ಕೋಲಾರ, ೧೩ ಜೂನ್ (ಹಿ.ಸ) ಆಂಕರ್ :
ಆ್ಯಂಕರ್ : ಕೋಮುಲ್ ಚುನಾವಣೆಯ ಪ್ರಕ್ರಿಯೆಗಳು ಶುರುವಾಗಿದ್ದು, ಒಳ್ಳೆಯ ದಿನ ಎಂದು ಮುಳಬಾಗಿಲಿನ ಪೂರ್ವ, ಪಶ್ಚಿಮ ಹಾಗೂ ಮಹಿಳಾ ಕ್ಷೇತ್ರಕ್ಕೆ ನಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರೆಲ್ಲರಿಗೂ ಜಯ ಸಿಗಲಿ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಶುಭ ಕೋರಿದರು.
ಪಶಿಶ್ಚಮಕ್ಕೆ ಶಾಮೇಗೌಡ, ಪೂರ್ವಕ್ಕೆ ಕಾಡೇನಹಳ್ಳಿ ನಾಗರಾಜ್, ಮಹಿಳಾ ಕ್ಷೇತ್ರಕ್ಕೆ ಲಕ್ಷö್ಮಮ್ಮ ನಾಮಪತ್ರ ಸಲ್ಲಿಸಿದ್ದು, ಇದರ ಜತೆಗೆ ಶ್ರೀನಿವಾಸಪುರದ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೋಲಾರಮ್ಮ ಆಶೀರ್ವಾದ ಮಾಡಲಿ ಎಂದು ಶಾಸಕನಾಗಿ ಪ್ರಾರ್ಥಿಸುತ್ತೇವೆ. ರಾಜಕೀಯ ಭವಿಷ್ಯ ಚೆನ್ನಾಗಿಸಲಿ ಎಂದು ಕೋರುತ್ತೇನೆ ಎಂದರು.
ಚಿತ್ರ : ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳಾದ ಕಾಡೇನಹಳ್ಳಿ ನಾಗರಾಜ್ ನಾಮಪತ್ರ ಸಲ್ಲಿಸಿದರು. ಶಾಸಕ ಸಮೃದ್ಧಿ ಮಂಜುನಾಥ್ ಹಾಗೂ ಸಂಸದ ಮಲ್ಲೇಶ್ ಬಾಬು ಚಿತ್ರದಲ್ಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್