

ಧಾರವಾಡ, 01 ಜುಲೈ (ಹಿ.ಸ.):
ಆ್ಯಂಕರ್:
ಧಾರವಾಡದ ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ಬುಧವಾರ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು.
ಹಿರಿಯ ಹೃದ್ರೋಗ ತಜ್ಞರಾದ ಡಾ. ವಿವೇಕಾನಂದ ಗಜಪತಿ, ಡಾ. ರಘುಪ್ರಸಾದ್, ಡಾ. ರವಿ ಜೈನಾಪುರ, ಡಾ. ಮುರಳೀಧರ ನಾಯಕ್ ಹಾಗೂ ಡಾ. ರವೀಂದ್ರ, ಸಿಟಿವಿಎಸ್ ಶಸ್ತ್ರಚಿಕಿತ್ಸಕ ಡಾ. ಸಾಯಿ ಸೂರಜ್ ಕೋಟೇರಾ, ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಪಟ್ಟಣಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ. ಕೀರ್ತಿ ಪಿ.ಎಸ್. ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಕೇಕ್ ಕತ್ತರಿಸುವ ಮೂಲಕ ವೈದ್ಯರ ದಿನವನ್ನು ಆಚರಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.