ಪೀಠಿಕೆ ಬದಲಾವಣೆ ಸಂವಿಧಾನದ ಆತ್ಮಕ್ಕೆ ದ್ರೋಹ: ಉಪರಾಷ್ಟ್ರಪತಿ ಧಂಖರ್
ನವದೆಹಲಿ, 28 ಜೂನ್ (ಹಿ.ಸ.): ಆ್ಯಂಕರ್:ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು 1976ರ ತುರ್ತು ಪರಿಸ್ಥಿತಿಯ ವೇಳೆ ಸಂವಿಧಾನದ ಪೀಠಿಕೆಗೆ ಸೇರಿಸಲಾದ ''ಸಮಾಜವಾದಿ'' ಮತ್ತು ''ಜಾತ್ಯತೀತ'' ಪದಗಳನ್ನು ತೀವ್ರವಾಗಿ ಟೀಕಿಸಿದರು. ಪೀಠಿಕೆ ಸಂವಿಧಾನದ ಶಾಶ್ವತ ಆತ್ಮವಾಗಿದ್ದು, ಅದರಲ್ಲಿ ಬದಲಾವಣೆ ಭಾರತೀ
Vice President


ನವದೆಹಲಿ, 28 ಜೂನ್ (ಹಿ.ಸ.):

ಆ್ಯಂಕರ್:ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರು 1976ರ ತುರ್ತು ಪರಿಸ್ಥಿತಿಯ ವೇಳೆ ಸಂವಿಧಾನದ ಪೀಠಿಕೆಗೆ ಸೇರಿಸಲಾದ 'ಸಮಾಜವಾದಿ' ಮತ್ತು 'ಜಾತ್ಯತೀತ' ಪದಗಳನ್ನು ತೀವ್ರವಾಗಿ ಟೀಕಿಸಿದರು. ಪೀಠಿಕೆ ಸಂವಿಧಾನದ ಶಾಶ್ವತ ಆತ್ಮವಾಗಿದ್ದು, ಅದರಲ್ಲಿ ಬದಲಾವಣೆ ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದರು.

ಅವರು 'ಅಂಬೇಡ್ಕರ್ ಸಂದೇಶ' ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿ, ಭಾರತವನ್ನು ಹೊರತುಪಡಿಸಿ ಯಾವುದೇ ದೇಶ ತನ್ನ ಪೀಠಿಕೆಯಲ್ಲಿ ಬದಲಾವಣೆ ಮಾಡಿಲ್ಲ ಎಂದರು. ಸುಪ್ರೀಂ ಕೋರ್ಟ್‌ನ ಕೇಶವಾನಂದ ಭಾರತಿ ಮತ್ತು ಗೋಲಕ್‌ನಾಥ್ ತೀರ್ಪುಗಳನ್ನೂ ಉಲ್ಲೇಖಿಸಿದರು. ಸಂಸತ್ತು ಮತ್ತು ಶಾಸನ ಸಭೆಗಳ ಘನತೆ ಉಳಿಸಬೇಕೆಂದು ಕರೆ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande