ಗದಗ, 19 ಜೂನ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲಾ ರೋಗವಾಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಡಾ. ಹೆಚ್.ಎಲ್ ಗಿರಡ್ಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಡಾ.ಅಮೃತ ಹರಿದಾಸ ಮತ್ತು ಆರೋಗ್ಯ ನಿರಿಕ್ಷಣಾಧಿಕಾರಿಗಳಾದ ಅಜಯಕುಮಾರವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ವತಿಯಿಂದ ಲಕ್ಕುಂಡಿ ಗ್ರಾಮದಲ್ಲಿ ಮಲೇರಿಯಾ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು.
ಸಮೂಹ ರಕ್ತ ಲೇಪನ ಸಂಗ್ರಹ ಮಾಡಲಾಯಿತು
ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು ಅವುಗಳನ್ನು ನಿಯಂತ್ರಿಸಲು ಮತ್ತು ಲಾರ್ವಾ ಸಮೀಕ್ಷೆ ಕಾರ್ಯವನ್ನು ಮಾಡಿ ಲಾರ್ವಾ ನಾಶಪಡಿಸಲಾಯಿತು ಈ ಬಗ್ಗೆ ಸಾರ್ವಜನಿಕರಲ್ಲಿ ಮನೆ ಮನೆ ಬೇಟಿ ಮಾಡಿ ಸಮೂಹ ರಕ್ತಲೇಪನವನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲಕ್ಕುಂಡಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವೈ ಎನ್ ಕಡೆಮನಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸಿದ್ದಪ್ಪ ಎನ್ ಲಿಂಗದಾಳ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಹುಲಿಗೆಮ್ಮ ಮಾದರ್ ರೇಶ್ಮಾ ಹೊಸೂರ ಸಮುದಾಯ ಆರೋಗ್ಯ ಅಧಿಕಾರಿಗಳಾದ ಅಕ್ಷತಾ ಈಳಗೇರ ಮತ್ತು ಆಶಾ ಕಾರ್ಯಕರ್ತೆಯರು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೀರಿನ ಸಂಗ್ರಹದ ನಳದ ಪಿಟ್ ತಗ್ಗು ಪ್ರದೇಶದಲ್ಲಿ ಮತ್ತು ಬ್ಯಾರಲ್ ಇನ್ನೀತರ ಕಡೆ ಕಂಡು ಬಂದಂತಹ ಲಾರ್ವ ನಾಶಪಡಿಸಲಾಯಿತು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸಲಾಯಿತು, ಡೆಂಗ್ಯೂ, ಚಿಕನ್ ಗುನ್ಯ ಮಲೇರಿಯಾ ರೋಗಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು ಮುಂಜಾಗೃತೆಗಾಗಿ : ನೀರಿನ ಸಂಗ್ರಹದ ತೊಟ್ಟಿಗಳನ್ನ ವಾರದಲ್ಲಿ ಎರಡು ಸಲ ಸ್ವಚ್ಛತೆ ಮಾಡುವುದು,ಮತ್ತು ಮುಚ್ಚಿಡುವುದು ಪ್ರತಿದಿನ ಸಂಜೆ : ಬೆವಿನಸೊಪ್ಪಿನಿಂದ ಧೂಮಿಕರಣ ಮಾಡಿರಿ , ನೀರು ನಿಲ್ಲದಂತೆ ಮಾಡಿರಿ ನಿಂತ ನೀರಿಗೆ ಸುಟ್ಟಾಯಿಲ್ ಹಾಕಿರಿ .ಸೊಳ್ಳೆ ಪರದಿ ಉಪಯೋಗಿಸುವದು, ಘನತಾಜ್ಯಗಳಾದ : ಟೆಂಗಿನ ಚಿಪ್ಪು ,ಟೈಯರ್ ದಲ್ಲಿ ಮಳೆ ನೀರು ಶೇಖರಣೆ ಆಗದಂತೆ ನೋಡಿಕೊಳ್ಳುವುದು, ಮನೆಯ ಸುತ್ತಮುತ್ತ ಸ್ವಚ್ಛತೆಗೆ ಕಾಪಾಡಿಕೊಳ್ಳುವುದು ಯಾವುದೇ ಜ್ವರ ಇರಲಿ ರಕ್ತ ಪರೀಕ್ಷೆಯನ್ನು ತಪ್ಪದೆ ಮಾಡಿಸಿಕೊಳ್ಳಿರಿ ಇವೇಲ್ಲ ಆರೋಗ್ಯ ಇಲಾಖೆಯ ಮಾಹಿತಿಯನ್ನು ಪರಿಪಾಸಿ ಯಾವುದೇ ರೋಗಗಳ ಬರದಂತೆ ಸಾರ್ವಜನಿಕರು ಆರೋಗ್ಯ ಇಲಾಖೆಯ ಜೊತೆ ಕೈಜೊಡಿಸಿರಿ ಎಂದು ಮನೆ ಮನೆ ಬೇಟಿ ಮಾಡಿ ಜಾಗೃತಿಯನ್ನು ಮೂಡಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / Lalita MP