ಉಧಂಪುರ, 28 ಜೂನ್ (ಹಿ.ಸ.):
ಆ್ಯಂಕರ್:ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್ಗಢ್ ಅರಣ್ಯ ಪ್ರದೇಶದಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮೂವರು ಭಯೋತ್ಪಾದಕರ ಶೋಧಕ್ಕಾಗಿ ಭದ್ರತಾ ಪಡೆಗಳು ಮೂರನೇ ದಿನವೂ ವ್ಯಾಪಕ ಕಾರ್ಯಾಚರಣೆ ಮುಂದುವರಿಸಿವೆ. ಗುರುವಾರ ನಡೆದ ಎನ್ಕೌಂಟರ್ನಲ್ಲಿ ಗುಂಪಿನ ಓರ್ವ ಪ್ರಮುಖ ಉಗ್ರ ಮೃತಪಟ್ಟಿದ್ದು, ಉಳಿದವರು ಕಾಡಿನಲ್ಲಿ ಅಡಗಿಕೊಂಡಿರುವ ಶಂಕೆ ಇದೆ.
ಶೋಧ ಕಾರ್ಯಾಚರಣೆಗಾಗಿ ಸೇನೆ, ಪೊಲೀಸ್ ಹಾಗೂ ಪ್ಯಾರಾ ಕಮಾಂಡೋಗಳ ಜಂಟಿ ತಂಡವು ಡ್ರೋನ್ ಹಾಗೂ ಸ್ನಿಫರ್ ಶ್ವಾನಗಳ ಸಹಾಯದಿಂದ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಸುತ್ತುವರಿದ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa