ಅಂಚೆ ಕಚೇರಿ ವ್ಯವಹಾರ ವಹಿವಾಟು ಸ್ಥಗಿತ : ಅಂಚೆ ಅಧೀಕ್ಷಕ ರಮೇಶ ಮಡಿವಾಳರ
ಗದಗ, 19 ಜೂನ್ (ಹಿ.ಸ.) : ಆ್ಯಂಕರ್ : ಭಾರತೀಯ ಅಂಚೆ ಇಲಾಖೆ ಆದೇಶದಂತೆ ಜೂ.21 ರಂದು ಶನಿವಾರ ಗದಗ ಪ್ರಧಾನ ಕಚೇರಿ ವ್ಯಾಪ್ತಿಗೆ ಬರುವ ಎಲ್ಲಾ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಾಂಶ(ಐ.ಟಿ.2.0) ಅಳವಡಿಕೆ ಜಾರಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಜೂ.21 ರಂದು ಗದಗ ಪ್ರಧಾನ ಅಂಚೆ
ಪೋಟೋ


ಗದಗ, 19 ಜೂನ್ (ಹಿ.ಸ.) :

ಆ್ಯಂಕರ್ : ಭಾರತೀಯ ಅಂಚೆ ಇಲಾಖೆ ಆದೇಶದಂತೆ ಜೂ.21 ರಂದು ಶನಿವಾರ ಗದಗ ಪ್ರಧಾನ ಕಚೇರಿ ವ್ಯಾಪ್ತಿಗೆ ಬರುವ ಎಲ್ಲಾ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಹೊಸ ತಂತ್ರಾಂಶ(ಐ.ಟಿ.2.0) ಅಳವಡಿಕೆ ಜಾರಿಯಾಗುತ್ತಿದೆ.

ಈ ಹಿನ್ನಲೆಯಲ್ಲಿ ಜೂ.21 ರಂದು ಗದಗ ಪ್ರಧಾನ ಅಂಚೆ ಕಚೇರಿ ವ್ಯಾಪ್ತಿಗೆ ಬರುವ ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಎಲ್ಲ ರೀತಿಯ ವ್ಯವಹಾರ, ವಹಿವಾಟು ಸ್ಥಗಿತಗೊಳಲಿವೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳ ಪ್ರಕಟಣೆ ಮೂಲಕ ತಿಳಿದ್ದಾರೆ.

ಗದಗ ವಿಭಾಗೀಯ ಅಂಚೆ ವ್ಯಾಪ್ತಿಗೆ ಬರುವ ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ, ಡಂಬಳ, ಬೆಳಹಟ್ಟಿ, ಮುಳಗುಂದ, ಲಕ್ಕುಂಡಿ, ಬೆಳವಣಕಿ, ಲಕ್ಷ್ಮೇಶ್ವರ, ಗದಗ ನಗರ, ಗಜೇಂದ್ರಗಡ, ಲಕ್ಕುಂಡಿ, ಬೆಟಗೇರಿ, ಉಪ ಅಂಚೆ ಕಚೇರಿ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಜೂ.21 ರಂದು ಐಟಿ 2.0 ಅಡಿಯಲ್ಲಿ ಹೊಸ ತಂತ್ರಾಂಶ ಅಳವಡಿಕೆ ಸಲುವಾಗಿ ಯಾವುದೇ ವ್ಯವಹಾರ ವಹಿವಾಟು ಇರುವದಿಲ್ಲ.

ಹಾಗಾಗಿ ಅಂಚೆ ಕಚೇರಿ ಗ್ರಾಹಕರು ಸಹಕರಿಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಪ್ರಕಟಣೆ ಮೂಲಕ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande