ನವದೆಹಲಿ, 26 ಜುಲೈ (ಹಿ.ಸ.) :
ಆ್ಯಂಕರ್ : ಕಾರ್ಗಿಲ್ ವಿಜಯ್ ದಿವಸ್ ದೇಶದ ಶೌರ್ಯ ಮತ್ತು ಸ್ವಾಭಿಮಾನವನ್ನು ವಿಶ್ವದ ಮುಂದೆ ತೆರೆದಿಡುವ ಐತಿಹಾಸಿಕ ದಿನವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಮೀರ್ಪುರ ಸಂಸದ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ದೆಹಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಕಾರ್ಗಿಲ್ ವಿಜಯ ದಿನದ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ಇದು ಯಾವುದೇ ರಾಜಕೀಯ ಪಕ್ಷದ ಜಯವಲ್ಲ, ಇದು ದೇಶದ ಮತ್ತು ಅದರ ವೀರ ಪರಂಪರೆಯ ವಿಜಯವಾಗಿದೆ. ಭಾರತೀಯ ಸೇನೆ ದೇಶದ ರಕ್ಷಣೆಗೆ ತನ್ನ ಶೌರ್ಯವನ್ನು ತೋರಿಸಿದೆ. ನಮ್ಮ ಯೋಧರು ತಮ್ಮ ರಕ್ತದ ಹನಿ ಹನಿಯನ್ನು ಹರಿಸಿ, ದೇಶದ ಭದ್ರತೆಗೆ ಬಲಿಯಾಗಿದ್ದಾರೆ, ಎಂದರು.
ಅನುರಾಗ್ ಠಾಕೂರ್ ಅವರು ಕಾರ್ಗಿಲ್ ಯುದ್ಧದಲ್ಲಿ ಹಿಮಾಚಲ ಪ್ರದೇಶದ ವೀರ ಯೋಧರ ಪಾತ್ರವನ್ನು ಸ್ಮರಿಸುತ್ತಾ, ಪರಮ ವೀರ ಚಕ್ರ ವಿಜೇತ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಸಂಜಯ್ ಕುಮಾರ್ ಹಾಗೂ ಹುತಾತ್ಮ ಕ್ಯಾಪ್ಟನ್ ಸೌರಭ್ ಕಾಲಿಯಾ ಅವರ ತ್ಯಾಗವನ್ನು ನೆನೆದರು. “ಈ ವೀರರ ಕಥೆಗಳು ಶತಮಾನಗಳವರೆಗೆ ದೇಶದ ಯುವಕರಿಗೆ ಪ್ರೇರಣೆಯಾಗುತ್ತವೆ,” ಎಂದರು.
ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ವಿನೋದ್ ಖಂಡರೆ ಮತ್ತು ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದ ನಿರ್ದೇಶಕ ಕರ್ನಲ್ ಆಕಾಶ್ ಪಾಟೀಲ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa