ರಾಷ್ಟ್ರೀಯ ಬಜೆಟ್ ನೀತಿ ಮಾರ್ಗಸೂಚಿ, ಅಲ್ಪಾವಧಿಯ ಲೆಕ್ಕಪತ್ರವಲ್ಲ : ಪ್ರಧಾನಿ ಮೋದಿ
ನವದೆಹಲಿ, 27 ಫೆಬ್ರವರಿ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಬಜೆಟ್ ಅನ್ನು ಅದರ ತಾತ್ಕಾಲಿಕ ಲಾಭ-ನಷ್ಟಗಳ ಆಧಾರದ ಮೇಲೆ ಅಲ್ಲ, ಅದು ಸೂಚಿಸುವ ದೀರ್ಘಾವಧಿಯ ನೀತಿ ದಿಕ್ಕಿನ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. “ಬಜೆಟ್ ಅಲ್ಪಾವಧಿಯ ವ್ಯವಹಾರ ದಾಖಲೆಯಲ್ಲ; ಅದು ದೇ
Pm


ನವದೆಹಲಿ, 27 ಫೆಬ್ರವರಿ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಬಜೆಟ್ ಅನ್ನು ಅದರ ತಾತ್ಕಾಲಿಕ ಲಾಭ-ನಷ್ಟಗಳ ಆಧಾರದ ಮೇಲೆ ಅಲ್ಲ, ಅದು ಸೂಚಿಸುವ ದೀರ್ಘಾವಧಿಯ ನೀತಿ ದಿಕ್ಕಿನ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. “ಬಜೆಟ್ ಅಲ್ಪಾವಧಿಯ ವ್ಯವಹಾರ ದಾಖಲೆಯಲ್ಲ; ಅದು ದೇಶದ ಭವಿಷ್ಯವನ್ನು ನಿರ್ಧರಿಸುವ ನೀತಿ ಮಾರ್ಗಸೂಚಿಯಾಗಿದೆ” ಎಂದು ಅವರು ಸ್ಪಷ್ಟಪಡಿಸಿದರು.

“ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ತಂತ್ರಜ್ಞಾನ, ಸುಧಾರಣೆಗಳು ಮತ್ತು ಹಣಕಾಸು” ಎಂಬ ಬಜೆಟ್ ನಂತರದ ವೆಬಿನಾರ್ ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಬಜೆಟ್ನ ಪರಿಣಾಮಕಾರಿತ್ವವನ್ನು ಕಾಂಕ್ರೀಟ್ ನಿಯತಾಂಕಗಳ ಆಧಾರದ ಮೇಲೆ ಅಳೆಯಬೇಕೆಂದು ಹೇಳಿದರು. ಮೂಲಸೌಕರ್ಯ ವಿಸ್ತರಣೆ, ಹಣಕಾಸಿನ ಹರಿವು ಸುಧಾರಣೆ, ಜೀವನ ಸುಗಮತೆ, ಪಾರದರ್ಶಕ ಆಡಳಿತ ಮತ್ತು ಹೊಸ ಅವಕಾಶಗಳ ಸೃಷ್ಟಿ—ಇವುಗಳ ಮೂಲಕ ಬಜೆಟ್ ಅನ್ನು ನೋಡಬೇಕು ಎಂದು ಅಭಿಪ್ರಾಯಪಟ್ಟರು.

ದೇಶವು “ಸುಧಾರಣಾ ಎಕ್ಸ್ಪ್ರೆಸ್” ಮೇಲೆ ಸಾಗುತ್ತಿದೆ ಎಂದು ಹೇಳಿದ ಪ್ರಧಾನಿ, ಈ ವೇಗವನ್ನು ಕಾಪಾಡಿಕೊಳ್ಳಲು ಸ್ಪಷ್ಟ ನೀತಿ ಉದ್ದೇಶ ಮತ್ತು ಅದರ ಸಾಧನೆಗಳ ಮೇಲೆ ಗಮನ ಕೇಂದ್ರೀಕರಿಸಬೇಕೆಂದರು. ಕೃತಕ ಬುದ್ಧಿಮತ್ತೆ , ಬ್ಲಾಕ್ಚೈನ್ ಮತ್ತು ಡೇಟಾ ವಿಶ್ಲೇಷಣೆಯ ಬಳಕೆಯಿಂದ ಪಾರದರ್ಶಕತೆ, ವೇಗ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಬಹುದೆಂದು ಅವರು ಸೂಚಿಸಿದರು. ಕುಂದುಕೊರತೆ ಪರಿಹಾರ ವ್ಯವಸ್ಥೆಗಳ ಪರಿಣಾಮಕಾರಿತ್ವವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದರು.

ಮೂಲಸೌಕರ್ಯ ಕ್ಷೇತ್ರದಲ್ಲಿ ಕಳೆದ 11 ವರ್ಷಗಳಲ್ಲಿ ಬಜೆಟ್ ವೆಚ್ಚ ₹2 ಲಕ್ಷ ಕೋಟಿಯಿಂದ ₹12 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಗಮನಿಸಿದ ಅವರು, ಸರ್ಕಾರದ ಬೃಹತ್ ಹೂಡಿಕೆ ಖಾಸಗಿ ವಲಯಕ್ಕೆ ಸ್ಪಷ್ಟ ಸಂದೇಶ ನೀಡುತ್ತದೆ ಎಂದರು. ಕೈಗಾರಿಕೆಗಳು ಮತ್ತು ಹಣಕಾಸು ಸಂಸ್ಥೆಗಳು ನವೀಕೃತ ಶಕ್ತಿಯೊಂದಿಗೆ ಮುಂದುವರಿಯಬೇಕು ಎಂದು ಕರೆ ನೀಡಿದರು.

ಯೋಜನೆಗಳ ಅನುಮೋದನೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯನ್ನು ಬಲಪಡಿಸುವುದು ಸಮಯ ಮತ್ತು ಹಣದ ವ್ಯರ್ಥತೆಯನ್ನು ತಪ್ಪಿಸಲು ಅಗತ್ಯ ಎಂದು ಪ್ರಧಾನಿ ಸಲಹೆ ನೀಡಿದರು. ವೆಚ್ಚ-ಲಾಭ ವಿಶ್ಲೇಷಣೆ ಹಾಗೂ ದೀರ್ಘಾವಧಿಯ ಪರಿಣಾಮಗಳನ್ನು ಪರಿಗಣಿಸಬೇಕು ಎಂದರು. ಬಾಂಡ್ ಮಾರುಕಟ್ಟೆ ಸುಧಾರಣೆಯಿಂದ ದೀರ್ಘಾವಧಿಯ ಬೆಳವಣಿಗೆ, ಸ್ಥಿರತೆ ಮತ್ತು ವಿದೇಶಿ ಹೂಡಿಕೆ ಹೆಚ್ಚಲು ಸಾಧ್ಯವಿದೆ. ಇದಕ್ಕಾಗಿ ನಂಬಿಕೆ, ದ್ರವ್ಯತೆ, ಹೊಸ ಹಣಕಾಸು ಸಾಧನಗಳು ಮತ್ತು ಉತ್ತಮ ಅಪಾಯ ನಿರ್ವಹಣೆ ಅಗತ್ಯವಿದೆ ಎಂದು ಅವರು ಹೇಳಿದರು.

ಬಜೆಟ್ ನೀಡಿರುವ ಹೊಸ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಮತ್ತು ಉತ್ತಮ ಫಲಿತಾಂಶಗಳಿಗಾಗಿ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande