ಬಸವ ಸಂಸ್ಕೃತಿ ಅಭಿಯಾನ ಪೂರ್ವಭಾವಿ ಸಭೆ
ಗದಗ, 12 ಜುಲೈ (ಹಿ.ಸ.) ಆ್ಯಂಕರ್ : 2024 ಸೆಪ್ಟೆಂಬರ್ 9 ರಂದು ಗದಗ ಜಿಲ್ಲಾ ಕೇಂದ್ರಕ್ಕೆ ಬರುವ ''ಬಸವ ಸಂಸ್ಕೃತಿ ಅಭಿಯಾನ''ವನ್ನು ಯಶಸ್ವಿಗೊಳಿಸಲು ಶ್ರೀ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಸೇರಿದ್ದ ಸಿದ್ಧತಾ ಸಭೆಯಲ್ಲಿ ಲಿಂಗಾಯತ ಹಾಗೂ ಬಸವಪರ ಸಂಘಟನೆಗಳು ನಿರ್ಧರಿಸಿದವು. ಲಿಂಗಾಯತ ಮಠಾಧಿಪತಿಗಳ
ಪೋಟೋ


ಗದಗ, 12 ಜುಲೈ (ಹಿ.ಸ.)

ಆ್ಯಂಕರ್ : 2024 ಸೆಪ್ಟೆಂಬರ್ 9 ರಂದು ಗದಗ ಜಿಲ್ಲಾ ಕೇಂದ್ರಕ್ಕೆ ಬರುವ 'ಬಸವ ಸಂಸ್ಕೃತಿ ಅಭಿಯಾನ'ವನ್ನು ಯಶಸ್ವಿಗೊಳಿಸಲು ಶ್ರೀ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಸೇರಿದ್ದ ಸಿದ್ಧತಾ ಸಭೆಯಲ್ಲಿ ಲಿಂಗಾಯತ ಹಾಗೂ ಬಸವಪರ ಸಂಘಟನೆಗಳು ನಿರ್ಧರಿಸಿದವು. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ನೇತೃತ್ವ, ಲಿಂಗಾಯತ-ಬಸವಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಸೆಪ್ಟೆಂಬರ್ 1 ರಿಂದ ಅಕ್ಟೋಬರ್‍ವರೆಗೆ ರಾಜ್ಯಾದ್ಯಂತ 'ಬಸವ ಸಂಸ್ಕೃತಿ ಅಭಿಯಾನ' ನಡೆಯಲಿದೆ.

ಲಿಂಗಾಯತ ಮಠಾಧೀಶರ ಒಕ್ಕೂಟದ ಮುಖ್ಯಸ್ಥರಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಭೆಯ ಸಾನಿಧ್ಯ ವಹಿಸಿ, ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಒಂದು ವರ್ಷವಾಗಿದೆ. ಬಸವಣ್ಣನವರು ಕರ್ನಾಟಕ ಮಾತ್ರವಲ್ಲ, ವಿಶ್ವದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಕಾರಣ ಅವರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ನೈತಿಕ, ಸಾಂಸ್ಕೃತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪರಿವರ್ತನೆ ತಂದವರು. ಜಾತಿ, ಮತ, ಲಿಂಗ, ಬಡವ-ಬಲ್ಲಿದ ಎಂಬ ಬೇಧವಿಲ್ಲದ ಸಮಾಜವನ್ನು ನೆಲೆಗೊಳಿಸಿದವರು. ಎಲ್ಲರಿಗೂ ನೆಲ ಜಲ ಒಂದೇ ಆಗಿರುವಾಗ ತನ್ನನ್ನು ತಾನು ಅರಿತರೆ ಕುಲ ಒಂದೇ ಎಂದು ಸಾರಿದವರು. ಇಂಥ ದಾರ್ಶನಿಕರ ಆಶಯದಂತೆ ಸಮಸಮಾಜ ನಿರ್ಮಾಣ, ವ್ಯಸನಮುಕ್ತ ಸಮಾಜ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವನ್ನು ಮೂಡಿಸುವದು, ಮಹಿಳೆಯರ ಘನತೆಯನ್ನು ಕಾಪಾಡುವದು, ವ್ಯಕ್ತಿತ್ವ ವಿಕಸನ ಇತ್ಯಾದಿ ಈ ಬಸವ ಸಂಸ್ಕೃತಿ ಅಭಿಯಾನದ ಆಶಯಗಳಾಗಿವೆ. ಆದ್ದರಿಂದ ಈ ಅಭಿಯಾನದಲ್ಲಿ ನಾವು ನೀವೆಲ್ಲರೂ ಭಾಗವಹಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ಮಾತನಾಡಿ, ಅವರು ಈ ಅಭಿಯಾನದ ಕಾರ್ಯಕ್ರಮಕ್ಕೆ ಎಲ್ಲರೂ ತನು, ಮನ, ಧನ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು.

ಜೆ.ಎಲ್.ಎಂ. ಜಿಲ್ಲಾ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಭಿಯಾನದ ರೂಪುರೇಷೆಗಳನ್ನು ವಿವರಿಸಿದರು.

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಈ ಅಭಿಯಾನದ ಪೂರ್ವ ಎಲ್ಲಾ ತಾಲೂಕುಗಳಲ್ಲಿ ಜಾಗ್ರತೆ ಮೂಡಿಸಿ ಹೆಚ್ಚು ಯುವಕರು ಪಾಲ್ಗೊಳ್ಳುವಂತೆ ಮಾಡಬೇಕೆಂದರು.

ಮುಂಡರಗಿ ತಾಲೂಕು ಜಾ.ಲಿಂ. ಮಹಾಸಭಾ ಅಧ್ಯಕ್ಷ ನವಲಗುಂದ ಮಾತನಾಡಿ, ಈ ಅಭಿಯಾನದ ಕಾರ್ಯಕ್ರಮಕ್ಕೆ ಹೆಚ್ಚು ಪ್ರಚಾರ ಮಾಡಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಬೇಕೆಂದರು.

ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ.ಎ.ಬಳಿಗೇರ ಅವರು ಮಾತನಾಡಿ, ಅಭಿಯಾನದ ಕಾರ್ಯಕ್ರಮಕ್ಕೆ ವಿವಿಧ ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ನೀಡಬೇಕು ಎಂದು ಸಲಹೆ ಕೊಟ್ಟರು.

ಗದಗ ಬೆಟಗೇರಿ ಬಸವದಳದ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ಈ ಅಭಿಯಾನಕ್ಕೆ ಬಸವ ದಳದ ವತಿಯಿಂದ 10,000/-, ಗಜೇಂದ್ರಗಡ ತಾಲೂಕು ಶ.ಸಾ.ಪ. ಅಧ್ಯಕ್ಷ ಬಸವರಾಜ ಕೊಟಗಿ ತಾಲೂಕಿನ ವತಿಯಿಂದ 25000/-, ಬಸವರಾಜ ಹಿರೇಹಡಗಲಿ 25000/-, ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ ವೈಯಕ್ತಿಕವಾಗಿ 10,000/ ರೂ. ಹಾಗೂ ಜಾತ್ರಾ ಕಮೀಟಿಯ ವತಿಯಿಂದ 25000/-, ಈರಣ್ಣ ಮುದಗಲ್ಲ 5000/, ಪ್ರೋ. ಎನ್.ಎಮ್. ಪವಾಡಿಗೌಡ್ರ 5000/, ಶಿವಕುಮಾರ ರಾಮನಕೊಪ್ಪ 10,000/, ಶರಣು ಗದಗ 10,000/, ಎಸ್.ಎಸ್. ಕಳಸಾಪೂರಶೆಟ್ರ 5000/, ಎಸ್.ಎಸ್. ಶೆಟ್ಟರ ವಕೀಲರು 25000/, ರತ್ನಕ್ಕ ಪಾಟೀಲ 2000/ ಹಾಗೂ ಷಣ್ಮುಖ ನಂದಗಾವಿ 1000/ ರೂಪಾಯಿಗಳನ್ನು ಕೊಡುವ ವಾಗ್ಧಾನ ಮಾಡಿ ನಾವೆಲ್ಲರೂ ಅಭಿಯಾನದಲ್ಲಿ ಪಾಲ್ಗೋಳ್ಳುತ್ತೇವೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಜೆ.ಎಲ್.ಎಂ. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಚಟ್ಟಿ ಅವರು ವಹಿಸಿ ಸಭೆಗೆ ಬಂದವರಿಗೆ ಧನ್ಯವಾದ ಹೇಳಿದರು. ಮುಂದೆ ಜಿಲ್ಲೆಯಲ್ಲಿ ನಡೆಯುವ ಅಭಿಯಾನವನ್ನು ಯಶಸ್ವಿ ಮಾಡಲು ಎಲ್ಲರಿಂದಲೂ ಸಹಕಾರ ಕೋರಿದರು.

ಪಾಲಾಕ್ಷಿ ಗುಣದಿನ್ನಿ , ಬಸವರಾಜ ಅಂಗಡಿ, ಗೌರಕ್ಕ ಬಡಿಗಣ್ಣವರ, ಗಿರಿಜಾ ಹಸಬಿ, ಪೆÇ್ರ. ಕೆ.ಎಚ್. ಬೇಲೂರ, ಚನ್ನಬಸಪ್ಪ ಕಂಠಿ ಮತ್ತಿತರರು ಮಾತನಾಡಿದರು.

ಸಭೆಯಲ್ಲಿ ಜಾ.ಲಿಂ. ಮಹಾಸಭಾ, ಬಸವದಳ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ, ತೋಂಟದಾರ್ಯ ಜಾತ್ರಾ ಸಮಿತಿ, ಲಿಂಗಾಯತ ಪ್ರಗತಿಶೀಲ ಸಂಘ, ಯೋಗ ಪಾಠಶಾಲೆ, ಕುಂಬಾರ, ಮಡಿವಾಳ, ಹಡಪದ ಸಮಾಜ, ದಲಿತ, ಪ್ರಗತಿಪರ ಸಂಘಟನೆಗಳ ಪ್ರಮುಖರು, ಎಲ್ಲಾ ತಾಲೂಕುಗಳ ಲಿಂಗಾಯತ, ಬಸವಪರ ಸಂಘಟನೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗಿಯಾಗಿದ್ದರು.

ಆರಂಭದಲ್ಲಿ ಮಹಾಸಭಾದ ಮಹಿಳಾ ಘಟಕದ ಸದಸ್ಯರು ವಚನ ಪ್ರಾರ್ಥನೆ ಮಾಡಿದರು. ಸ್ವಾಗತವನ್ನು ಶರಣ ಪ್ರಕಾಶ ಅಸುಂಡಿ, ಶರಣೆ ಮಂಜುಳಾ ಹಾಸಿಲಕರ ಅವರು ವಚನ ಮಂಗಲ ಹಾಡಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande