
ಕೋಲಾರ, ೩೦ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಜಗತ್ತಿನ ಗಣಿತ ಕ್ಷೇತ್ರಕ್ಕೆ ಸೊನ್ನೆಯನ್ನು ಕೊಡುಗೆಯಾಗಿ ನೀಡಿದ ಭಾರತ ಆರ್ಯಭಟ, ಶ್ರೀನಿವಾಸ ರಾಮಾನುಜನ್ರಂತಹ ಅನೇಕ ಶ್ರೇಷ್ಟ ಗಣಿತಜ್ಞರನ್ನು ನೀಡಿದೆ ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದ ಗಣಿತ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಚಂದನ್ ಕುಮಾರ್ ತಿಳಿಸಿದರು.
ಮಂಗಳವಾರ ಬೆಂಗಳೂರು ಉತ್ತರ ವಿವಿಯ ಗಣಿತಶಾಸ್ತ ವಿಭಾಗದಿಂದ ಆಯೋಜಿಸಿದ್ದ ರಾಷ್ಟಿçÃಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.
ರಾಮಾನುಜನ್ ಅವರ ಹುಟ್ಟುಹಬ್ಬವನ್ನು ಭಾರತ ಮಾತ್ರವಲ್ಲ ಇಂದು ಇಡೀ ವಿಶ್ವವೇ ಆಚರಿಸುತ್ತಿದೆ, ಕೇಂಬ್ರಿಡ್ಸ್ ವಿವಿಯಲ್ಲಿ ಈ ದಿನಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಅನೇಕ ಜಾತಿ, ಧರ್ಮ, ಭಾಷೆಗಳಿದ್ದರೂ, ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಇಂದು ವಿಶ್ವಮಾನ್ಯವಾಗಲು ರಾಮಾನುಜನ್ ರಂತಹ ಅನೇಕ ಮಹನೀಯರ ಪರಿಶ್ರಮವಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕಾಲಕಾಲಕ್ಕೆ ಬದಲಾಗುವ ಆಧುನಿಕತೆಯ ಗಣಿತ ಕಲಿಯಲು ಬದಲಾಗಬೇಕು ಎಂದು ಕಿವಿಮಾತು ಹೇಳಿ, ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು, ಕಲಿಕೆಯಲ್ಲಿ ಕಷ್ಟವಾದಾಗ ಗಣಿತವನ್ನು ಸರಳಗೊಳಿಸಿ ವಿಶ್ವಖ್ಯಾತಿಯಾದ ರಾಮಾನುಜನ್ ಅವರನ್ನು ನೀವು ಸ್ಪೂರ್ತಿಯಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಇಡೀ ವಿಶ್ವದಲ್ಲೇ ಭಾರತೀಯರೇ ಹೆಚ್ಚು ಬುದ್ದಿವಂತರು, ಗಣಿತದ ಕೂಡೋ, ಕಳೆಯೋ, ಗುಣಿಸೋ ಲೆಕ್ಕವನ್ನು ನಮ್ಮಲ್ಲಿ ೬ ವರ್ಷದ ಬಾಲಕ ಹೇಳಬಲ್ಲ, ಇತರೆ ದೇಶಗಳಲ್ಲಿ ಗಣಿತವೆಂದರೆ ಭಯವಿದೆ. ಗಣಿತ ವಿಶ್ವದ ಶೈಕ್ಷಣಿಕ ವ್ಯವಸ್ಥೆಯಲ್ಲಿ ನರವ್ಯೂಹವಿದ್ದಂತೆ ಎಂದ ಅವರು, ಗಣಿತವನ್ನು ಪ್ರೀತಿಸಿ, ಗೌರವಿಸಿ, ನಾನು ಒಬ್ಬ ರಾಮಾನುಜನ್ ಆಗಬೇಕು ಎಂಬ ಸ್ಪೂರ್ತಿಯಿಂದ ಮುನ್ನಡೆಯಿರಿ ಎಂದು ಪಿಜಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೆಂಗಳೂರು ಉತ್ತರ ವಿವಿ ಪ್ರಭಾರ ಕುಲಪತಿ ಪ್ರೊ.ಕುಮುದಾ ಮಾತನಾಡಿ, ಬೆಂಗಳೂರು ಉತ್ತರ ವಿವಿ ಅನೇಕ ಚಟುವಟಿಕೆಗಳ ಮೂಲಕ ಗಮನ ಸೆಳೆದಿದೆ, ಈ ರೀತಿಯ ಸಂಪನ್ಮೂಲ ವ್ಯಕ್ತಿಗಳ ಭಾಷಣವನ್ನು ಸದುಪಯೋಗ ಮಾಡಿಕೊಳ್ಳಿ. ಭಾರತದ ಗಣಿತ ಕ್ಷೇತ್ರದ ಮಹಾನ್ ಚೇತನ ರಾಮಾನುಜನ್, ಗಣಿತಕ್ಕೆ ನೀಡಿದ ಕೊಡುಗೆ ಅಪಾರ, ಅವರು ಕೇವಲ ೩೩ ವರ್ಷ ಬದುಕಿದ್ದರೂ ಸಾರ್ಥಕ ಜೀವನ ನಡೆಸಿ ಇಡೀ ವಿಶ್ವಕ್ಕೆ ಸ್ಪೂರ್ತಿಯಾಗಿದ್ದಾರೆ. ನಿಖರತೆಯನ್ನು ಒಳಗೊಂಡಿರುವ ಗಣಿತ ಹುಟ್ಟಿದಂದಿನಿ0ದ ಸಾಯುವವರೆಗೂ ಇಡೀ ಜೀವನದಲ್ಲಿ ಹಾಸುಹೊಕ್ಕಾಗಿದೆ, ನಮ್ಮ ಕುಟುಂಬ ನಿರ್ವಹಣೆಯಲ್ಲೂ ಗಣಿತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿವಿಯ ಗಣಿತ ವಿಭಾಗದ ಸಂಯೋಜಕಿ ಸಿ.ಎಸ್.ಶ್ರೀಲತಾ, ಗಣಿತ ದಿನಾಚರಣೆ ಪ್ರಯುಕ್ತ ಅಂತರ ವಿಭಾಗೀಯ ಚರ್ಚಾಸ್ಪರ್ಧೆ, ಗಣಿತ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಎಂದ ಅವರು, ಗಣಿತ ಚಟುವಟಿಕೆಗಳು ಮತ್ತಷ್ಟು ನಡೆಸಲು ಕ್ರಮವಹಿಸುವುದಾಗಿ ತಿಳಿಸಿ, ಗಣಿತ ವಿಭಾಗದ ಮಹತ್ವವನ್ನು ಇತರ ವಿಭಾಗಗಳ ವಿದ್ಯಾರ್ಥಿಗಳಿಗೂ ತಿಳಿಸುವ ಉದ್ದೇಶವಿತ್ತು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಹ ಪ್ರಾಧ್ಯಾಪಕ ಜೆ.ಎಂ.ಶಿವರಾಜ್, ಭೌತಶಾಸ್ತç ವಿಭಾಗದ ಉಪನ್ಯಾಸಕರಾದ ಮುಬಾರಕ್ ತಾಜ್, ಸುಷ್ಮ, ವಿದ್ಯಾರ್ಥಿಗಳಾದ ಶಶಿಕುಮಾರ್, ನೂರ್ ಫಿಝಾ ನಿರೂಪಿಸಿ, ತೇಜಸ್ವಿನಿ, ಉಪನ್ಯಾಸಕ ನಾಗಾರ್ಜುನ್, ವಿದ್ಯಾರ್ಥಿನಿ ಮಧುಸ್ಮೀತಾ ಅತಿಥಿಗಳ ಪರಿಚಯ ಮಾಡಿಕೊಟ್ಟರು.ಗಣಿತ ಶಾಸ್ತç,ಭೌತಶಾಸ್ತç ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.
ಚಿತ್ರ : ಕೋಲಾರದ ಬೆಂಗಳೂರು ಉತ್ತರ ವಿವಿಯಲ್ಲಿ ವಿಶ್ವ ಗಣಿತದಿನಾಚರಣೆ ಕಾರ್ಯಕ್ರಮ ಮತ್ತು ಗಣಿತ ಕ್ಲಬ್ ಉದ್ಘಾಟನೆಯನ್ನು ಬೆಂಗಳೂರು ಉತ್ತರ ವಿವಿ ಗಣಿತ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಚಂದನ್ ಕುಮಾರ್ ನೆರವೇರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್