ಗುರುಕುಲ ಶಾಲೆ ಪ್ರಕರಣ : ಅಪ್ರಾಪ್ತ ಆರೋಪಿ ಪೊಲೀಸ್ ವಶದಲ್ಲಿ
ಬಳ್ಳಾರಿ, 09 ಮಾರ್ಚ್ (ಹಿ.ಸ.) ಆ್ಯಂಕರ್: ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ಸಹಪಾಠಿ ಡಿ. ಹೇಮಂತ್ (15)ನ ಕೊಲೆಗೆ ಕಾರಣವಾಗಿರುವ ಅಪ್ರಾಪ್ತ ಬಾಲಕನು ಪೊಲೀಸರ ವಶದಲ್ಲಿದ್ದು, ತನಿಖಾ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯು ಅಪ್ರಾಪ್ತನು. ಅಲ್ಲದೇ, ಆತನ ಭದ್ರತೆ ಮ
ಗುರುಕುಲ ಶಾಲೆ ಪ್ರಕರಣ : ಅಪ್ರಾಪ್ತ ಆರೋಪಿ ಪೊಲೀಸ್ ವಶದಲ್ಲಿ


ಬಳ್ಳಾರಿ, 09 ಮಾರ್ಚ್ (ಹಿ.ಸ.)

ಆ್ಯಂಕರ್: ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ಸಹಪಾಠಿ ಡಿ. ಹೇಮಂತ್ (15)ನ ಕೊಲೆಗೆ ಕಾರಣವಾಗಿರುವ ಅಪ್ರಾಪ್ತ ಬಾಲಕನು ಪೊಲೀಸರ ವಶದಲ್ಲಿದ್ದು, ತನಿಖಾ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯು ಅಪ್ರಾಪ್ತನು.

ಅಲ್ಲದೇ, ಆತನ ಭದ್ರತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಐಜಿಪಿ ಡಾ. ಪಿ.ಎಸ್. ಹರ್ಷ ಅವರು ಸುದ್ದಿಗಾರರಿಗೆ ಸೋಮವಾರ ಸಂಜೆ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಏಳು ವಿದ್ಯಾರ್ಥಿಗಳು ಮತ್ತು ಸಮಾಜ ವಿಜ್ಞಾನದ ಬೋಧಕಿ ಬ್ಲೆಸ್ಸಿ ಅವರು ಗಾಯಗೊಂಡಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande