



ಹೊಸಪೇಟೆ, 27 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಶ್ರೀ ಜಗದ್ಗುರು ಕೊಟ್ಟೂರೇಶ್ವರ ಜಾತ್ರ ಮಹೋತ್ಸವ -26 ರ ಸರ್ವಧರ್ಮ ಸಮನ್ವಯರ 9ನೇ ವರ್ಷದ ಮಹಾ ರಥೋತ್ಸವವು ಶುಕ್ರವಾರ ಸಂಜೆ ಅದ್ದೂರಿಯಾಗಿ ನೆರವೇರಿತು.
ಬೈಲುವದ್ದಿಗೇರಿ ಗ್ರಾಮದ ಭಕ್ತರು ತೇರಿನ ಹಗ್ಗವನ್ನು, ಹೊಸಪೇಟೆಯ ತಳವಾರಕೇರಿ ಭಕ್ತರು ಹೂಮಾಲೆಯನ್ನು ಮೆರವಣಿಗೆಯಲ್ಲಿ ತಂದು, ರಥಕ್ಕೆ ಅರ್ಪಿಸಿದ ನಂತರ, ಸರ್ವಧರ್ಮಗಳ ಮುಖಂಡರು ತಮ್ಮ ತಮ್ಮ ಧರ್ಮದ ಗ್ರಂಥಗಳನ್ನು ಮೆರವಣಿಗೆಯಲ್ಲಿ ತಂದು, ರಥದಲ್ಲಿ ಇರಿಸಿದ ನಂತರ, ರಥವನ್ನು ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಸರ್ವರೂ ಎಳೆದರು.
ವಳಬಳ್ಳಾರಿಯ ಶ್ರೀ ಸುವರ್ಣಗಿರಿಯ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಹಾಗೂ ವಿವಿಧ ಮಠಧೀಶರರು ಮತ್ತು ಗಣ್ಯರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್