ಖರ್ಗೆ ಕುಟುಂಬದ ಟ್ರಸ್ಟ್ ಗೆ ಸರ್ಕಾರಿ ಜಮೀನು ಹಂಚಿಕೆ ; ಬಿಜೆಪಿ ವಾಗ್ದಾಳಿ
ಗೆ
ಭಂಡಾರಿ


ನವದೆಹಲಿ, 24 ಜೂನ್ (ಹಿ.ಸ.) :

ಆ್ಯಂಕರ್ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಗಂಭೀರ ಆರೋಪಗಳನ್ನು ಮಾಡಿದ್ದು, ಕರ್ನಾಟಕದಲ್ಲಿ 19 ಎಕರೆ ಸರ್ಕಾರಿ ಜಮೀನನ್ನು ಖರ್ಗೆ ಕುಟುಂಬದ ಟ್ರಸ್ಟ್ ಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ಬುಧವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿದ್ಧಾರ್ಥ ವಿಹಾರ ಟ್ರಸ್ಟ್ ಮೂಲಕ ಜಮೀನು ಹಂಚಿಕೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಭಂಡಾರಿ ಅವರ ಪ್ರಕಾರ, ಸಿದ್ಧಾರ್ಥ ವಿಹಾರ ಟ್ರಸ್ಟ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ, ಅವರ ಪತ್ನಿ ಹಾಗೂ ಅಳಿಯ ಟ್ರಸ್ಟಿಗಳಾಗಿದ್ದಾರೆ. ಈ ಟ್ರಸ್ಟ್ ಖರ್ಗೆ ಕುಟುಂಬದ ನಿಯಂತ್ರಣದಲ್ಲಿದ್ದು, ಕಾಂಗ್ರೆಸ್ ಸರ್ಕಾರವು ಕಲಬುರಗಿ ಜಿಲ್ಲೆಯಲ್ಲಿ 19 ಎಕರೆ ಸಾರ್ವಜನಿಕ ಜಮೀನನ್ನು ಈ ಟ್ರಸ್ಟ್ ಗೆ ನೀಡಿದೆ ಎಂದು ಅವರು ಆರೋಪಿಸಿದರು.

ಸಾರ್ವಜನಿಕರ ಆಸ್ತಿಯಾಗಿರುವ 19 ಎಕರೆ ಜಮೀನು, ಖರ್ಗೆ ಕುಟುಂಬದ ಸದಸ್ಯರೇ ಟ್ರಸ್ಟಿಗಳಾಗಿರುವ ಖಾಸಗಿ ಟ್ರಸ್ಟ್ನ ನಿಯಂತ್ರಣಕ್ಕೆ ಹೋಗಿದೆ. ಇದು ಅಧಿಕಾರದ ದುರುಪಯೋಗಕ್ಕೆ ಸ್ಪಷ್ಟ ಉದಾಹರಣೆ ಎಂದು ಭಂಡಾರಿ ಹೇಳಿದರು.

ಅವರು ಮುಂದುವರಿದು, ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ತಮ್ಮ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ವಿವಿಧ ಪ್ರದೇಶಗಳಲ್ಲಿ ಜಮೀನುಗಳನ್ನು ಪಡೆದುಕೊಂಡಿದ್ದು, ಬಡವರ ಹಕ್ಕಿನ ಭೂಮಿಯನ್ನೂ ಕಬಳಿಸಿದ್ದಾರೆ ಎಂದು ಆರೋಪಿಸಿದರು.

ಇದೇ ಮೊದಲ ಘಟನೆ ಅಲ್ಲ ಎಂದು ಹೇಳಿದ ಭಂಡಾರಿ, 2024ರಲ್ಲಿ ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್ಮೆಂಟ್ ಬೋರ್ಡ್ (ಕೆಐಎಡಿಬಿ) ಇದೇ ಟ್ರಸ್ಟ್ 5 ಎಕರೆ ಕೈಗಾರಿಕಾ ಜಮೀನನ್ನು ಹಂಚಿಕೆ ಮಾಡಿತ್ತು ಎಂದು ಹೇಳಿದರು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರೆ, ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದರು ಎಂದು ಅವರು ನೆನಪಿಸಿದರು.

ಆ 5 ಎಕರೆ ಜಮೀನಿನ ಉದ್ದೇಶ ಏರೋಸ್ಪೇಸ್ ಹಾಗೂ ರಕ್ಷಣಾ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆ ಎಂದು ಘೋಷಿಸಲಾಗಿತ್ತು. ಆದರೆ, ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಈ ಜಮೀನಿನಲ್ಲಿ ಘೋಷಿತ ಉದ್ದೇಶಕ್ಕೆ ಸಂಬಂಧಿಸಿದ ಯಾವುದೇ ಗಮನಾರ್ಹ ಚಟುವಟಿಕೆ ನಡೆದಿಲ್ಲ ಎಂದು ಬಿಜೆಪಿ ಆರೋಪಿಸಿದೆ.

ಏರೋಸ್ಪೇಸ್ ಮತ್ತು ರಕ್ಷಣಾ ಸಂಶೋಧನೆಗಾಗಿ ಮೀಸಲಾದ ಅಮೂಲ್ಯ ಕೈಗಾರಿಕಾ ಜಮೀನನ್ನು ಖರ್ಗೆ ಅವರೇ ಟ್ರಸ್ಟಿಯಾಗಿರುವ ಖಾಸಗಿ ಟ್ರಸ್ಟ್ ಸರ್ಕಾರ ಏಕೆ ನೀಡಿತು? ಈ ಹಂಚಿಕೆಯಲ್ಲಿ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು ಲಾಭ ಪಡೆದಿದ್ದಾರೆಯೇ? ಎಂದು ಭಂಡಾರಿ ಪ್ರಶ್ನಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande