ಬಳ್ಳಾರಿ, 25 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದ ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಪಾಡುವ ಕಾರಣ ನಿಧಾನಗತಿಯಲ್ಲಿ ಕಾಮಗಾರಿ ನಡೆದಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ 16ನೇ ವಾರ್ಡಿನ ಶ್ರೀರಾಂಪುರ ಕಾಲೋನಿಗೆ ಭೇಟಿ ನೀಡಿ, ಸುದ್ದಿಗಾರರ ಜೊತೆ ಮಾತನಾಡಿದರು.
ಗಡಿಗೆ ಚನ್ನಪ್ಪ ವೃತ್ತವು ನಗರದ ಹೃದಯ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ ಅವರು, ಸಿಎಂ-ಡಿಸಿಎಂ ಅವರಿಂದ ಉದ್ಘಾಟನೆ ಮಾಡಿಸಲಾಗುತ್ತದೆ ಎಂದರು.
ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ಎಂ. ರಾಜೇಶ್ವರಿ, ಮುಖಂಡರಾದ ಜಬ್ಬಾರ್, ನೂರ್ ಮೊಹಮ್ಮದ್, ಸುಬ್ಬರಾಯುಡು, ಮಂಜುಳಾ, ಹೊನ್ನಪ್ಪ, ಹಗರಿ ಗೋವಿಂದ, ಚಂಪಾ ಚವ್ಹಾಣ್, ಯಶೋಧಾ, ಬಾಲರಾಜ್, ನಾಗರಾಜ, ಅಭಿರಾಂ, ರಾಮಚರಣ್, ರಾಕಿ, ದೇವಣ್ಣ, ಯಲ್ಲಪ್ಪ, ವಿನೋದ್, ಅರವಿಂದ ಮೊದಲಾದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್