ಹೊಸಪೇಟೆ, 28 ಜೂನ್ (ಹಿ.ಸ.)
ಆ್ಯಂಕರ್: ತುಂಗಭದ್ರಾ ಜಲಾಶಯಕ್ಕೆ 60 ಸಾವಿರ ಕ್ಯುಸೆಕ್ಗೂ ಅಧಿಕ ಪ್ರಮಾಣದ ನೀರಿನ ಒಳಹರಿವು ಇರುವ ಕಾರಣ ಆಣೆಕಟ್ಟೆಯ ಸುರಕ್ಷತೆಗಾಗಿ ಯಾವುದೇ ಸಂದರ್ಭದಲ್ಲಿ ನೀರನ್ನು ನದಿಗೆ ಹರಿಬಿಡುವುದಾಗಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 61.88 ಟಿಎಂಸಿಗಿಂತಲೂ ಹೆಚ್ಚಿನ ಪ್ರಮಾಣದ ನೀರಿದೆ. ಆಣೆಕಟ್ಟೆಯ ಕೆಲ ಕ್ರಸ್ಟ್ಗೇಟ್ಗಳನ್ನು ತೆರೆದು 25 ಸಾವಿರ ಕ್ಯುಸೆಕ್ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರನ್ನು ಹೊರ ಹರಿದುಬಿಡುವ ಸಾಧ್ಯತೆಗಳಿವೆ.
1,633 ಅಡಿ ಎತ್ತರದ ಆಣೆಕಟ್ಟೆಯಲ್ಲಿ ಸದ್ಯ 1,620.20 ಅಡಿ ಮಟ್ಟದಲ್ಲಿ ನೀರಿದೆ. 105.78 ಟಿಎಂಸಿ ಅಡಿ ಸಂಗ್ರಹ ಸಾಮಥ್ರ್ಯದ ಜಲಾಶಯಕ್ಕೆ ಪ್ರತಿದಿನ 4 ಟಿಎಂಸಿಗೂ ಅಧಿಕ ಪ್ರಮಾಣದಲ್ಲಿ ನೀರಿನ ಒಳಹರಿವಿದೆ.
ಆಣೆಕಟ್ಟೆಯ ಕ್ರಸ್ಟ್ಗೇಟ್ಗಳು ದುರ್ಬಲವಾಗಿರುವ ಕಾರಣ ಈ ಮಳೆಗಾಲದಲ್ಲಿ ಗರಿಷ್ಠ 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಿಸಲು ನಿರ್ಧರಿಸಲಾಗಿದೆ. ಕಾರಣ ನೀರನ್ನು ಅವಧಿಗೆ ಮುಂಚಿತವಾಗಿಯೇ ನದಿಗೆ ಹರಿಬಿಡಲಾಗುತ್ತಿದೆ.
ಕಳೆದ ವರ್ಷ ಜುಲೈ ಮೂರನೇ ವಾರ ಅಣೆಕಟ್ಟು ಬಹುತೇಕ ಭರ್ತಿಯ ಹಂತಕ್ಕೆ ಬಂದ ಕಾರಣ ಕ್ರಸ್ಟ್ಗೇಟ್ಗಳನ್ನು ತೆರೆದು ನೀರನ್ನು ನದಿಗೆ ಹರಿಸಲಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್