ಕೃಷ್ಣ ಭೈರೇಗೌಡರನ್ನು ಕೋಲಾರ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಲು ರೈತ ಸಂಘ ಒತ್ತಾಯ
ಕೃಷ್ಣ ಭೈರೇಗೌಡರನ್ನು ಕೋಲಾರ ಜಿಲ್ಲಾ ಉಸ್ತುವಾರಿಯಾಗಿ ನೇಮಿಸಲು ರೈತ ಸಂಘ ಒತ್ತಾಯ
ರಾಮುಶಿವಣ್ಣ


ಕೋಲಾರ, ೧೩ ಜೂನ್ (ಹಿ.ಸ) :

ಆ್ಯಂಕರ್ : ಜನರ ಸಮಸ್ಯೆಗಳಿಗೆ ಸ್ಪಂದಿಸದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ರವರನ್ನು ಆ ಸ್ಥಾನದಿಂದ ಬದಲಾವಣೆ ಮಾಡಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವಂತೆ ರೈತ ಮುಖಂಡ ಕಲ್ವಮಂಜಲಿ ರಾಮು ಶಿವಣ್ಣ ಒತ್ತಾಯಿಸಿದ್ದಾರೆ

ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಹಾಗೂ ಬಡವರ ಹಸಿವು ನೀಗಿಸುವ ಯೋಜನೆ ಇಂದಿರಾ ಕ್ಯಾಂಟೀನ್ ಅನ್ನು ವೇಮಗಲ್ ನರಸಾಪುರ ಮುಖ್ಯ ರಸ್ತೆಯಲ್ಲಿ ಕೋಲಾರ ಶಾಸಕ ಉದ್ಘಾಟಿಸಿದರು. ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಹ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಕೋಲಾರ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ರವರು ಸಹ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಬರುತ್ತಾರೆ ಎಂದು ತಿಳಸಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸ್ವಾತಂತ್ರೊö್ಯತ್ಸವ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಆಗಮಿಸಿ ಭಾವುಟ ಎಳೆದು ಅಧಿಕಾರಿಗಳು ಸಿದ್ಧಪಡಿಸಿದ ಅಂಕಿ ಅಂಶಗಳನ್ನು ಶಾಲೆಯಲ್ಲಿ ವಿದ್ಯಾರ್ಥಿಗಳು ಮೇಷ್ಟç ಮುಂದೆ ಓದುವಂತೆ ಓದುತ್ತಾರೆ. ಆ ನಂತರ ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಉಡಾಫೆ ಉತ್ತರ ನೀಡಿ ಕಾರು ಹತ್ತಿ ಬೆಂಗಳೂರಿಗೆ ಹೊರಟು ಹೋಗುತ್ತಾರೆ.

ಉಸ್ತುವಾರಿ ಸಚಿವರು ಇದುವರೆಗೂ ಜಿಲ್ಲಾ ಕೇಂದ್ರವಾದ ಕೋಲಾರ ಹೊರತು ಪಡಿಸಿದರೆ ಯಾವ ತಾಲ್ಲೂಕಿಗೂ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂಧಿಸಿಲ್ಲ. ಉಸ್ತುವಾರಿ ಸಚಿವರು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಎರಡು ವರ್ಷಗಳ ಹಿಂದೆ ಅವರು ಸ್ವಾತಂತ್ರೊö್ಯತ್ಸವ ಕಾರ್ಯಕ್ರಮಕ್ಕೆ ಬೆಂಗಳೂರಿನಿ0ದ ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸಿ ದೂಳು ನಿಂತ ನಂತರ ಕೂಲಿಂಗ್ ಗ್ಲಾಸ್ ತೆಗೆದು, ಭಾಷಣ ಬಿಗಿದು ಮತ್ತೆ ಹೆಲಿಕ್ಯಾಪ್ಟರ್‌ನಲ್ಲಿ ಹಾರಿ ಹೋದರು. ಅವರ ಹೆಲಿಕ್ಯಾಪ್ಟರ್ ಎಬ್ಬಿಸಿದ ದೂಳಿನಿಂದಾಗಿ ಜ್ಯೂನಿಯರ್ ಕಾಲೇಜಿನ ಅಕ್ಕಪಕ್ಕದ ಮನೆಗಳವರು ಮಧ್ಯಾಹ್ನದ ವರೆಗೆ ಭಾಗಿಲು ಹಾಕಿಕೊಂಡು ಹೊರಗೆ ಬರಲಿಲ್ಲ.

ಗಡಿಬಿಡಿಯಲ್ಲಿ ಬಂದು ಹೋಗುವ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ರವರಿಗೆ ಕೋಲಾರಕ್ಕೆ ಬರಲು ಬಿಡುವೇ ಇರುವುದಿಲ್ಲ. ನಾಮಕಾವಸ್ತೆಗೆ ಕೆಡಿಪಿ ಸಭೆಗಳನ್ನು ನಡೆಸುವ ಭೈರತಿ ಸುರೇಶ್ ರವರು ಸಭೆಯಲ್ಲಿ ನಾಳೆ ನೀವು ಪೈಲ್ ತೆಗೆದುಕೊಂಡು ನನ್ನ ಮನೆಗೆ ಬಂದು ಬಿಡಿ ಎಂದು ಹೇಳುತ್ತಾರೆ. ಮನೆಗೆ ಬನ್ನಿ ಎಂದರೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ವಿಧಾನಸೌಧದ ಕೊಠಡಿಗೆ ಆಗಮಿಸಿ ಸಭೆ ನಡೆಸಲೂ ಸಹ ಬೆಂಗಳೂರಿನ ಗಡಿಬಿಡಿ ಟ್ರಾö್ಯಫಿಕ್‌ನಿಂದಲೂ ಸಹ ಅವರಿಗೆ ಸಾಧ್ಯವಾಗುವುದಿಲ್ಲ. ಅವರ ಸಮಯ ಅತ್ಯಂತ ಅಮೂಲ್ಯವಾದುದ್ದು, ಆದ್ದರಿಂದ ಅವರು ಕೋಲಾರಕ್ಕೆ ಬಂದು ಸಮಯ ವ್ಯರ್ಥ ಮಾಡುವುದು ಬೇಡ ಎಂದು ವ್ಯಂಗ್ಯ ಮಾಡಿದ್ದಾರೆ.

ಕಳೆದ ಮೇ ೨೯ ರಂದು ಜಿಲ್ಲಾ ಉಸ್ತುವಾರಿ ಸಚಿವರೇ ಉದ್ಘಾಟನೆ ಮಾಡಬೇಕೆಂದು ಕಾರ್ಯಕ್ರಮ ರೂಪುರೇಷೆಗಳು ಸಿದ್ದಗೊಂಡಿದ್ದವು ಆದರೆ ಅವರ ತಾಯಿಯ ನಿಧನದಿಂದಾಗಿ ಜೂ ೧೩ ಕ್ಕೆ ಉದ್ಘಾಟನೆಯ ಅಂತಿಮ ದಿನಾಂಕ ನಿಗದಿ ಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ವೇಮಗಲ್‌ಗೆ ಬರುತ್ತಾರೆ ಎಂದು ಸತ್ತಮುತ್ತಲಿನ ಜನರು, ರೈತರು, ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ಆದರೆ ಉಸ್ತುವಾರಿ ಸಚಿವರ ಸುಳಿವೇ ಇಂದಿರಾ ಕ್ಯಾಂಟೀನ್ ಬಳಿ ಇರಲಿಲ್ಲ, ಈ ಸುದ್ದಿ ತಿಳಿಯುತ್ತಿದ್ದಂತೆ ಎಂತಹ ಗತಿ ಬಂತು ಕೋಲಾರ ಕ್ಷೇತ್ರಕ್ಕೆ ಎಂದು ಬೈದಾಡಿಕೊಂಡು ಹೋದರು.

ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದೆ ಇದುವರೆಗೂ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ರವರು ಕೋಲಾರ ಜಿಲ್ಲೆಯ ಜನರ ಸಮಸ್ಯೆಗಳನ್ನು ಕೇಳಲು ಸಮಯವೇ ಇಲ್ಲ. ಯಾವುದಾದರೂ ಸರ್ಕಾರಿ ಕಾರ್ಯಕ್ರಮಗಳಿದ್ದರೆ ಬೆಂಗಳೂರಿನಿ0ದ ಕೋಲಾರಕ್ಕೆ ಪೊಲೀಸ್ ಬಂದೋಬಸ್ತ್ ನಲ್ಲಿ ಬರ್ತಾರೆ ಬಂದೋಬಸ್ ನಲ್ಲಿ ವಾಪಸ್ ಬೆಂಗಳೂರಿಗೆ ಹೋಗುತ್ತಾರೆ ಎಂದು ಟೀಕಿಸಿದ್ದಾರೆ.

ಆದ್ದರಿಂದ ಕೋಲಾರ ಜಿಲ್ಲೆಯ ಸಾರ್ವಜನಿಕರ ಸಮಸ್ಯೆ ಆಲಿಸದ ಹಾಗೂ ಶುಕ್ರವಾರ ನಡೆದ ವೇಮಗಲ್ ಕುರುಗಲ್ ಪಪಂ ನಲ್ಲಿ ನೂತನವಾಗಿ ಪ್ರಾರಂಭ ಮಾಡಿದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಬಾರದ ಬೇಜವಾಬ್ದಾರಿ ಉಸ್ತುವಾರಿ ಸಚಿವ ಬೈರತಿ ಸುರೇಶ್ ರವರನ್ನು ಕೋಲಾರ ಜಿಲ್ಲೆಯ ಉಸ್ತುವಾರಿ ಸ್ಥಾನದಿಂದ ಬದಲಾವಣೆ ಮಾಡಿ ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತನಾಯಕ ಪ್ರೊಫೆಸರ್ ನಂಜು0ಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಲಿಕ್ಯಾಪ್ಟರ್ ಮತ್ತು ವಿಮಾನಗಳ ಅವಘಡಗಳು ಸಂಭವಿಸುತ್ತಿದೆ. ಆದ್ದರಿಂದ ಸಚಿವ ಭೈರತಿ ಸುರೇಶ್ ರವರು ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸುವುದು ಬೇಡ. ಅವರು ಸುರಕ್ಷಿತವಾಗಿರಲಿ. ಶ್ರೀನಿವಾಸಪುರದಲ್ಲಿ ಮಾವು ಬೀದಿಗೆ ಎಸೆದು ಪ್ರತಿಭಟಿಸಿದ ರೈತರನ್ನು ಭೇಟಿ ಮಾಡಲು ಅವರಿಗೆ ಸಮಯವಿಲ್ಲ. ಆದ್ದರಿಂದ ಮಾವು ಬೆಳೆಗಾರರನ್ನು ಅವರ ಮನೆಗೆ ಕರೆಸಿಕೊಂಡು ಸಮಸ್ಯೆಗಳನ್ನು ಆಲಿಸಿದರು. ಮನೆಗೆ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಆಹ್ವಾನಿಸಿ ಅವರ ಸಮಸ್ಯೆಗಳನ್ನು ಆಲಿಸುವುದು ಸಚಿವರ ಔಧಾರ್ಯ ಆಗಿದೆ. ಆದರೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಅವರ ಮನೆಗೆ ಹೋಗಿ ವಾಪಸ್ಸು ಆಗುವುದು ಎಷ್ಟು ಜನರಿಗೆ ಸಾಧ್ಯ ಎಂದು ರಾಮುಶಿವಣ್ಣ ಪ್ರಶ್ನೆ ಮಾಡಿದ್ದಾರೆ.

ನಮ್ಮ ಸಮಸ್ಯೆಗಳಿಗೆ ಸ್ಪಂಧಿಸಲು ನಿಮಗೆ ಸಮಯವಿಲ್ಲ. ನಮ್ಮ ತಾಳ್ಮೆಯನ್ನು ಎರಡು ವರ್ಷಗಳಿಂದ ನೀವು ಪರೀಕ್ಷೆ ಮಾಡಿದ್ದೀರಿ. ತಾಳ್ಮೆ ಕಳೆದುಕೊಂಡಿರುವ ನಾವು ನಿಮಗಾಗಿ ಕಾಯುವುದಿಲ್ಲ. ಬದಲಾಗಿ ಬೀದಿಗೆ ಇಳಿದು ನಿಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ಎಂದು ರಾಮು ಶಿವಣ್ಣ ತಿಳಿಸಿದ್ದಾರೆ.

ಚಿತ್ರ : ರಾಮು ಶಿವಣ್ಣ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande