟ್, ಐ.ಬಿ. ಕಾಲೋನಿ, ರಾಧಕೃಷ್ಣ ಕಾಲೋನಿ, ಸೂರ್ಯ ನಗರ, ಗಂಗಾ ಪರಮೇಶ್ವರಿ ಲೇಔಟ್, ನವೀನ್ ಆಸ್ಪತ್ರೆ, ಟೆಲಿಕಾಂ ಕಾಲೋನಿ, ಅಂಬೇಡ್ಕರ್ ಕಾಲೋನಿ, ಆರ್.ಆರ್.ಕಾಲೋನಿ, ರಾಮಲಿಂಗೇಶ್ವರ ಲೇಔಟ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 08532-226386, 08532-231999ಗೆ ಸಂಪರ್ಕಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್