ಮಾವು ಬೆಳೆಗಾಗರಿಗೆ ಬೆಂಬಲ ಬೆಲೆ ಘೋಷಣೆ ಮಾಡಲು ಮುಖ್ಯ ಮಂತ್ರಿಗಳಿಗೆ ಮನವಿ
ಮಾವು ಬೆಳೆಗಾಗರಿಗೆ ಬೆಂಬಲ ಬೆಲೆ ಘೋಷಣೆ ಮಾಡಲು ಮುಖ್ಯ ಮಂತ್ರಿಗಳಿಗೆ ಮನವಿ
ಕೋಲಾರ ಜಿಲ್ಲೆ ಶ್ರೀನಿವಾಸಪುರ ಮಾವು ಬೆಳೆಗಾರರಿಗೆ ಬೆಂಬಲ ಬಲೆ ಘೋಷಣೆ ಮಾಡಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮನವಿ ಸಲ್ಲಿಸಿದರು.


ಕೋಲಾರ, ೧೮ ಜೂನ್ (ಹಿ.ಸ):

ಆ್ಯಂಕರ್ : ಮಾವು ಬೆಳೆಗಾರರ ನೆರವಿಗೆ ನಿಂತಿರುವ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಬೆಂಬಲ ಬೆಲೆ ಘೋಷಣೆಗೆ ಮನವಿ ಮಾಡಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ಅಗತ್ಯ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದರು.

ಈ ನಡುವೆ ರೈತರ ನೆರವಿಗೆ ಬರುವಂತೆ ಸರ್ಕಾರಕ್ಕೆ ಮನವಿ ಮಾಡಿದ ರಮೇಶ್‌ಕುಮಾರ್, ಮಾವಿನ ಜ್ಯೂಸ್‌ಅನ್ನು ಈ ಅವಧಿಯಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೊಂದು ದಿನ ಹಾಗೂ ಮುಜರಾಯಿ ದೇವಾಲಯಗಳಲ್ಲಿ ಭಕ್ತರಿಗೆ ಜ್ಯೂಸ್ ವಿತರಣೆಗೆ ಕ್ರಮವಹಿಸಿ ಎಂದು ಮನವಿ ಮಾಡಿದ್ದಾರೆ.

ಇದಾದ ನಂತರ ವಿಧಾನಸೌಧದಲ್ಲಿ ಸಿಎಂ ಸಂಪುಟ ಸಭೆಯಲ್ಲಿ ಚರ್ಚಿಸಿ ಬೆಂಬಲಬೆಲೆ ಕುರಿತ ಘೋಷಣೆ ಮಾಡುವ ಸುಳಿವು ನೀಡಿ ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಕೈಗೊಂಡ ತೀರ್ಮಾನವನ್ನು ಸಂಪುಟಕ್ಕೆ ತಿಳಿಸಲು ಸೂಚಿಸಿದ್ದು ನಂತರ ಕೃಷ್ಣಬೈರೇಗೌಡರು ಸಭೆ ನಡೆಸಿದರು.

ಈ ನಡುವೆ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಮತ್ತು. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಮಾವು ಬೆಳೆಗಾರರ ಸಂಕಷ್ವ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಆಂಧ್ರದಲ್ಲೂ ಇದ್ದು, ತಿರುಪತಿ, ತಿರುಮಲ ದೇವಾಲಯದಲ್ಲಿ ಸರದಿ ಸಾಲಿನಲ್ಲಿ ದರ್ಶನಕ್ಕೆ ಸಾಗುವ ಭಕ್ತರಿಗೆ ನೀಡುತ್ತಿರುವ ಹಾಲು, ಪ್ರಸಾದದಲ್ಲಿ ಮಾವಿನ ಜ್ಯೂಸ್ ನೀಡುವ ಕುರಿತು ಚಿಂತನೆ ನಡೆಸಿ ಬೆಳೆಗಾರರ ನೆರವಿಗೆ ಧಾವಿಸಲು ಮನವಿ ಮಾಡಿದರು.

ಕರ್ನಾಟಕ ಮತ್ತು ಆಂಧ್ರಪ್ರದೇಶದ ಮಾವು ಬೆಳೆಗಾರರು ಈ ವರ್ಷ ಸಂಕಷ್ಟದಲ್ಲಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದ್ದು ಕೊರೋನಾ ನಂತರದ ಬೆಲೆ ಕುಸಿತ ಹಾಗೂ ಇದೀಗ ಇರಾನ್-ಇರಾಕ್ ಯುದ್ದ, ರಷ್ಯಾ-ಉಕ್ರೇನ್ ಯುದ್ದಗಳಿಂದಾಗಿ ಪಾಶ್ವಿಮಾತ್ಯ ರಾಷ್ಟçಗಳಿಗೆ ಅದರಲ್ಲೂ ಸೌಧಿ ಅರೇಬಿಯಾ ಮತ್ತಿತರ ದೇಶಗಳಿಗೆ ಸರಬರಾಜಾಗುತ್ತಿದ್ದ ಕರ್ನಾಟಕದ ಮಾವಿನ ಜ್ಯೂಸ್‌ಗೆ ಕಡಿವಾಣ ಬಿದ್ದಿರುವುದೇ ಈ ಬೆಲೆ ಕುಸಿತಕ್ಕೆ ಮೂಲ ಕಾರಣ ಎಂದು ತಿಳಿಸಿದರು.

ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕೂಡಲೇ ರೈತರ ನೆರವಿಗೆ ಧಾವಿಸಬೇಕಾಗಿದೆ, ಮಾವಿಗೆ ಮಾತ್ರವಲ್ಲ ಇಂದು ಮಾವಿನ ಜ್ಯೂಸ್‌ಗೂ ಬೆಂಬಲ ಬೆಲೆ ನೀಡುವುದು ಮಾತ್ರವಲ್ಲ ರಫ್ತಿಗೆ ಉತ್ತೇಜನ ಕ್ರಮಗಳನ್ನು ಕೈಗೊಂಡು ಮಾವು ಬೆಳೆಗಾರರು ಮತ್ತು ರೈತರ ಕೈಹಿಡಯಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಸೇರಿದಂತೆ ಸಿಎಂ ಅಪರ ಮುಖ್ಯ ಕಾರ್ಯದರ್ಶಿ ಅಂಜುAಫರ್ವೇಜ್, ಹಣಕಾಸು ಕಾರ್ಯದರ್ಶಿ ರಿತೇಶ್‌ಕುಮಾರ್,ಮನೀಷ್ ಮೌದ್ಗಿಲ್ ಮತ್ತಿತರರಿದ್ದರು.

ಚಿತ್ರ : ಕೋಲಾರ ಜಿಲ್ಲೆ ಶ್ರೀನಿವಾಸಪುರ ಮಾವು ಬೆಳೆಗಾರರಿಗೆ ಬೆಂಬಲ ಬಲೆ ಘೋಷಣೆ ಮಾಡಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಮನವಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande