
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಬೆಂಗಳೂರಿನಿಂದ ಕುಣಿಗಲ್ಗೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ‘ವಜ್ರ ವಿಸ್ತಾರ’ ಹವಾನಿಯಂತ್ರಿತ ಬಸ್ ಸೇವೆಯನ್ನು ಆರಂಭಿಸಿದೆ.
ಹೊಸ ಸೇವೆಯಡಿ ಬೆಂಗಳೂರು–ಕುಣಿಗಲ್ ಮಾರ್ಗದಲ್ಲಿ ಎಸಿ ಬಸ್ಗಳು ಸಂಚರಿಸಲಿದ್ದು, ಇದರಿಂದ ಈ ಭಾಗದ ಪ್ರಯಾಣಿಕರಿಗೆ ಆರಾಮದಾಯಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ.
ಬೆಂಗಳೂರು ನಗರದಿಂದ ಹೊರವಲಯದ ಪ್ರದೇಶಗಳಿಗೆ ಬಿಎಂಟಿಸಿ ಸೇವೆಯನ್ನು ವಿಸ್ತರಿಸುವ ಕ್ರಮದ ಭಾಗವಾಗಿ ಈ ಹೊಸ ಸೇವೆ ಆರಂಭಿಸಲಾಗಿದೆ. ಪ್ರಾಥಮಿಕ ಹಂತದಲ್ಲಿ 8 ಎಸಿ ಬಸ್ಗಳು ಬೆಂಗಳೂರು–ಕುಣಿಗಲ್ ನಡುವೆ ಸಂಚರಿಸಲಿವೆ ಎಂದು ವರದಿಯಾಗಿದೆ.
ಬಿಎಂಟಿಸಿ ಅಧಿಕಾರಿಗಳ ಪ್ರಕಾರ, ಬೆಂಗಳೂರು ಮತ್ತು ಕುಣಿಗಲ್ ನಡುವಿನ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವುದು ಹಾಗೂ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಒದಗಿಸುವುದು ಸೇವೆಯ ಉದ್ದೇಶವಾಗಿದೆ.
ಹೊಸ ಸೇವೆಯಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ಬೆಂಗಳೂರು–ಕುಣಿಗಲ್ ನಡುವೆ ಸಂಚರಿಸುವವರಿಗೆ ಅನುಕೂಲವಾಗಲಿದೆ.
ಬಿಎಂಟಿಸಿ ಈಗಾಗಲೇ ರಾಮನಗರ, ಕನಕಪುರ ಮತ್ತು ತುಮಕೂರು ಸೇರಿದಂತೆ ಬೆಂಗಳೂರಿನ ಹೊರವಲಯದ ಪ್ರಮುಖ ಪ್ರದೇಶಗಳಿಗೆ ‘ವಜ್ರ ವಿಸ್ತಾರ’ ಎಸಿ ಬಸ್ ಸೇವೆಯನ್ನು ವಿಸ್ತರಿಸಿದೆ.
ಹೇಳಿಕೆ: “ಪ್ರಯಾಣಿಕರ ಬೇಡಿಕೆ ಹಾಗೂ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಬಿಎಂಟಿಸಿ ಸೇವೆಯನ್ನು ಹೊರವಲಯದ ಪ್ರದೇಶಗಳಿಗೂ ವಿಸ್ತರಿಸಲಾಗುತ್ತಿದೆ.
ಕುಣಿಗಲ್ಗೆ ಆರಂಭಿಸಿರುವ ವಜ್ರ ವಿಸ್ತಾರ ಸೇವೆಯಿಂದ ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಉತ್ತಮ ಸಾರ್ವಜನಿಕ ಸಾರಿಗೆ ಸೌಲಭ್ಯ ದೊರೆಯಲಿದೆ” ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R