ನಕಲಿ ವೈದ್ಯರ ಹಾವಳಿ ಕಡಿವಾಣಕ್ಕೆ ಕಾರ್ಯಪಡೆ ಸಮಿತಿ ರಚನೆ
ರಾಯಚೂರು, 18 ಜೂನ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ನಕಲಿ ವೈದ್ಯರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಜೂನ್ 12ರಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ತಪಾಸಣಾ ಹಾಗೂ ಮೇಲ್ವಿಚಾರಣಾ ಕಾರ್ಯಪಡೆ ಸಮಿತಿಗಳನ್ನು
ನಕಲಿ ವೈದ್ಯರ ಹಾವಳಿ ಕಡಿವಾಣಕ್ಕೆ ಕಾರ್ಯಪಡೆ ಸಮಿತಿ ರಚನೆ


ರಾಯಚೂರು, 18 ಜೂನ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ನಕಲಿ ವೈದ್ಯರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಜೂನ್ 12ರಂದು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ತಪಾಸಣಾ ಹಾಗೂ ಮೇಲ್ವಿಚಾರಣಾ ಕಾರ್ಯಪಡೆ ಸಮಿತಿಗಳನ್ನು ರಚಿಸಿ ಕ್ರಮ ವಹಿಸಿದ್ದಾರೆ.

ವೈದ್ಯಕೀಯ ಪದವಿ ಇಲ್ಲದೆ ವೈದ್ಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ದು ಹಾಗೂ ವೈದ್ಯಕೀಯ ಪದವಿ ಹೊಂದಿರುವ ವೈದ್ಯರು ಕೆಪಿಎಂ ಕಾಯ್ದೆ ಅಡಿಯಲ್ಲಿ ನೋಂದಣಿ ಆಗದೆ ಕ್ಲೀನಿಕ್ / ಪಾಲಿ ಕ್ಲಿಣಿಕ್/ ನರ್ಸಿಂಗ್ ಹೋಂ/ಆಸ್ಪತ್ರೆ/ ಲ್ಯಾಬ್ / ದಂತ ವೈದ್ಯರು ವೃತ್ತಿ ಅಭ್ಯಾಸ ನಡೆಸುತ್ತಿದ್ದಲ್ಲಿ ಅಂತಹವ ವಿರುದ್ದ ಕಾರ್ಯಪಡೆಯು ನಿರ್ಧಾಕ್ಷಿಣ್ಯಾವಾಗಿ ಕ್ರಮಕೈಗೊಳ್ಳಲಿದೆ.

ಕೆಪಿಎಂ ಕಾಯ್ದೆಯಡಿ ನೋಂದಾಯಿಸಿದ ಪದ್ದತಿಯಲ್ಲೇ ವೈದ್ಯಕೀಯ ವೃತ್ತಿ ನಡೆಸುವುದನ್ನು ಬಿಟ್ಟು ಇತರೆ ಯಾವುದೆ ಪದ್ದತಿಯ್ಲಲಿ ವೈದ್ಯವೃತ್ತಿ ನಡೆಸುತ್ತಿದ್ದಲ್ಲಿ ಅಂತಹವ ವಿರುದ್ದ ಕೆಪಿಎಂಇ ಕಾಯ್ದೆ ಅಡಿಯಲ್ಲಿ 50 ಸಾವಿರ ದಂಢ ಮತ್ತು 3 ವರ್ಷ ಜೈಲು ಶಿಕ್ಷಾರ್ಹ ಅಪರಾದ ವಾಗಿರುತ್ತದೆ.

ತಾಲೂಕು ಸಮಿತಿ ರಚನೆ: ತಾಲೂಕು ತಪಾಸಣಾ ಹಾಗೂ ಮೇಲ್ವಿಚಾರಣೆ ಕಾರ್ಯಪಡೆ ಸಮಿತಿಗೆ ತಹಸೀಲ್ದಾರರು ಅಧ್ಯಕ್ಷರಾಗಿದ್ದು, ತಾಲೂಕು ಆರೋಗ್ಯಾಧಿಕಾರಿಗಳು ಕಾರ್ಯದರ್ಶಿಯಾಗಿರುತ್ತಾರೆ. ಐಎಂಎದ ತಾಲೂಕಾಧ್ಯಕ್ಷರು, ಎಎಫ್‍ಐನ ತಾಲೂಕಾಧ್ಯಕ್ಷರು, ತಾಲೂಕು ಪೆÇೀಲಿಸ್ ವೃತ್ತ ನಿರೀಕ್ಷಕರು ಈ ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆಗಳ ನಿವಾರಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆಗಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande