ಬಳ್ಳಾರಿ : ಹೊಸ ಮತ್ತು ಹಳೆಯ ರೈಲ್ವೆ ಮಾರ್ಗಗಳ ಪ್ರಾರಂಭಕ್ಕೆ ಆಗ್ರಹ
ಬಳ್ಳಾರಿ, 25 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರ ರೈಲ್ವೆ ನಿಲ್ದಾಣದ ಅಭಿವೃದ್ಧಿ, ಹೊಸ ಮಾರ್ಗಗಳ ಪ್ರಾರಂಭ ಮತ್ತು ಸ್ಥಗಿತ ಆಗಿರುವ ಮಾರ್ಗಗಳ ಪುನರಾರಂಭ ಹಾಗೂ ಬಳ್ಳಾರಿ ಬೈಪಾಸ್ ರೈಲ್ವೆ ನಿಲ್ದಾಣಕ್ಕೆ ಕೋರಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಹುಬ್ಬಳ್ಳಿ ರೈಲ್ವೇ ವಿಭಾಗದ ಮ್ಯಾನ
ಬಳ್ಳಾರಿ : ಹೊಸ ಮತ್ತು ಹಳೆಯ ರೈಲ್ವೆ ಮಾರ್ಗಗಳ ಪ್ರಾರಂಭಕ್ಕೆ ಆಗ್ರಹ


ಬಳ್ಳಾರಿ : ಹೊಸ ಮತ್ತು ಹಳೆಯ ರೈಲ್ವೆ ಮಾರ್ಗಗಳ ಪ್ರಾರಂಭಕ್ಕೆ ಆಗ್ರಹ


ಬಳ್ಳಾರಿ : ಹೊಸ ಮತ್ತು ಹಳೆಯ ರೈಲ್ವೆ ಮಾರ್ಗಗಳ ಪ್ರಾರಂಭಕ್ಕೆ ಆಗ್ರಹ


ಬಳ್ಳಾರಿ, 25 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರ ರೈಲ್ವೆ ನಿಲ್ದಾಣದ ಅಭಿವೃದ್ಧಿ, ಹೊಸ ಮಾರ್ಗಗಳ ಪ್ರಾರಂಭ ಮತ್ತು ಸ್ಥಗಿತ ಆಗಿರುವ ಮಾರ್ಗಗಳ ಪುನರಾರಂಭ ಹಾಗೂ ಬಳ್ಳಾರಿ ಬೈಪಾಸ್ ರೈಲ್ವೆ ನಿಲ್ದಾಣಕ್ಕೆ ಕೋರಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಹುಬ್ಬಳ್ಳಿ ರೈಲ್ವೇ ವಿಭಾಗದ ಮ್ಯಾನೇಜರ್ ಶ್ರೀಮತಿ ಮೀನಾ ಬೇಲಾ ಅವರನ್ನು ಬಳ್ಳಾರಿಯಲ್ಲಿ ಬುಧವಾರ ಭೇಟಿ ಮಾಡಿ, ಮನವಿ ಸಲ್ಲಿಸಿತು.

ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಅವರ ನೇತೃತ್ವದಲ್ಲಿ ನಿಯೋಗವು ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿ, ನಿಲುಗಡೆ ಆಗಿರುವ ಬೆಳಗಾಂ - ಸಿಕಂದರಾಬಾದ್ - ಮುನುಗುರು ಹಾಗೂ ಶಿವಮೊಗ್ಗ - ಚೆನ್ನೈ ಎಕ್ಸ್‍ಪ್ರೆಸ್ ರೈಲು ಪುನರಾರಂಭ, ಬಳ್ಳಾರಿಯಲ್ಲಿ ಹೆಚ್ಚುವರಿ 2 ಪ್ಲಾಟ್‍ಫಾರಂಗಳ ನಿರ್ಮಾಣ, ಐದು ಮೇಲ್ಸೇತುವೆಗಳ ನಿರ್ಮಾಣದ ಕುರಿತು ಮನವಿ ಸಲ್ಲಿಸಲಾಯಿತು.

ಕೆ.ಎಂ. ಮಹೇಶ್ವರಸ್ವಾಮಿ ಅವರು, ಬಳ್ಳಾರಿಯಿಂದ ನಸುಕಿನಲ್ಲಿ ಪ್ರಯಾಣ ಪ್ರಾರಂಭಿಸಿ ಬೆಂಗಳೂರು ತಲುಪಲು ಇಂಟರ್ಸಿಟಿ ಅಥವಾ `ಒಂದೇ ಭಾರತ್' ಅಥವಾ ಜನಶತಾಬ್ದಿ ರೈಲು ಪ್ರಾರಂಭಿಸಬೇಕು. ಸಿಂಧನೂರು - ಹುಬ್ಬಳ್ಳಿ - ಬೆಂಗಳೂರು ರೈಲುನ್ನು ಬಳ್ಳಾರಿ - ಗುಂತಕಲ್ ಮಾರ್ಗದಲ್ಲಿ ಸಂಚರಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಎಚ್.ಆರ್.ಜಿ ವೃತ್ತದಲ್ಲಿ ರೈಲ್ವೆ ಮೇಲ್ಸೇತುವೆ ಅಗಲೀಕರಣ, ಗುಗ್ಗರಹಟ್ಟಿಯ ದುರ್ಗಮ್ಮ ದೇವಸ್ಥಾನ ದ ಬಳಿ, ಬೆಂಗಳೂರು ರಸ್ತೆಯ ಮಾರೆಮ್ಮ ಗುಡಿ ಹಾಗೂ ದರೋಜಿಯ ಬಳಿ ಮೇಲ್ಸೇತುವೆಗಳ ಅಗತ್ಯವಿದ್ದು, ರೈಲ್ವೆ ತ್ವರಿತವಾಗಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ಹುಬ್ಬಳ್ಳಿ ರೈಲ್ವೆ ಡಿಆರ್‍ಯುಸಿಸಿ ಸದಸ್ಯರಾದ ಸೊಂತ ಗಿರಿಧರ್, ಕೆ.ಎಂ. ಕೊಟ್ರೇಶ್, ಗೋಪಾಲಕೃಷ್ಣ, ವೀರಶೈವ ವಿದ್ಯಾವರ್ಧಕ ಸಂಘದ ಶ್ರೀಮತಿ ಅಲ್ಲಂ ಸುಮಂಗಳಮ್ಮ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ, ಕ್ರಿಯಾ ಸಮಿತಿಯ ಸದಸ್ಯರಾದ ಬಿ.ಎಸ್. ಬಸವರಾಜ ಹೆಚ್.ಕೆ. ಗೌರಿಶಂಕರ, ಕೋಳೂರು ಚಂದ್ರಶೇಖರಗೌಡ, ಬಿ.ಎಂ. ಬಿ.ಎಂ. ಎರ‍್ರಿಸ್ವಾಮಿ, ಮಧುಸೂದನ ಗೌಡ, ಸೂರ್ಯಪ್ರಕಾಶ್, ರಘು ಹಾಗೂ ಸುಮಾರೆಡ್ಡಿ ಇನ್ನಿತರರು ಈ ಸಂದರ್ಭದಲ್ಲಿ ನಿಯೋಗದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande