ಇತಿಹಾಸದ ಪುಟಗಳಲ್ಲಿ ಆಗಸ್ಟ್ 12: ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಶಿಲ್ಪಿ ವಿಕ್ರಂ ಸಾರಾಭಾಯಿ ಜನ್ಮದಿನ
ನವದೆಹಲಿ, 11 ಆಗಸ್ಟ್ (ಹಿ.ಸ.): ಇತಿಹಾಸದ ಪುಟಗಳಲ್ಲಿ ಆಗಸ್ಟ್ 12 ದೇಶ-ವಿದೇಶಗಳ ಇತಿಹಾಸದಲ್ಲಿ ಆಗಸ್ಟ್ 12 ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದ್ದು, 1919ರ ಆಗಸ್ಟ್ 12ರಂದು ಅಹಮದಾಬಾದ್‌ನಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ
स्मृति शेष विक्रम साराभाई। साथ में हैं पूर्व प्रधानमंत्री इंदिरा गांधी व अन्य।


ನವದೆಹಲಿ, 11 ಆಗಸ್ಟ್ (ಹಿ.ಸ.):

ಇತಿಹಾಸದ ಪುಟಗಳಲ್ಲಿ ಆಗಸ್ಟ್ 12

ದೇಶ-ವಿದೇಶಗಳ ಇತಿಹಾಸದಲ್ಲಿ ಆಗಸ್ಟ್ 12 ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಭಾರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದ್ದು, 1919ರ ಆಗಸ್ಟ್ 12ರಂದು ಅಹಮದಾಬಾದ್‌ನಲ್ಲಿ ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪ್ರಮುಖ ಶಿಲ್ಪಿ, ಖ್ಯಾತ ವಿಜ್ಞಾನಿ ಡಾ. ವಿಕ್ರಂ ಅಂಬಾಲಾಲ್ ಸಾರಾಭಾಯಿ ಜನಿಸಿದರು.

ಸಮೃದ್ಧ ಕುಟುಂಬದಲ್ಲಿ ಜನಿಸಿದ ವಿಕ್ರಂ ಸಾರಾಭಾಯಿ ಅವರಿಗೆ ಉದ್ಯಮಕ್ಕಿಂತ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಬಳಿಕ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದರು. ಭಾರತಕ್ಕೆ ಮರಳಿದ ನಂತರ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಅವರು ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದರು.

1962ರಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿಯ ಸ್ಥಾಪನೆಯೊಂದಿಗೆ ದೇಶದ ಸಂಘಟಿತ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಸ ದಿಕ್ಕು ದೊರೆಯಿತು. ಸಾರಾಭಾಯಿ ಅದರ ಅಧ್ಯಕ್ಷರಾದರು. ಸೀಮಿತ ಸಂಪನ್ಮೂಲ ಮತ್ತು ತಂತ್ರಜ್ಞಾನದ ನಡುವೆಯೂ ವಿಜ್ಞಾನಿಗಳ ಬಲಿಷ್ಠ ತಂಡವನ್ನು ರೂಪಿಸಿ ಭಾರತದ ಬಾಹ್ಯಾಕಾಶ ಯೋಜನೆಗೆ ಭದ್ರ ಬುನಾದಿ ಹಾಕಿದರು. ಕೇರಳದ ತುಂಬಾದಲ್ಲಿ ರಾಕೆಟ್ ಉಡಾವಣಾ ಕೇಂದ್ರ ಸ್ಥಾಪನೆಯೂ ಅವರ ಪ್ರಯತ್ನದ ಪ್ರಮುಖ ಭಾಗವಾಗಿತ್ತು.

1969ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಾಪನೆಯಾಯಿತು. ಬಾಹ್ಯಾಕಾಶ ತಂತ್ರಜ್ಞಾನವನ್ನು ಕೇವಲ ವೈಜ್ಞಾನಿಕ ಸಾಧನೆಗಳಿಗೆ ಸೀಮಿತಗೊಳಿಸದೆ, ಸಂವಹನ, ಹವಾಮಾನ ಮುನ್ಸೂಚನೆ, ಶಿಕ್ಷಣ ಹಾಗೂ ದೇಶದ ಅಭಿವೃದ್ಧಿಗೆ ಬಳಸಬೇಕು ಎಂಬುದು ಸಾರಾಭಾಯಿ ಅವರ ದೂರದೃಷ್ಟಿಯಾಗಿತ್ತು.

ಆಗಸ್ಟ್ 12ರ ಪ್ರಮುಖ ಘಟನೆಗಳು

1602 – ಅಬುಲ್ ಫಜಲ್ ಹತ್ಯೆಗೀಡಾದರು.

1765 – ಅಲಹಾಬಾದ್ ಒಪ್ಪಂದದ ಮೂಲಕ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪ್ರಭಾವ ಹೆಚ್ಚಾಯಿತು.

1831 – ನೆದರ್‌ಲ್ಯಾಂಡ್ ಮತ್ತು ಬೆಲ್ಜಿಯಂ ನಡುವೆ ಶಾಂತಿ ಒಪ್ಪಂದ.

1833 – ಅಮೆರಿಕದ ಚಿಕಾಗೋ ನಗರದ ಸ್ಥಾಪನೆ.

1908 – ಹೆನ್ರಿ ಫೋರ್ಡ್ ಕಂಪನಿ ತನ್ನ ಮೊದಲ ಕಾರು ಮಾದರಿಯನ್ನು ನಿರ್ಮಿಸಿತು.

1914 – ಪ್ರಥಮ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರಿಟನ್ ಆಸ್ಟ್ರಿಯಾ-ಹಂಗೇರಿ ವಿರುದ್ಧ ಯುದ್ಧ ಘೋಷಿಸಿತು.

1919 – ವಿಕ್ರಂ ಸಾರಾಭಾಯಿ ಜನಿಸಿದರು.

1953 – ಗ್ರೀಸ್‌ನ ಲೋನಿಯನ್ ದ್ವೀಪಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ 435 ಮಂದಿ ಮೃತಪಟ್ಟರು.

1960 – ನಾಸಾ ತನ್ನ ಮೊದಲ ಯಶಸ್ವಿ ಸಂವಹನ ಉಪಗ್ರಹ ‘ಈಕೋ-ಎ’ಯನ್ನು ಉಡಾವಣೆ ಮಾಡಿತು.

1981 – ಐಬಿಎಂ ತನ್ನ ಮೊದಲ ವೈಯಕ್ತಿಕ ಕಂಪ್ಯೂಟರ್ ಬಿಡುಗಡೆ ಮಾಡಿತು.

1992 – ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ನಡುವೆ ಉತ್ತರ ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ದೊರೆಯಿತು.

2009 – ಖ್ಯಾತ ಅರ್ಥಶಾಸ್ತ್ರಜ್ಞ ಸಿ. ರಂಗರಾಜನ್ ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು.

2023 – ಭಾರತ ಮಲೇಷ್ಯಾವನ್ನು 4-3ರಿಂದ ಸೋಲಿಸಿ ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪ್ರಶಸ್ತಿ ಗೆದ್ದಿತು.

2024 – ಪ್ಯಾರಿಸ್‌ನಲ್ಲಿ 33ನೇ ಒಲಿಂಪಿಕ್ಸ್ ಕ್ರೀಡಾಕೂಟ ಸಮಾಪ್ತಿಯಾಯಿತು.

ಜನನ

1908 – ರಾಬಿನ್ ಬ್ಯಾನರ್ಜಿ, ಖ್ಯಾತ ವನ್ಯಜೀವಿ ತಜ್ಞ, ಪರಿಸರವಾದಿ ಮತ್ತು ಛಾಯಾಗ್ರಾಹಕ.

1914 – ತೇಜಿ ಬಚ್ಚನ್, ನಟ ಅಮಿತಾಭ್ ಬಚ್ಚನ್ ಅವರ ತಾಯಿ.

1919 – ವಿಕ್ರಂ ಸಾರಾಭಾಯಿ, ಖ್ಯಾತ ಭಾರತೀಯ ಭೌತಶಾಸ್ತ್ರಜ್ಞ.

1931 – ಇರ್ಫಾನ್ ಹಬೀಬ್, ಖ್ಯಾತ ಭಾರತೀಯ ಇತಿಹಾಸಕಾರ.

1972 – ಜ್ಞಾನೇಂದ್ರ ಪಾಂಡೆ, ಭಾರತೀಯ ಕ್ರಿಕೆಟಿಗ.

ನಿಧನ

1945 – ಜಾರ್ಜ್ ಸಿಡ್ನಿ ಅರುಂಡೇಲ್.

1946 – ಕಾಶೀನಾಥ ನಾರಾಯಣ ದೀಕ್ಷಿತ್, ಭಾರತೀಯ ಪುರಾತತ್ವ ತಜ್ಞ.

1982 – ಭಗವತ್‌ಶರಣ ಉಪಾಧ್ಯಾಯ, ಇತಿಹಾಸಕಾರ ಮತ್ತು ಚಿಂತಕ.

1993 – ದಯಾನಂದ ಬಾಂದೋಡ್ಕರ್, ಗೋವಾದ ಮೊದಲ ಮುಖ್ಯಮಂತ್ರಿ.

1997 – ಗುಲ್ಶನ್ ಕುಮಾರ್, ನಿರ್ಮಾಪಕ-ನಿರ್ದೇಶಕ ಹಾಗೂ ಉದ್ಯಮಿ.

ಪ್ರಮುಖ ದಿನಗಳು

ಅಂತಾರಾಷ್ಟ್ರೀಯ ಯುವ ದಿನ ಹಾಗೂ ವಿಶ್ವ ಆನೆ ದಿನವನ್ನು ಆಗಸ್ಟ್ 12ರಂದು ಆಚರಿಸಲಾಗುತ್ತದೆ.

---------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande