ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿ : ಬಿಜೆಪಿ
ಬೆಂಗಳೂರು, 18 ಜೂನ್ (ಹಿ.ಸ.): ಆ್ಯಂಕರ್ : ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಸಂದೇಶ ಬಿಡುಗಡೆ ಮಾಡಿರುವ ಬಿಜೆಪಿ, ಭ್ರಷ್ಟ‌ ಕಾಂಗ್ರೆಸ್ ಆಡಳಿತವು ರಾಜ್ಯವನ್ನು ಕುಲಗೆಡಿಸಿ ಬಿಟ್ಟಿದೆ. ಶಾಲೆ ಆರಂಭವಾಗಿ 20 ದಿನ ಕ
ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿ : ಬಿಜೆಪಿ


ಬೆಂಗಳೂರು, 18 ಜೂನ್ (ಹಿ.ಸ.):

ಆ್ಯಂಕರ್ : ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಸಂದೇಶ ಬಿಡುಗಡೆ ಮಾಡಿರುವ ಬಿಜೆಪಿ, ಭ್ರಷ್ಟ‌ ಕಾಂಗ್ರೆಸ್ ಆಡಳಿತವು ರಾಜ್ಯವನ್ನು ಕುಲಗೆಡಿಸಿ ಬಿಟ್ಟಿದೆ. ಶಾಲೆ ಆರಂಭವಾಗಿ 20 ದಿನ ಕಳೆದರೂ ಸಿದ್ದರಾಮಯ್ಯ ಸರ್ಕಾರ ಶೂ, ಸಾಕ್ಸ್‌ ಖರೀದಿಗೆ ಹಣ ಬಿಡುಗಡೆ ಮಾಡದೆ ಉದ್ಧಟತನ ತೋರುತ್ತಿದೆ ಎಂದು ಆರೋಪಿಸಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ, ಸರ್ಕಾರಿ ಶಾಲೆಗಳಲ್ಲಿ ಓದುವವರನ್ನು ಏಕೆ ಇಷ್ಟೊಂದು ತಾತ್ಸಾರ ಮನೋಭಾವನೆಯಲ್ಲಿ ನೋಡುತ್ತೀರಿ. ಬಡವರ ಮಕ್ಕಳು ಹರಿದ ಶೂ ಧರಿಸಿ ಓಡಾಡುವುದನ್ನು ನೋಡುವುದು ನಿಮಗೆ ಮನಸ್ಸಿಗೆ ಆನಂದ ತರುತ್ತದೆಯೇ ಎಂದು ಪ್ರಶ್ನಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande