ಕೋಲಾರ, 04 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಂವಿದಾನ ಮತ್ತು ಕಾನೂನಿನ ಪ್ರಕಾರ ಸರ್ವರೂ ಸಮಾನರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಹಾಗೂ ಶೋಷಣೆಯನ್ನು ತಡೆಗಟ್ಟುವ ಸಲುವಾಗಿ ಮಹಿಳೆಯರಿಗೆ ಕಾನೂನು ಅರಿವು ಪ್ರಮುಖ್ಯ ಪಾತ್ರ ವಹಿಸುತ್ತದೆ. ಎಂದು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಮಗದ ಜಿಲ್ಲಾ ವ್ಯವಸ್ಥಾಪಕಿ ಶರೀನ್ ತಾಜ್ ಹೇಳಿದರು.
ಕೋಲಾರ ನಗರದ ನಿಸ್ಸಾರ್ ನಗರದಲ್ಲಿರುವ ಅಂಗನವಾಡಿ ಕೇಂದ್ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಗಮನ ಮಹಿಳಾ ಸಮೂಹ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಮೇಲೆ ದೌರ್ಜನ್ಯ ಶೋಷಣೆ ವಿರುದ್ದ ಹೋರಾಡಲು ಪ್ರಮುಖವಾಗಿ ಕಾನೂನಿನ ಅರಿವು ಮುಖ್ಯವಾಗಿ ಅರಿತಿರಬೇಕು ಅಲ್ಲದೆ. ಕೌಟುಂಬಿಕ ದೌರ್ಜನ್ಯ, ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ ಈ ನಿಟ್ಟಿನಲ್ಲಿ ಗಮನ ಮಹಿಳಾ ಸಂಸ್ಥೆ ಮಹಿಳೆಯರಿಗೆ ಆರೋಗ್ಯ ಬಗ್ಗೆ ಅರಿವು , ಸುರಕ್ಷತೆಯ ಕುರಿತು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಹಿಳೆಯರು ಕಾನೂನಿನ ಕುರಿತು ಅರಿತುಕೊಂಡು ಸಂಘಟಿತರಾಗಬೇಕು ಎಂದು ಕಿವಿ ಮಾತು ಹೇಳಿದರು.
ಗಮನ ಮಹಿಳಾ ಸಮೂಹದ ಸದಸ್ಯೆ ಲಕ್ಷಿ ಮಾತನಾಡಿ ಮಹಿಳೆಯರು ಮೊದಲು ಸಂಘಟಿತರಾಗಬೇಕು, ಸರ್ಕಾರದ ವಿವಿದ ಇಲಾಖೆಗಳಡಿ ದೊರೆಯಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದಲ್ಲಿ ಹಾರ್ಥಿಕವಾಗಿ ಸಬಲರಾಗಬೇಕು ಅಲ್ಲದೆ ತಮ್ಮ ಆರೋಗ್ಯ ಬಗ್ಗೆಯೂ ಖಾಳಜಿ ವಹಿಸಿಕೊಳ್ಳಬೇಕು ಎಂದರಲ್ಲದೆ, ವಿವಿಧ ಇಲಾಖೆಗಳಿಂದ ಮಹಿಳೆಯರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗೃಹಾಧಾರಿತ ಮಹಿಳಾ ಕಾರ್ಮಿಕರಿಗೆ ಕಾನೂನು ಅರಿವಿನ ಜೊತೆಗೆ ಸಂಘಟಿತರಾಗಬೇಕು, ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ವಿಧ್ಯಾಭ್ಯಾಸ ನೀಡಬೇಕು ಎಂದು ತಿಳಿಸಲಾಯಿತು.
ಆರೋಗ್ಯ ಇಲಾಖೆಯ ಸಲಹಾ ಅಧಿಕಾರಿ ಮಹ್ಮದ್ ಮಾತನಾಡಿ ಮಾದಕ ವಸ್ತುಗಳ ಬಳಕೆ ಮತ್ತು ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರವಾಗಿ ಮಹಿಳೆಯರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಅನೀಲ್ ಕುಮಾರ್, ಚೇತನ್, ಗಮನ ಸಂಸ್ಥೆಯ ಸದಸ್ಯೆ ಶಿಲ್ಪಾ ಸೇರಿದಂತೆ ಅಸ್ಲಾಂ, ಜೌಹಾರ್ ಭಾನು, ಸೀಮ ಅಂಜುಮ್, ಉಮ್ಮೆ ಅಲ್ಮಾಸ್ ಸೇರಿಂದತೆ ಗೃಹಾಧಾರಿತ ಮಹಿಳಾ ಕಾರ್ಮಿಕರು ಹಾಗು ಸ್ಥಳಿಯ ಮಹಿಳೆಯರು ಪಾಲ್ಗೊಂಡಿದ್ದರು.
ಚಿತ್ರ : ಕೋಲಾರ ನಗರದ ನಿಸ್ಸಾರ್ ನಗರದಲ್ಲಿರುವ ಅಂಗನವಾಡಿ ಕೇಂದ್ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಗಮನ ಮಹಿಳಾ ಸಮೂಹ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್