ಪಾದಚಾರಿಗಳಿಗೆ ಅನುಕೂಲ ಮಾಡಿದ ಪೊಲೀಸರು
ಗದಗ, 18 ಜೂನ್ (ಹಿ.ಸ.) : ಆ್ಯಂಕರ್ : ಗದಗ ನಗರದ ಹಳೇ ಬಸ್ ನಿಲ್ದಾಣವಾಗಿರುವ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದ ಪಕ್ಕದ ಮಾಳ ಶೆಟ್ಟಿ ಸರ್ಕಲ್ ನಿಂದ ಟಾಂಗಾ ಕೂಟ ಸರ್ಕಲ್ ವರೆಗೆ ಹಾದು ಹೋಗುವ ಸ್ಟೇಷನ್ ರಸ್ತೆಗೆ ಸಂಪರ್ಕಿಸುವ ಪ್ರಮುಖ ರಸ್ತೆಯು ಬಹಳಷ್ಟು ದಿನಗಳಿಂದ ಜನಸಂಚಾರಕ್ಕೆ ಅನುವು ಇಲ್ಲದಂತಹ ಸ್ಥಿತಿಗ
ಪೋಟೋ


ಗದಗ, 18 ಜೂನ್ (ಹಿ.ಸ.) :

ಆ್ಯಂಕರ್ : ಗದಗ ನಗರದ ಹಳೇ ಬಸ್ ನಿಲ್ದಾಣವಾಗಿರುವ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದ ಪಕ್ಕದ ಮಾಳ ಶೆಟ್ಟಿ ಸರ್ಕಲ್ ನಿಂದ ಟಾಂಗಾ ಕೂಟ ಸರ್ಕಲ್ ವರೆಗೆ ಹಾದು ಹೋಗುವ ಸ್ಟೇಷನ್ ರಸ್ತೆಗೆ ಸಂಪರ್ಕಿಸುವ ಪ್ರಮುಖ ರಸ್ತೆಯು ಬಹಳಷ್ಟು ದಿನಗಳಿಂದ ಜನಸಂಚಾರಕ್ಕೆ ಅನುವು ಇಲ್ಲದಂತಹ ಸ್ಥಿತಿಗೆ ತಲುಪಿತ್ತು.

ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಹಾಗೂ ನಗರವಾಸಿಗಳು ಈ ರಸ್ತೆಗೆ ತಮ್ಮ ವ್ಯಾಪಾರ ವಹಿವಾಟಿಗೆಂದು ಆಗಮಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ಹಲವಾರು ಬೀದಿ ವ್ಯಾಪಾರಿಗಳು ತಾವು ಬಳಸುವ ತಳ್ಳುವ ಗಾಡಿಗಳೊಂದಿಗೆ ರಸ್ತೆಯದ್ಯಾಂತ ಎರೆಡೂ ಬದಿಗಳಲ್ಲಿ ವಸ್ತುಗಳು, ಟೀ ಬುಥ್‌, ಹಣ್ಣು ತರಕಾರಿ ಅಂಗಡಿಗಳನ್ನು ಸ್ಥಾಪಿಸಿ ಸಾರ್ವಜನಿಕ ರಸ್ತೆಯನ್ನೆ ಅತಿಕ್ರಮಣ ಮಾಡಿಕೊಂಡಿದ್ದರು.

ಹಲವಾರು ಬೀದಿ ವ್ಯಾಪಾರಿಗಳು ತಮ್ಮ ತಳ್ಳು ಗಾಡಿಗಳಲ್ಲಿ ಹಣ್ಣು, ತರಕಾರಿ, ಆಹಾರ ಪದಾರ್ಥಗಳು ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ರಸ್ತೆಯ ಮಧ್ಯಭಾಗದಲ್ಲಿಯೇ ಇಟ್ಟಿದ್ದರು. ಇದರಿಂದ ಪಾದಚಾರಿ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಬಹಳ ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಈ ದಾರಿಯಲ್ಲಿ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಿದ್ದವು.

ಈ ಪರಿಣಾಮವಾಗಿ ನಡೆದುಹೋಗಬೇಕಾದ ಪಾದಚಾರಿ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ,ತೊಂದರೆ ಆಗುತ್ತಿತ್ತು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಗಿಜಿಗುಡುವ ದಾರಿಯ ಮಧ್ಯೆ ತಮ್ಮ ಜೀವದ ಹಂಗು ತೊರೆದು ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆಯನ್ನು ಕಳೆದ ಕೆಲವು ತಿಂಗಳಿಂದ ಸಾರ್ವಜನಿಕರು ಗದಗ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸ್ಥಳೀಯರು ಹಾಗೂ ಹತ್ತಿರದ ಅಂಗಡಿ ಮಾಲೀಕರು ಸಹ ಈ ತೊಂದರೆಯಿಂದ ಬೇಸತ್ತು, ಕ್ರಮ ಕೈಗೊಳ್ಳುವಂತೆ ಸರಣಿ ಮನವಿಗಳನ್ನು ಸಲ್ಲಿಸಿದ್ದರು.

ಕೊನೆಗೂ ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಗದಗ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಇಂದು ಕಾರ್ಯಪ್ರವೃತ್ತರಾಗಿ, ರಸ್ತೆ ಅತಿಕ್ರಮಣ ಮಾಡಿದ ಬೀದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ರಸ್ತೆಯ ಎರೆಡೂ ಬದಿಗಳಲ್ಲಿ ವೈಟ್ ಟ್ಯಾಪಿಂಗ್ ಲೈನ್ ಹಾಕುವ ಮೂಲಕ, ಬಿಳಿ ರೇಖೆ ಒಳಗಡೆ ಬರದಂತೆ,ವ್ಯಾಪಾರಿಗಳು ತಮ್ಮ ವ್ಯಾಪಾರ ಮಾಡಬೇಕು ಎಂದು ಪೊಲೀಸರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಈ ಕ್ರಮದಲ್ಲಿ ಯಾವುದೇ ರೀತಿ ಸಾರಿಗೆ ನಿಯಮ ಉಲ್ಲಂಘನೆ ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವದು ಎಂದು ಸಂಚಾರಿ ಪೊಲೀಸರು ಸ್ಥಳದಲ್ಲೇ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಿ ಜಾಗೃತಿ ಮೂಡಿಸಿದ್ದಾರೆ.

ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರು ಸಂಚಾರ ಪೊಲೀಸರ ಈ ಕೆಲಸ ನಮಗೆ ಬಹಳ ಸಂತೋಷ ತಂದಿದೆ. ಕಾರಣ ಈ ರಸ್ತೆಯಲ್ಲಿ ಸಂಚರಿಸುವದೆಂದರೆ ಹರಸಾಹಸದ ಕೆಲಸವಾಗಿತ್ತು. ಆದರೆ ಇದೀಗ ಶಿಸ್ತುಬದ್ಧವಾಗಿ ವ್ಯಾಪಾರದ ರಸ್ತೆಯಾಗಿದೆ. ವಾಹನ ಸವಾರರಿಗೂ ಹಾಗೂ ಪಾದಚಾರಿಗಳಿಗೂ ಬಹಳಷ್ಟು ಅನುಕೂಲವಾಗಿದೆ ಎಂದು ಸಂಚಾರಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇಂತಹ ಕ್ರಮಗಳೇ ನಗರ ಶಿಸ್ತಿಗೆ ನಾಂದಿ! ಎಂಬ ಅಭಿಪ್ರಾಯ ಹರಡಿದೆ. ಗದಗ ಸಂಚಾರಿ ಪೊಲೀಸ್ ಠಾಣೆಯ ಈ ಕಾರ್ಯಾಚರಣೆಯು ಇತರೆ ಪ್ರದೇಶಗಳಲ್ಲಿ ಸಹ ಪ್ರೇರಣೆ ನೀಡಲಿ ಎಂಬುದು ನಮ್ಮ ಆಶಯ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande