ಸಾರ್ವಜನಿಕರಿಗೆ ಬಿಡಾಡಿ ದನ, ಹಂದಿ, ನಾಯಿ ತೊಂದರೆ : ಮಾಲೀಕರಿಗೆ ಎಚ್ಚರಿಕೆ
ರಾಯಚೂರು, 18 ಜೂನ್ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮುಖ್ಯ ರಸ್ತೆಗಳಲ್ಲಿ ದನಗಳು, ಹಂದಿಗಳು ಹಾಗೂ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದೆಯಾಗುತ್ತಿದೆ. ಕೆಲವೊಮ್ಮೆ ಇವುಗಳಿಂದಾಗಿ ರಸ್ತೆ ಅಪಘಾತಗಳು
ಸಾರ್ವಜನಿಕರಿಗೆ ಬಿಡಾಡಿ ದನ, ಹಂದಿ, ನಾಯಿ ತೊಂದರೆ : ಮಾಲೀಕರಿಗೆ ಎಚ್ಚರಿಕೆ


ರಾಯಚೂರು, 18 ಜೂನ್ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮುಖ್ಯ ರಸ್ತೆಗಳಲ್ಲಿ ದನಗಳು, ಹಂದಿಗಳು ಹಾಗೂ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಇದರಿಂದಾಗಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದೆಯಾಗುತ್ತಿದೆ. ಕೆಲವೊಮ್ಮೆ ಇವುಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ದನಗಳು, ಹಂದಿಗಳು, ನಾಯಿಗಳಿಗೆ ಸಂಬಂಧಿಸಿದ ಮಾಲೀಕರು ಸಾಕಾಣಿಕೆದಾರರು ತಮ್ಮ ಸಾಕು ಪ್ರಾಣಿಗಳನ್ನು ಜಾನುವಾರುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡದೇ ತಮ್ಮ ವಶಕ್ಕೆ ತೆಗೆದುಕೊಂಡು ಅವುಗಳನ್ನು ಪಾಲನೆ ಮಾಡಬೇಕು.

3 ದಿನಗಳ ಗಡುವು: ದನಗಳು, ಹಂದಿಗಳು ಹಾಗೂ ನಾಯಿಗಳಿಗೆ ಸಂಬಂಧಿಸಿದ ಮಾಲೀಕರು ಹಾಗೂ ಸಾಕಣೆದಾರರು ಈ ಪತ್ರಿಕಾ ಪ್ರಕಟಣೆಯ ದಿನಾಂಕದಿಂದ ಮೂರು ದಿನಗಳೊಳಗಾಗಿ ದನಗಳು, ಹಂದಿಗಳು ಹಾಗೂ ನಾಯಿಗಳನ್ನು ತಮ್ಮ ಸುಪರ್ದಿಗೆ ಪಡೆಯಬೇಕು.

ಹಾಗೊಂದು ವೇಳೆ ದನಗಳು, ಹಂದಿಗಳು ಹಾಗೂ ನಾಯಿಗಳಿಂದ ಸಂಭವಿಸಿದ ಅಥವಾ ಸಂಭವಿಸಬಹುದಾದ ಅನಾಹುತ/ ಅಪಘಾತಗಳಿಗೆ ಆಯಾ ಮಾಲೀಕರು ಹಾಗೂ ಸಾಕಣೆದಾರರನ್ನೇ ಹೊಣೆಯಾಗಿಸಲಾಗುವುದು. ಆದ್ದರಿಂದ ದನಗಳು, ಹಂದಿಗಳು ಹಾಗೂ ನಾಯಿಗಳನ್ನು ನಗರದಿಂದ ಹೊರವಲಯದ ಸ್ವಂತ ಒಡೆತನದ ಜಮೀನಿನಲ್ಲಿ ಸಾಕಣೆ ಮಾಡಬೇಕು. ಇದಕ್ಕೆ ತಪ್ಪಿದಲ್ಲಿ ರಾಯಚೂರ ಮಹಾನಗರ ಪಾಲಿಕೆಯಿಂದ ನಗರದಿಂದ ಹೊರಕ್ಕೆ ಸಾಗಣೆ ಮಾಡಿ ಸಾಗಣೆಯ ವೆಚ್ಚವನ್ನು ಮಾಲೀಕರು ಸಾಕಣೆದಾರರಿಂದ ಪಡೆಯಲಾಗುವುದು. ಸಾಗಣೆ ವೇಳೆ ಯಾವುದೇ ಅಪಘಾತ ಸಂಭವಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಮತ್ತು ಮಹಾನಗರ ಪಾಲಿಕೆಯ ಕಾಯ್ದೆಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಉಪ ಆಯುಕ್ತರು ತಿಳಿಸಿದ್ದಾರೆ.

3 ದಿನಗಳು ಮೀರಿದರೆ ದಂಡ: ಹೋರಿ, ಆಕಳು ಮತ್ತು ಎಮ್ಮೆಗಳಿಗೆ 3 ದಿನಕ್ಕೆ ವಿಧಿಸುವ ದಂಡ 600 ರೂ. ನಂತರ ವಿಧಿಸುವ ದಂಡ ಪ್ರತಿ ದಿನಕ್ಕೆ 300 ರೂ.ಗಳು. ಕ್ಯಾಟಲ್ (ಜಾನುವಾರು) 3 ದಿನಕ್ಕೆ ವಿಧಿಸುವ ದಂಡ 300 ರೂ. ನಂತರ ವಿಧಿಸುವ ದಂಡ ಪ್ರತಿ ದಿನಕ್ಕೆ 50 ರೂ.ಗಳು., ಕುದುರೆಗಳಿಗೆ 3 ದಿನಕ್ಕೆ ವಿಧಿಸುವ ದಂಡ 300 ರೂ. ನಂತರ ವಿಧಿಸುವ ದಂಡ ಪ್ರತಿ ದಿನಕ್ಕೆ 50 ರೂ.ಗಳು., ಹಂದಿ ಮತ್ತು ಕತ್ತೆಗೆ 3 ದಿನಕ್ಕೆ ವಿಧಿಸುವ ದಂಡ 300 ರೂ. ನಂತರ ವಿಧಿಸುವ ದಂಡ ಪ್ರತಿ ದಿನಕ್ಕೆ 25 ರೂ.ಗಳು. ಮೇಕೆ ಮತ್ತು ಕುರಿಗೆ 3 ದಿನಕ್ಕೆ ವಿಧಿಸುವ ದಂಡ 25 ರೂ. ನಂತರ ವಿಧಿಸುವ ದಂಡ ಪ್ರತಿ ದಿನಕ್ಕೆ 25 ರೂ.ಗಳನ್ನು ವಿಧಿಸಲಾಗುತ್ತಿದೆ ಎಂದು ಉಪ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande