
ಹುಬ್ಬಳ್ಳಿ, 14 ಆಗಸ್ಟ್ (ಹಿ.ಸ.):
ಆ್ಯಂಕರ್:
ಕಾರ್ಯಾಚರಣೆಯ ಕಾರಣದಿಂದ ರೈಲು ಸಂಖ್ಯೆ 56927 ಎಸ್ಎಸ್ಎಸ್ ಹುಬ್ಬಳ್ಳಿ–ಸಿಂಧನೂರು ದೈನಂದಿನ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯನ್ನು ಆ.17ರಿಂದ ಪರಿಷ್ಕರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಕೊಪ್ಪಳಕ್ಕೆ ಬೆಳಗ್ಗೆ 9.23ಕ್ಕೆ ಆಗಮಿಸಿ 9.25ಕ್ಕೆ ನಿರ್ಗಮಿಸಲಿದೆ. ಗಿಣಿಗೇರಾ 9.34/9.35, ಬೂದಗುಂಪ 9.45/9.46 ಹಾಗೂ ಜಬ್ಬಲಗುಡ್ಡ 9.54/9.55ಕ್ಕೆ ತಲುಪಿ-ನಿರ್ಗಮಿಸಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ–ಭಾಣಾಪುರ ಹಾಗೂ ಚಿಕ್ಕಬೆಣಕಲ್–ಸಿಂಧನೂರು ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.