ವಿದ್ಯಾರ್ಥಿಗಳು ಆವಿಷ್ಕಾರಗಳತ್ತ ಕುತೂಹಲಿಗಳಾಗಬೇಕು – ಡಾ. ಯಡವಳ್ಳಿ
ಬಳ್ಳಾರಿ, 26 ಜೂನ್ (ಹಿ.ಸ.) ಆ್ಯಂಕರ್: ಪ್ರಸ್ತುತ ತಾಂತ್ರಿಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನು ಮಾನಸಿಕವಾಗಿ – ಬೌದ್ಧಿಕವಾಗಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಬೇಕಿದೆ ಎಂದು ಬಳ್ಳಾರಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.
ವಿದ್ಯಾರ್ಥಿಗಳು ಆವಿಷ್ಕಾರಗಳತ್ತ ಕುತೂಹಲಿಗಳಾಗಬೇಕು – ಡಾ. ಯಡವಳ್ಳಿ


ಬಳ್ಳಾರಿ, 26 ಜೂನ್ (ಹಿ.ಸ.)

ಆ್ಯಂಕರ್:

ಪ್ರಸ್ತುತ ತಾಂತ್ರಿಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳನ್ನು ಮಾನಸಿಕವಾಗಿ – ಬೌದ್ಧಿಕವಾಗಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜುಗೊಳಿಸಬೇಕಿದೆ ಎಂದು ಬಳ್ಳಾರಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಯಡವಳ್ಳಿ ಬಸವರಾಜ್ ಅವರು ತಿಳಿಸಿದ್ದಾರೆ.

ಬಳ್ಳಾರಿ ಇನ್‍ಸ್ಟಿಟ್ಯೂಟ್ ಆಫ್‍ಟೆಕ್ನಾಲಜಿ ಅಂಡ್ ಮ್ಯಾನೇಜ್‍ಮೆಂಟ್ ಸಂಸ್ಥೆಯಲ್ಲಿ ಗುರುವಾರದಿಂದ ಪ್ರಾರಂಭವಾದ ಐದು ದಿನಗಳ ಫ್ಯಾಕಲ್ಟಿ ಡೆವಲಪ್‍ಮೆಂಟ್ ಪ್ರೋಗ್ರಾಂ(ಎಫ್.ಡಿ.ಪಿ.) `ಕ್ವಾಂಟಂ ಲೀಪ್ ಡ್ರೈವಿಂಗ್ ಇನೋವೇಶನ್ ಇನ್ ದ ಫ್ಯೂಚರ್ ಆಫ್ ಪ್ರೋಗ್ರಾಮಿಂಗ್’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಂತ್ರಜ್ಞಾನದಲ್ಲಿಯ ಆವಿಷ್ಕಾರಗಳತ್ತ ಉಪನ್ಯಾಸಕರು - ಬೋಧಕರು ಕುತೂಹಲ ತೋರಿಸಿ, ವಿದ್ಯಾರ್ಥಿಗಳನ್ನೂ ಹೊಸತನದತ್ತ ಸೆಳೆಯಬೇಕು. ತಂತ್ರಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಂಡಾಗ ಹೊಸತನಕ್ಕೆ ಪ್ರೋತ್ಸಾಹ ಸಿಗಲಿದೆ ಎಂದರು.

ಡಾ. ಬಿ.ಎಂ. ವಿದ್ಯಾವತಿ ಅವರು, ಐಬಿಎಂ, ಗೂಗಲ್ ಸೇರಿ ಅನೇಕ ಕಂಪನಿಗಳು ಸದಾಕಾಲ ಆವಿಷ್ಕಾರಗಳತ್ತ ದೃಷ್ಟಿ ಇರಿಸಿರುತ್ತಾರೆ. ಭಾರತದಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರ ವೇಗವಾಗಿ ನಡೆದಿದ್ದು, ನಮ್ಮ ದೇಶ ವಿಶ್ವದ ಗಮನ ಸೆಳೆದಿದೆ ಎಂದರು.

ಎನ್‍ಐಟಿ ರೈ ಪುರನಡಾ, ಕಪಿಲ್ ಕುಮಾರ್ ಸೋನಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಐಸ್‍ಆರ್‍ಓ ಪೆÇೀಷಿತ ಯೋಜನೆಗಳು ಹಾಗೂ ಭಾರತ ಕೇಂದ್ರೀಕೃತ ಕ್ವಾಂಟಂ ಸಂಶೋಧನಾ ಯೋಜನೆಗಳ ಕುರಿತು ಉಪನ್ಯಾಸ ನೀಡಿದರು.

ಡಾ. ಹೇಮಾವತಿ ಸಿ. ಪುರದ್ ಅವರು ಸ್ವಾಗತಿಸಿದರು. ಡಾ. ರೇಣುಕಾ ಸಾಗರ್ ಅವರು ವಂದನಾರ್ಪಣೆ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande