ಉತ್ತರ ಪ್ರದೇಶದಲ್ಲಿ ಬೆಂಕಿ ಅವಘಡ ; ಐದು ಮಕ್ಕಳು ಸೇರಿ ಆರು ಮಂದಿ ದುರ್ಮರಣ
ಮೀರತ್, 24 ಫೆಬ್ರವರಿ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಮೀರತ್ ನಗರದ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿದ್ವಾಯಿ ನಗರ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಐದು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ವಿ
Fire death


ಮೀರತ್, 24 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದ ಮೀರತ್ ನಗರದ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿದ್ವಾಯಿ ನಗರ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಐದು ಮಕ್ಕಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ವಿ.ಕೆ. ಸಿಂಗ್ ನೀಡಿರುವ ಮಾಹಿತಿಯಂತೆ , ಜವಳಿ ವ್ಯಾಪಾರಿ ಇಕ್ಬಾಲ್ ಅಹ್ಮದ್ ಅವರ ಮೂವರು ಅಂತಸ್ತಿನ ಮನೆ ಕಿದ್ವಾಯಿ ನಗರ ಬೀದಿ ಸಂಖ್ಯೆ 3ರಲ್ಲಿ ಇದೆ. ಅವರ ಪುತ್ರರಾದ ಅಸೀಮ್ ಮತ್ತು ಫಾರೂಕ್ ಕುಟುಂಬ ಸಮೇತರಾಗಿ ಅಲ್ಲಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಇಕ್ಬಾಲ್ ಹಾಗೂ ಅವರ ಪುತ್ರರು ತರಾವೀಹ್ ನಮಾಜ್ಗಾಗಿ ಮಸೀದಿಗೆ ತೆರಳಿದ್ದ ವೇಳೆ ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು.

ಕುಟುಂಬಸ್ಥರು ವಿಷಯವನ್ನು ಅರಿಯುವಷ್ಟರಲ್ಲಿ ಇಡೀ ಮನೆ ಬೆಂಕಿಗಾಹುತಿಯಾಯಿತು. ನೆರೆಹೊರೆಯವರು ಘಟನೆ ಬಗ್ಗೆ ತಕ್ಷಣ ಮಾಹಿತಿ ನೀಡಿದರು. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಕಿರಿದಾದ ರಸ್ತೆಗಳ ಕಾರಣದಿಂದ ವಾಹನಗಳು ಮನೆ ಸಮೀಪಕ್ಕೆ ತಲುಪಲು ಅಸಾಧ್ಯವಾಯಿತು. ಬಳಿಕ ನೆರೆಮನೆಯ ಛಾವಣಿಯ ಮೂಲಕ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಲಾಯಿತು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಘಟನಾ ಸ್ಥಳಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ವಿ.ಕೆ. ಸಿಂಗ್, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಪಾಂಡೆ, ಪೊಲೀಸ್ ಉಪ ಮಹಾನಿರ್ದೇಶಕ ಕಲಾನಿಧಿ ನೈಥಾನಿ ಹಾಗೂ ನಗರ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಸೀಮ್ ಅವರ ಪತ್ನಿ ರುಖ್ಸರ್ (30), ಅವರ ಮೂರು ವರ್ಷದ ಮಗ ಅಕ್ಡಾಸ್, ಅವಳಿ ಹೆಣ್ಣುಮಕ್ಕಳಾದ ನಬಿಯಾ ಮತ್ತು ಇನಾಯತ್, ಫಾರೂಕ್ ಅವರ ಮಕ್ಕಳಾದ ಮೆಹ್ವಿಶ್ (12) ಹಾಗೂ ಹಮ್ಮದ್ (4) ಮೃತಪಟ್ಟವರಾಗಿದ್ದಾರೆ. ಸುಟ್ಟಗಾಯಗಳು ಹಾಗೂ ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಕ್ಬಾಲ್ ಅವರ ಪತ್ನಿ ಅಮೀರ್ ಬಾನೋ ಮತ್ತು ಶಹಜಾದ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಉಂಟಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande