ಕೊಪ್ಪಳ, 12 ಜೂನ್ (ಹಿ.ಸ.) :
ಆ್ಯಂಕರ್ : ಶರಣರ ತತ್ವ ಅದರ್ಶಗಳನ್ನು ಪಾಲನೆ ಮಾಡುವ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಅಚಾರ ವಿಚಾರಗಳ ಬಗ್ಗೆ ಅರಿವು ಮೂಡಿಸಿ ಸಮಾಜವನ್ನು ಜಾಗೃತಿಗೊಳಿಸಿ ಎಂದು ಮೈನಳ್ಳಿ-ಬಿಕನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ತಿಳಿಸಿದ್ದಾರೆ.
ನಗರದ ಶ್ರೀ ರೇಣುಕಾಚಾರ್ಯ ಭವನದಲ್ಲಿ ಹುಣ್ಣಿಮೆಯ ಅರಿವು-ಆಚಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರು ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಉತ್ತಮ ಸಂಸ್ಕೃತಿ ಮತ್ತು ಧರ್ಮವನ್ನು ಪಾಲನೆ ಮಾಡುವಂತೆ ಹೇಳಿ ಹೋಗಿದ್ದಾರೆ ಇಂಥಹ ಶರಣರ ಪರಂಪರೆಯನ್ನು ಹೊಂದಿರುವ ನಾವೆಲ್ಲರು ಅವರ ತತ್ವ ಅದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಬೇಕಾಗಿದೆ ಎಂದರು.
ಈ ಬಾರಿ ಹುಣ್ಣಿಮೆಯ ಅರಿವು-ಆಚಾರ ಕಾರ್ಯಕ್ರಮದಲ್ಲಿ ತೊಗಲು ಬೊಂಬೆ ಆಟ ಕಲಾವಿದರನ್ನು ಕರೆಸಿ, ಪರ್ದಶನ ಏರ್ಪಡಿಸಿ ಅವರನ್ನು ಪೆÇ್ರೀತ್ಸಾಹಿಸುವ ಕಾರ್ಯಮಾಡಿದ್ದಕ್ಕೆ ಖುಷಿಯ ವಿಚಾರವಾಗಿದೆ ಎಂದರು.
ಇದೇ ವೇಳೆ ಬೇವನಹಳ್ಳಿ ರಂಗ ಗಂಗೋತ್ರಿ ಕಲತಂಡ ಕಲಾವಿದರಾದ ಸುರೇಂದ್ರಸ್ವಾಮಿ ಅವರು 'ಒಂದೇ ಭಾರತ ಕನಸು' ಎಂಬ ತೊಗಲು ಬೊಂಬೆ ಆಟದ ಪ್ರಕಾರವನ್ನು ಪ್ರರ್ದಶಿಸಿದರು. ನಂತರ ಮಹೇಶ್ವರಸ್ವಾಮಿ ಶೇಖರಯ್ಯ ಮಳಿಮಠ ಅವರು ಪ್ರಸಾದ ವ್ಯವಸ್ಥೆ ಮಾಡಿದ್ದರು.
ಕಾರ್ಯಕ್ರಮದಲ್ಲಿ ಜಂಗಮ ಸಮಾಜ ಅಧ್ಯಕ್ಷರಾದ ಹಂಪಯ್ಯ ಮೆತಗಲ್ಲ, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಬಸಯ್ಯ ಹಿರೇಮಠ, ಮುಖಂಡರಾದ ನೀಲಕಂಠಯ್ಯ ಹಿರೇಮಠ, ಶಿವಕುಮಾರ್ ಹಿರೇಮಠ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಪಂಪಯ್ಯ ಹಿರೇಮಠ, ನಾಗಭೂಷಣ ಸಾಲಿಮಠ, ಮರಿಶಾಂತವೀರ, ಲಲಿತಾ ಹಿರೇಮಠ, ಜಯಶ್ರೀ ಹಿರೇಮಠ, ಸವಿತಾ ಹಿರೇಮಠ, ಲಲಿತಾ ಸಾಲಿಮಠ ಸೇರಿದಂತೆ ಇನ್ನೂ ಅನೇಕ ಜಂಗಮ ಸಮಾಜದವರು ಇದ್ದರು.
ಕಾರ್ಯಕ್ರಮದ ಮೊದಲಿಗೆ ಶಿವಲೀಲಾ ಪ್ರಾರ್ಥನೆಗೈದರು, ಸಿದ್ದು ಹಿರೇಮಠ ಸ್ವಾಗತಿಸಿ, ಜಗದೀಶ್ ಹಿರೇಮಠ ನಿರೂಪಿಸಿ, ಕಾರ್ಯದರ್ಶಿ ಬಸಯ್ಯ ಹಿರೇಮಠ ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್