ಕೋಲಾರ, ೧೮ ಜೂನ್ (ಹಿ.ಸ) :
ಆ್ಯಂಕರ್ : ಮಾವು ಬೆಳೆಗಾರರ ಸಬಲೀಕರಣಕ್ಕೆ ಶ್ರೀನಿವಾಸಪುರದಲ್ಲಿ ಸಂಸ್ಕರಣಾ ಘಟಕ ತೆರೆಯಬೇಕು. ಕೂಡಲೇ ಮಾವು ಬೆಳೆಗಾರರಿಗೆ ಟನ್ ಗೆ ಕನಿಷ್ಠ ೧೦ ಸಾವಿರ ಬೆಂಬಲಬೆಲೆ ಘೋಷಣೆ ಮಾಡಬೇಕು, ಕೇಂದ್ರದಲ್ಲಿ ಮಾವು ಬೆಳೆಗೆ ಜಿಎಸ್ಟಿ ರದ್ದು ಮಾಡಬೇಕು ಎಂದು ಮಾಜಿ ಮುಖ್ಯ ಮಂತ್ರಿ ಸದಾನಂದಗೌಡ ಒತ್ತಾಯಿಸಿದರು.
ಶ್ರೀನಿವಾಸಪುರ ತಾಲ್ಲೂಕಿನ ಗ್ರಾಮೀಣ ಮಟ್ಟದ ಮಾವಿನ ತೋಟಗಳಲ್ಲಿ ಬೆಳೆ ವೀಕ್ಷಿಸಿ ಪಟ್ಟಣದ ಎಪಿಎಂಸಿ ಪ್ರಾಂಗಣಕ್ಕೆ ಭೇಟಿ ನೀಡಿ ಮಾತನಾಡಿದ ಮಾಜಿ ಮುಖ್ಯ ಮಂತ್ರಿ ಸದಾನಂದಗೌಡ ಈ ಬಾರಿ ಮಾವು ಬೆಳೆಗಾರರಿಗೆ ಆರ್ಥಿಕ ಸಂಕಷ್ಠ ಎದುರಾಗಿದೆ. ಸರ್ಕಾರ ಮದ್ಯ ಪ್ರವೇಶಿಸಿ ರೈತರಿಗೆ ಬೆಂಬಲ ಬೆಲೆ ನೀಡುವುದರಲ್ಲಿ ತಪ್ಪೇನು ಇಲ್ಲ. ಕೂಡಲೇ ಘೋಷಣೆ ಮಾಡಬಹುದು, ಈಗಿನ ಮುಖ್ಯ ಮಂತ್ರಿಗಳು ಯಾಕೆ ತಡ ಮಾಡುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ, ಪಕ್ಕದ ಆಂದ್ರ ಪ್ರದೇಶದಲ್ಲಿ ಮಾವು ಬೆಳೆಗಾರರು ಕಷ್ಟಕ್ಕೆ ಇಳಿಯುವ ಮುನ್ನವೇ ಖಾಸಗೀ ಕಂಪನಿಯವರಿ0ದ ಟನ್ಗೆ ೮ ಸಾವಿರ ರೂ ಬೆಲೆ ನಿಗದಿ ಪಡಿಸಿ ಸರ್ಕಾರ ೪ ಸಾವಿರ ರೂ ಬೆಂಬಲ ಬೆಲೆ ಘೋಶಿಸಲಾಗಿದೆ ಒಟ್ಟಾರೆ ರೈತರಿಗೆ ಟನ್ ಗೆ ೧೨ ಸಾವಿರ ಸಿಗುತ್ತಿದೆ ಎಂದು ತಿಳಿಸಿದರು.
ಈ ಜಿಲ್ಲೆಯಲ್ಲಿ ಅತಿ ಶೀಗ್ರವಾಗಿ ಪಲ್ಪ್ ಪ್ಯಾಕ್ಟರಿ ನಿರ್ಮಾಣ ಮಾಡಬೇಕು. ಇಲ್ಲವಾದರೆ ಖಾಸಗೀಯವರಿಗಾದರು ಸಬ್ಸಿಡಿ ಕೊಟ್ಟು ಪ್ಯಾಕ್ಟರಿ ನಿರ್ಮಿಸಲು ಅನುಮತಿ ನೀಡಬೇಕು, ಮಾವು ಬೆಳೆಗಾರರಿಗೆ ಕನಿಷ್ಠ ಟನ್ ಗೆ ೧೦ ಸಾವಿರ ಬೆಂಬಲಬೆಲೆ ನೀಡಿದರೆ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಇಲ್ಲವಾದರೆ ಊರು ಬಿಟ್ಟು ವಲಸೆ ಹೋಗುವ ಸಂಭವ ಜಾಸ್ತಿಇದೆ ರೈತರನ್ನು ಉಳಿಸಿಕೊಂಡರೆ ನಮ್ಮ ದೇಶ ಉಳಿಯುತ್ತದೆ ಇಲ್ಲವಾದರೆ ನಾವು ಬೀದಿಗೆ ಬೀಳುತ್ತೇವೆ, ನಮ್ಮ ಮಾವು ಬೆಳೆಗೆ ಜಿಎಸ್ಟಿ ತಪ್ಪಿಸಬೇಕು ಇದಕ್ಕೆ ನಾವು ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯ ಬಿಜೆಪಿ ವತಿಯಿಂದ ಮನವಿ ಪತ್ರ ನೀಡುತ್ತೇವೆ ಎಂದು ತಿಳಿಸಿದರು.
ಎಂ.ಎಲ್.ಸಿ ವೈ.ಎ ನಾರಾಯಣಸ್ವಾಮಿ ಮಾತನಾಡಿ ಈ ಬಾರಿ ಬೆಲೆ ೨೦% ಆಗಿರುವುದರಿಂದ ಬೆಲೆ ಜಾಸ್ತಿಆಗುತ್ತೆ ಎಂದು ಭಾವಿಸಿದ್ದೆವು ಆದರೆ ಬೆಲೆ ಕುಸಿತವಾಯಿತು, ರೈತರು ಒಂದು ಟನ್ ಮಾವಿನಕಾಯಿ ಬೆಳೆಯಲು ವರ್ಷಕ್ಕೆ ೫೯೬೫ ರೂ ಖರ್ಚುಆಗುತ್ತದೆ ಎಂದು ಕೃಷೀ ಬೆಲೆನಿಗದಿ ಆಯೋಗದವರು ಹೇಳಿರುವ ಮಾತು, ಇದನ್ನು ಮಾರುಕಟ್ಟೆಗೆ ತರುವಷ್ಟರಲ್ಲಿ ೧೦ ಸಾವಿರ ರೂಗಳು ಆಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲೇ ೪ ಸಾವಿರಕ್ಕೆ ಕೇಳುವವರಿಲ್ಲದಂತಾಗಿದೆ ಹಾಗಾಗಿ ರೈತರ ಪರಿಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಅವರು ಮಾಡಿರುವ ಸಾಲಗಳಿಗೆ ಯಾರುಹೋಣೆ ಎಂದು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅದ್ಯಕ್ಷ ವೇಣುಗೋಪಾಲ್, ವೆಂಕಟಮುನಿಯಪ್ಪ, ತಾಲ್ಲೂಕು ಅದ್ಯಕ್ಷ ರೋಣೂರು ಚಂದ್ರಶೇಖರ್, ಲP್ಪ್ಷö್ಮಣ್ ಗೌಡ, ಮಾದಿಗ ದಂಡೋರಾ ವೆಂಕಟೇಶ್, ವಕೀಲ ನಾಗರಾಜ್, ನಾಗಬೂಷಣ್, ನಾಗೇಶ್, ನಾರಾಯಣರೆಡ್ಡಿ, ನಾರಾಯಣಸ್ವಾಮಿ ಮುಂತಾದ ಬಿಜೆಪಿ ಮುಖಂಡರು ಹಾಗು ರೈತರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಮಾವಿನ ತೋಟಗಳಿಗೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡರು ಭೇಟಿ ನೀಡಿ ಪರಿಶೀಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್