ಅಧಿಕಾರಿಗಳು ನೀಡುತ್ತಿದ್ದ ಲಂಚದಲ್ಲಿ ವರ್ತೂರ್ ಪ್ರಕಾಶ್ ಜೀವನ ನಡೆಸುತ್ತಿದ್ದರು : ಕೊತ್ತೂರು ಮಂಜುನಾಥ್
ಅಧಿಕಾರಿಗಳು ನೀಡುತ್ತಿದ್ದ ಲಂಚದಲ್ಲಿ ವರ್ತೂರ್ ಪ್ರಕಾಶ್ ಜೀವನ ನಡೆಸುತ್ತಿದ್ದರು : ಕೊತ್ತೂರು ಮಂಜುನಾಥ್ ವಾಗ್ದಾಳಿ
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಶುಕ್ರವಾರ ಶಾಸಕ ಕೊತ್ತೂರು ಮಂಜುನಾಥ್ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.


ಕೋಲಾರ, ೧೩ ಜೂನ್ (ಹಿ.ಸ) :

ಆ್ಯಂಕರ್ : ಮಾಜಿ ಸಚಿವ ವರ್ತೂರ್ ಪ್ರಕಾಶ್‌ಗೆ ತಿಂಗಳು ಮಾಮೂಲಿ ಇಲ್ಲದೇ ಹೋಗಿದ್ದರಿಂದ ಬಾಯಿಗೆ ಬಂದAತೆ ಮಾತಾಡತ್ತಾರೆ. ಅಧಿಕಾರಿಗಳು ನೀಡುತ್ತಿದ್ದ ತಿಂಗಳ ಮಾಮೂಲಿಯಲ್ಲಿ ಅವರು ಜೀವನ ನಡೆಸುತ್ತಿದ್ದಾರೆ. ಈಗ ಮಾಮೂಲಿ ನಿಂತು ಹೋಗಿದೆ. ಆದ್ದರಿಂದ ನಾಲಿಗೆ ಮೇಲೆ ಬಿಗಿ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದರು.

ಕೋಲಾರ ತಾಲೂಕಿನ ವೇಮಗಲ್ ನಲ್ಲಿ ಶುಕ್ರವಾರ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಧಿಕಾರದಲ್ಲಿ ಇದ್ದಷ್ಟು ದಿನ ಅಧಿಕಾರಿಗಳು ನೀಡುವ ಕಮಿಷನ್ ವರ್ತೂರು ಪ್ರಕಾಶ್ ಅವರಿಗೆ ಜೀವನವಾಗಿತ್ತು. ನನಗೆ ಅಂತಹ ಪರಿಸ್ಥಿತಿ ಬೇಕಾಗಿಲ್ಲ. ನನಗೆ ಕೋಟ್ಯಾಂತರ ರೂಪಾಯಿ ಬಾಡಿಗೆ ಬರುತ್ತದೆ. ನಿನ್ನ ಅವಧಿಯಲ್ಲಿನ ಕಾಮಗಾರಿಗಳು ಮಾಡಲು ಗುತ್ತಿಗೆದಾರರಿಂದ ಲಂಚ ಪಡೆದಿರುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ನಾನು ಯಾರ ಹತ್ತಿರವಾದರೂ ಪಡೆದಿದ್ದರೆ ಸಾಬೀತು ಮಾಡಲಿ ಎಂದು ಸಾವಾಲು ಹಾಕಿದರು

ವರ್ತೂರು ಪ್ರಕಾಶ್ ಅವರು ಏನಾದರೂ ಮಾತಾಡಬೇಕು ಅಂತ ಕಾಂಗ್ರೆಸ್ ನಾಯಕರ ವಿರುದ್ದ ಇಲ್ಲಸಲ್ಲದ ಆರೋಪ ಮಾಡಿಕೊಳ್ಳುವುದೇ ಜೀವನವಾಗಿದೆ ಹಿಂದೆ ಸಿದ್ದರಾಮಯ್ಯ ಅವರ ವಿರುದ್ದ ಮಾತಾಡಿ ಮಾತಾಡಿ ಏನಾಗಿದೆ ಅಂತ ರಾಜ್ಯದ ಜನಕ್ಕೆ ಗೊತ್ತಿದೆ ಇನ್ನಾದರೂ ಅವರಿಗೆ ಒಳ್ಳೆಯ ಬುದ್ದಿ ಕೊಟ್ಟು ಒಳ್ಳೆಯದು ಮಾತಾಡಲಿ ಇಲ್ಲ ಯಾರು ತಪ್ಪು ಮಾಡಿದ್ದಾರೆ ಅಂತ ಅ ಕೋಲಾರಮ್ಮ ದೇವರು ನೋಡಿಕೊಳ್ಳಲಿ ಎಂದರು.

ಕಾAಗ್ರೆಸ್ ಸರ್ಕಾರವು ಬರೀ ಅಭಿವೃದ್ಧಿಗೆ ಒತ್ತು ನೀಡುತ್ತದೆ ಇಂದಿರಾಗಾ0ಧಿ ಅವರ ಕಾಲದಲ್ಲಿಯೇ ಬಡವರಿಗೆ ಮನೆಗಳು ಕೊಟ್ಟರು ಪಿಂಚಣಿ ಜಾರಿ ಮಾಡಿದರು ಸಿದ್ದರಾಮಯ್ಯ ಅಕ್ಕಿ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರವು ಹಸಿವು ಮುಕ್ತ ಕರ್ನಾಟಕವೇ ಮುಖ್ಯ ಉದ್ದೇಶದಿಂದ ಇಂದಿರಾ ಕ್ಯಾಟೀನ್ ಸಹ ಜಾರಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇಲ್ಲದಾಗ ಮುಚ್ಚಿದ್ದರು ಇವಾಗ ಕಾಂಗ್ರೆಸ್ ಬಂದ ಮೇಲೆ ಮತ್ತೆ ಪ್ರಾರಂಭ ಮಾಡಿದ್ದಾರೆ ವೇಮಗಲ್‌ನಲ್ಲಿ ಉಪ ನೋಂದಣಿ ಕೇಂದ್ರವನ್ನು ಮಾಡಲು ಈಗಾಗಲೇ ಅಧಿಕಾರಿಗಳು ಬಂದು ಹೋಗಿದ್ದಾರೆ ಮುಂದೆ ತಾಲೂಕು ಕೇಂದ್ರ ಮಾಡಲು ಸಹ ಅನುಮೋದನೆ ನೀಡಿದ್ದು ಮುಂದಿನ ದಿನಗಳಲ್ಲಿ ಆಗುತ್ತದೆ ನಮಗೆ ಅಭಿವೃದ್ಧಿ ಮುಖ್ಯವಾಗಿದೆ ನೇರವಾಗಿ ಮಾತಾಡೋ ವ್ಯಕ್ತಿ ತಪ್ಪು ಇದ್ದರೆ ಪ್ರಶ್ನೆ ಮಾಡತ್ತೇವೆ ಎಂದರು.

ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ತಾಲೂಕು ಮತ್ತು ಪಟ್ಟಣ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಲಾಗಿದೆ ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಹೊಸದಾಗಿ ಪ್ರಾರಂಭ ಮಾಡಿದ್ದಾರೆ ಕೋಲಾರ ಕೇಂದ್ರದಲ್ಲಿ ಇರುವ ಕ್ಯಾಂಟೀನ್ ನಲ್ಲಿ ಅವ್ಯವಸ್ಥೆ ಇದೆ ಸರಿ ಪಡಿಸಬೇಕು ಇಂದಿರಾಗಾAಧಿ ಅವರ ಹೆಸರು, ನೆನಪು, ಸಾಧನೆಗಳಿಗೆ ಗೌರವ ಕೊಡಬೇಕು ಬಡವರಿಗೆ ಅನುಕೂಲ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲಾ ವರ್ಗಗಳಿಗೆ ಅನುಕೂಲ ಮಾಡಿದ್ದಾರೆ ಇಲ್ಲಿ ಸ್ವಚ್ಚತೆ ಕಾಪಾಡಿ ಹಸಿವು ಮುಕ್ತದ ಜೊತೆಗೆ ಗುಡಿಸಲು ಮುಕ್ತ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ತಾಲೂಕು ಅಧ್ಯಕ್ಷ ವಿ.ಎಂ ಮುನಿಯಪ್ಪ, ಜಿಪಂ ಮಾಜಿ ಸದಸ್ಯ ನಾಗನಾಳ ಸೋಮಣ್ಣ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವೆಂಕಟೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ಉದಯಶಂಕರ್, ಮುನಿಅಂಜಿನಪ್ಪ, ಫಯಾಜ್, ಉರಟಅಗ್ರಹಾರ ಚೌಡರೆಡ್ಡಿ, ಶ್ರೀನಿವಾಸ್, ಶ್ರೀರಾಮ್, ಈರಣ್ಣ, ಮೈಲಾಂಡಹಳ್ಳಿ ಮುರಳಿ ಭಾಗವಹಿಸಿದ್ದರು.

ಚಿತ್ರ : ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಶುಕ್ರವಾರ ಶಾಸಕ ಕೊತ್ತೂರು ಮಂಜುನಾಥ್ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande