
ಗಂಗಾವತಿ, 09 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಗಂಗಾವತಿ ನಗರ ಪೆÇಲೀಸ್ ಠಾಣೆಯ ಪಿ.ಐ.ಪ್ರಕಾಶ್ ಮಾಳೆ ಅವರಿಗೆ ಗಂಗಾವತಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಮುಕ್ಕುಂದಿ ಮತ್ತು ಪ್ರಧಾನ ಕಾರ್ಯದರ್ಶಿಯಾದ ಶಿವಪ್ಪ ನಾಯಕ ಅವರು ಗಂಗಾವತಿ ಶಾಂತಿ ಸುವವ್ಯಸ್ಥೆ ಕಾಪಾಡುವಲ್ಲಿ ಪ್ರಕಾಶ್ ಮಾಳೆ ಅವರ ಹೆಚ್ಚಿನ ಶ್ರಮ ವಹಿಸಿದ್ದಾರೆ.
ನಿಷ್ಪಕ್ಷಪಾತವಾಗಿ ನಡೆದುಕೊಂಡ ಹಿನ್ನಲೆಯಲ್ಲಿ ಜನತೆ ಅವರನ್ನು ಪ್ರೀತಿ ಗೌರವದಿಂದ ಕಾಣುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಗೌರವಧ್ಯಕ್ಷ ನಾಗರಾಜ್ ಇಂಗಳಗಿ, ತಾಲೂಕು ಉಪಾಧ್ಯಕ್ಷ ಜೋಗದ ಕೃಷ್ಣಪ್ಪ ನಾಯಕ, ಖಜಾಂಚಿ ಬಿ.ದೇವರಾಜ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ದೇಸಾಯಿ. ಕಾರ್ಯದರ್ಶಿ ವೃಷಬೇಂದ್ರ ಸ್ವಾಮಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಹನುಮೇಶ್ ಬಟಾರಿ. ಶರಣಯ್ಯ ಸ್ವಾಮಿ, ಪತ್ರಕರ್ತರಾದ ಎನ್ ವಿಜಯ್, ಅಕ್ಷಯ್ ಕುಮಾರ್, ವಸಂತ್ ರಾವ್ ಪಟೇಲ್, ಜೋಗದ ಗಾದಿಲಿಂಗಪ್ಪ, ಲಕ್ಷ್ಮಣ್. ಟಿ ಮಹೇಶ್, ವೆಂಕಟೇಶಮಾಂತ, ಮಂಜುನಾಥ್ ಗುಡ್ಲಾನೂರ್, ಮಲ್ಲೇಶ್ರಾವ್, ಶರಣಪ್ಪ ಉಪ್ಪಾರ್, ದಿವಾಕರ ಚಂದ್ರಪ್ಪ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್