ಮೌಲ್ಯಯುತ ಜೀವನ ಯಶಸ್ಸಿಗೆ ನಾಂದಿ : ಶ್ರೀಗಳು
ಬಳ್ಳಾರಿ, 26 ಜೂನ್ (ಹಿ.ಸ.) ಆ್ಯಂಕರ್: ಮೌಲ್ಯಯುತ ಜೀವನ ನಡೆಸುವುದರಿಂದ ಯಶಸ್ಸು ಸಾಧ್ಯ ಎಂದು ಶ್ರೀಧರಗಡ್ಡೆಯ ಕೊಟ್ಟೂರುಸ್ವಾಮಿ ಶಾಖಾ ಮಠದ ಮರಿಕೊಟ್ಟೂರು ದೇಶಿಕರು ತಿಳಿಸಿದ್ದಾರೆ. ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ನಡೆದ `ಉತ್ಕರ್ಷ –
ಮೌಲ್ಯಯುತ ಜೀವನ ಯಶಸ್ಸಿಗೆ ನಾಂದಿ : ಶ್ರೀಗಳು


ಮೌಲ್ಯಯುತ ಜೀವನ ಯಶಸ್ಸಿಗೆ ನಾಂದಿ : ಶ್ರೀಗಳು


ಬಳ್ಳಾರಿ, 26 ಜೂನ್ (ಹಿ.ಸ.)

ಆ್ಯಂಕರ್: ಮೌಲ್ಯಯುತ ಜೀವನ ನಡೆಸುವುದರಿಂದ ಯಶಸ್ಸು ಸಾಧ್ಯ ಎಂದು ಶ್ರೀಧರಗಡ್ಡೆಯ ಕೊಟ್ಟೂರುಸ್ವಾಮಿ ಶಾಖಾ ಮಠದ ಮರಿಕೊಟ್ಟೂರು ದೇಶಿಕರು ತಿಳಿಸಿದ್ದಾರೆ.

ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುರುವಾರ ನಡೆದ `ಉತ್ಕರ್ಷ – 25’ನಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಕೇವಲ ಪಠ್ಯಗಳಿಂದ ಜೀವನ ರೂಪುಗೊಳ್ಳುವುದಿಲ್ಲ. ಮೌಲ್ಯಯುತ ಜೀವನ-ಆದರ್ಶಗಳ ಬದುಕು, ಒಳ್ಳೆಯ ಚಿಂತನೆಗಳಿಂದ ವ್ಯಕ್ತಿ ಮತ್ತು ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಕಾರಣ ವಿದ್ಯಾರ್ಥಿಗಳು ಮತ್ತು ಪೋಷಕರು ಜೀವನದಲ್ಲಿ ಮೌಲ್ಯ, ಆದರ್ಶ ಮತ್ತು ಒಳ್ಳೆಯ ಚಿಂತನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ, ಪ್ರತಿ ವಿದ್ಯಾರ್ಥಿಯು ಸಮಾಜಕ್ಕೆ ಮಾದರಿಯಾಗಬೇಕು. ಭವಿಷ್ಯಕ್ಕೆ ಕೊಡುಗೆ ನೀಡಬೇಕು. ದೇಶಕ್ಕಾಗಿ - ಹೆತ್ತವರಿಗಾಗಿ ಮತ್ತು ಸಮಾಜಕ್ಕಾಗಿ ಹಿತವನ್ನು ಸಾಧಿಸಬೇಕು ಎಂದರು.

ಕಾಲೇಜಿನ ಅಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ಪ್ರಭುಲಿಂಗ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ತಾಂತ್ರಿಕ ಶಿಕ್ಷಣದ ಮಹತ್ವ ಮತ್ತು ಕಾಲೇಜಿನ ಧ್ಯೇಯೋದ್ದೇಶಗಳನ್ನು ವಿವರಿಸಿ, ಪ್ರತಿ ಒಬ್ಬ ವಿದ್ಯಾರ್ಥಿಗೆ ಒಂದು ಖಚಿತವಾದ ಉದ್ಯೋಗ ಎನ್ನುವ ಗುರಿಯನ್ನು ಹೊಂದಲಾಗಿದೆ. ನೂತನವಾಗಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪುಗೊಳ್ಳಲಿ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಖಜಾಂಚಿ ಬೈಲುವದ್ದಿಗೇರಿ ಎರ್ರಿಸ್ವಾಮಿ, ಜಂಟಿ ಕಾರ್ಯದರ್ಶಿಗಳಾದ ಯಾಳ್ಪಿ ಮೇಟಿ ಪಂಪನಗೌಡ, ವಿವಿಧ ಕಂಪನಿಗಳ ಅಧಿಕಾರಿಗಳಾದ ಡಾ. ವೈ.ಎನ್. ದೊಡ್ಡಮನಿ, ಹೆಚ್. ನಾಗೇಶ್, ಎಂ. ಆದರ್ಶ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಬಾಣಾಪುರ ಜಡಿಸಿದ್ದನಗೌಡ, ಚಂದ್ರಶೇಖರ ಪಾಶ್ಚಾಪುರ್ ಅತಿಥಿಗಳಾಗಿದ್ದರು.

ಕಾಲೇಜಿನ ಪ್ರಾಂಶುಪಾಲ ಬಿ. ಶ್ರೀಶೈಲಗೌಡ ಅವರು ಸ್ವಾಗತಿಸಿದರು. ರವೀಂದ್ರ ಹಿರೇಮಠ ಮತ್ತು ಶ್ರೀಮತಿ ಉಮ್ಮೆ ಸಲ್ಮಾ ಅವರು ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಕುಮಾರಿ ಸುಮಾ ಅವರು ವಂದನಾರ್ಪನೆ ಸಲ್ಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande