ಬೆಂಗಳೂರು, 18 ಜೂನ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಲೋಕಾಯುಕ್ತ ಬೆಂಗಳೂರು ನಗರ ಪೋಲಿಸ್ ಠಾಣಾ ಮೊ.ಸಂ. 31/2025 u/s 7(a) PC act 1988 ಟ್ರ್ಯಾಪ್ ಪ್ರಕರಣದಲ್ಲಿ ದಿನಾಂಕ 17ರಂದು ಪಿರ್ಯಾದುದಾರರಾದ ಹೇಮಂತ್ ಜಿ.ಎಂ. ಕಾಂಟ್ರಕ್ಟರ್ ಅವರಿಗೆ ಸಂಬಂಧಿಸಿದ ಬಿಲ್ ಅನ್ನು ಪಾರ್ ವರ್ಡ್ ಮಾಡು ಸಲುವಾಗಿ ಆರೋಪಿತರಾದ ಹೆಚ್.ವಿ. ಯರಪ್ಪ ರೆಡ್ಡಿ, ಕಾರ್ಯಾಪಾಲಕ ಅಭಿಯಂತರರು, ಸಿ.ವಿ. ರಾಮನ್ ನಗರ ವಿಭಾಗ, ಬಿಬಿಎಂಪಿ, ಬೆಂಗಳೂರು ಅವರು 10 ಲಕ್ಷ ರೂಪಾಯಿ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟು ಈ ದಿನ ನಡೆಸಿದ ಟ್ರ್ಯಾಪ್ ಕಾರ್ಯಾಚರಣೆ ಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ.
ಟ್ರ್ಯಾಪ್ ಮೊತ್ತ 10 ಲಕ್ಷ ಹಣವನ್ನು ಮುಂದಿನ ಕ್ರಮಕ್ಕಾಗಿ ಅಮಾನತ್ತು ಪಡಿಸಿ ಕೊಂಡು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಿದೆ. ಬಿ.ಎಲ್. ಶ್ರೀನಿವಾಸಮೂರ್ತಿ, ಡಿವೈಎಸ್ಪಿ-6 ರವರ ನೇತೃತ್ವದಲ್ಲಿ ಹಾಗೂ ತನಿಖಾಧಿಕಾರಿಯವರಾದ ಹೆಚ್.ಎಂ.ಆನಂದ್ ಪಿ.ಐ, ಗೋವಿಂದರಾಜು ಪಿ.ಐ ಹಾಗೂ ಸಿಬ್ಬಂದಿ ಯವರಿಂದ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿರುತ್ತದೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ