
ಹಾಸನ, 28 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹಾಸನ ಮಹಾನಗರಪಾಲಿಕೆ ವ್ಯಾಪ್ತಿಗೆ ಬರುವ ಬೇಲೂರು- ಹಳೇಬೀಡನ್ನು ಸಂಧಿಸುವ ಪ್ರಮುಖ ವೃತ್ತಕ್ಕೆ ಶ್ರೀ.ಶ್ರೀ.ಶ್ರೀ.'' ಅಮರಶಿಲ್ಪಿ ಜಕ್ಕಣಾಚಾರ್ಯ” ರವರ ಹೆಸರನ್ನು ನಾಮಕರಣ ಮಾಡಲು ಹಾಸನ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿರುತ್ತದೆ. ಅದರಂತೆ ಸದರಿ ವಿಷಯದ ಬಗ್ಗೆ ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆ, ಸಲಹೆ, ಸೂಚನೆಗಳನ್ನು ಪಾಲಿಕೆ ಕಛೇರಿಗೆ ವರದಿ ಸಲ್ಲಿಸುವಂತೆ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa