ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಕೇಂದ್ರ ಸ್ಥಳ ; ಯಶವಂತರಾಜ್ ನಾಗಿರೆಡ್ಡಿ
ಬಳ್ಳಾರಿ, 18 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯು ಕನ್ನಡ ನಾಡಿನ ಏಕೀಕರಣಕ್ಕೆ ಮುನ್ನುಡಿಯನ್ನು ಬರೆದ ಕೇಂದ್ರಸ್ಥಳ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ. ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನ
ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಕೇಂದ್ರಸ್ಥಳ ; ಯಶವಂತರಾಜ್ ನಾಗಿರೆಡ್ಡಿ


ಬಳ್ಳಾರಿ, 18 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯು ಕನ್ನಡ ನಾಡಿನ ಏಕೀಕರಣಕ್ಕೆ ಮುನ್ನುಡಿಯನ್ನು ಬರೆದ ಕೇಂದ್ರಸ್ಥಳ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ.

ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಂಸ್ಕøತಿಕ ಪರಿಷತ್ತು ಆಯೋಜಿಸಿದ್ದ `ಕನ್ನಡ ಅಭಿಮಾನ - ಅಭಿಯಾನ'ವನ್ನು ಉದ್ಘಾಟಿಸಿ, ಹುತಾತ್ಮ ಪೈಲ್ವಾನ್ ರಂಜಾನ್ ಸಾಬ್ ಅವರ ಜೀವನ ಕೃತಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಅನೇಕ ಮಹನೀಯರ ಹೋರಾಟ ಮತ್ತು ತ್ಯಾಗಗಳ ಕಾರಣ ಬಳ್ಳಾರಿ ಕರ್ನಾಟಕದಲ್ಲಿದೆ. ಕನ್ನಡದ ಕಟ್ಟಾಳು ಪೈಲ್ವಾನ್ ರಂಜಾನ್ ಸಾಬ್ ಅವರ ಮೇಲೆ ದುಷ್ಕರ್ಮಿಗಳು ಆಸಿಡ್ ತುಂಬಿದ ಬಲ್ಬನ್ನು ಎಸೆದು ಪರಾರಿಯಾಗಿದ್ದ ಕಾರಣ

ಅವರು ಆಸ್ಪತ್ರೆಯಲ್ಲಿ ಜೀವನ್ಮರಣದ ಸಂಕಷ್ಟದಿಂದ ನರಳಿ ಹುತಾತ್ಮರಾದರು ಎಂದರು.

ಹುತಾತ್ಮ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಅವರ ಸಾವು ಕನ್ನಡಿಗರ ಅಂತಃಶಕ್ತಿಯನ್ನು ಅಲುಗಾಡಿಸಿ, ಒಗ್ಗೂಡಿಸಿತ್ತು. ಈ ಐತಿಹಾಸಿಕ ಕಥೆಯನ್ನು ಲೇಖಕ ಸಿದ್ದರಾಮ ಕಲ್ಮಠ ಅವರು ಅಕ್ಷರಗಳಲ್ಲಿ ಹಿಡಿದಿಟ್ಟು, ಓದುಗರ ಮನಮುಟ್ಟುವಂತೆ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ ಎಂದರು.

ಲೇಖಕ ಸಿದ್ದರಾಮ ಕಲ್ಮಠ ಅವರು, ಪುಸ್ತಕ ಮತ್ತು ಇತಿಹಾಸ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಕೊಡುಗೆ ನೀಡುತ್ತವೆ. ಯುವ ಪೀಳಿಗೆಯು ತಮ್ಮ ತಮ್ಮ ಸ್ಥಳ ಮಹತ್ವ, ಹೋರಾಟಗಾರರು - ಇತಿಹಾಸಗಾರರು ಮತ್ತು ಸಾಧಕರ ಮಾಹಿತಿಯನ್ನು ಪಡೆದು, ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಜೆ.ಕೆ.ಪೌಂಡೇಶನ್ ಅಧ್ಯಕ್ಷ ಜೋಳದರಾಶಿ ತಿಮ್ಮಪ್ಪ ಅವರು, ಯುವಜನತೆಯು ನಮ್ಮ ನಾಡು - ನುಡಿ, ನೆಲ - ಜಲದ ಕುರಿತು ತಿಳಿದು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.

ಬಳ್ಳಾರಿ ಮಹಾನಗರ ಪಾಲಿಕೆಯ ಸಭಾನಾಯಕ ಪಿ. ಗಾದೆಪ್ಪ ಅವರು, ಉತ್ತಮ ಪುಸ್ತಕಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದರು.

ವಕೀಲರಾದ ಬಾದಾಮಿ ಶಿವಲಿಂಗ ನಾಯಕ ಅವರು, ನೇಪಥ್ಯಕ್ಕೆ ಸೇರಿರುವ ಪೈಲ್ವಾನ್ ಪಿಂಜಾರ್ ರಂಜಾನ್‍ಸಾಬ್ ಅವರ ಹೋರಾಟ, ಛಲ ಮತ್ತು ನಾಡು - ನುಡಿಯ ಮೇಲಿನ ಅಭಿಮಾನ ಸದಾ ಸ್ಮರಣೀಯ ಎಂದರು.

ಸತ್ಯಂ ಕಾಲೇಜಿನ ಪ್ರಾಂಶುಪಾಲ ಡಾ. ಅಶ್ವರಾಮು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಶಿಕ್ಷಣಾರ್ಥಿ ಸುಷ್ಮಾ ಅವರು ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಶಾರದಾ ಅವರು ಕಾರ್ಯಕ್ರಮ ನಿರೂಪಿಸಿದರು.

ಅಧ್ಯಾಪಕ ಆಲಂ ಭಾಷಾ ಅವರು ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande