ರೋಟರಿ ಕ್ಲಬ್ ಗಣನೀಯ ಸೇವೆಗೆ ರೋ.ನಾಗಾನಂದ ಕೆಂಪರಾಜ್ ೭ ಸ್ಟಾರ್ ಡೈಮಂಡ್ ಪ್ರಶಸ್ತಿ
ರೋಟರಿ ಕ್ಲಬ್ ಗಣನೀಯ ಸೇವೆಗೆ ರೋ.ನಾಗಾನಂದ ಕೆಂಪರಾಜ್ ೭ ಸ್ಟಾರ್ ಡೈಮಂಡ್ ಪ್ರಶಸ್ತಿ
ಕೋಲಾರದ ರೋಟರಿ ಕ್ಲಬ್ ಸಂಸ್ಥೆಗೆ ೭ ಸ್ಟಾರ್ ಡೈಮಂಡ್ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.


ಕೋಲಾರ,ಜೂ.೨೬ (ಹಿ.ಸ) :

ಆ್ಯಂಕರ್ : ಬೆಂಗಳೂರಿನ ನಿಮ್ಹಾನ್ಸ್ ಅಡಿಟೋರಿಯಂನಲ್ಲಿ ನಡೆದ ರೋಟರಿ ೩೧೯೧ ಅವಾರ್ಡ್ಸ್ ೨೦೨೪-೨೫ನೇ ಕಾರ್ಯಕ್ರಮದಲ್ಲಿ ೮೭ ಕ್ಲಬ್‌ಗಳಲ್ಲಿ ನಮ್ಮ ರೋಟರಿ ಕ್ಲಬ್ ೨೦೨೪-೨೫ನೇ ಸಾಲಿನ ೭ ಸ್ಟಾರ್ ಡೈಮಂಡ್ ಕ್ಲಬ್ ಪ್ರಶಸ್ತಿ ರೋ.ನಾಗಾನಂದ ೭ ಸ್ಟಾರ್ ಡೈಮಂಡ್ ಅಧ್ಯಕ್ಷ ಪ್ರಶಸ್ತಿಗಳನ್ನು ಪಡೆದು ರೋಟರಿ ೩೧೯೧ ಅತ್ಯುತ್ತಮ ಕ್ಲಬ್ ಆಗಿ ಹೊರಬಂದಿದೆ ಹಾಗೂ ಕೋಲಾರ ಜೋನ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ ಎಂದು ಅಧ್ಯಕ್ಷ ರೋ.ನಾಗಾನಂದ ಕೆಂಪರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರದ ರೋಟರಿ ಕ್ಲಬ್‌ನಲ್ಲಿ ನಡೆದ ಅವಾರ್ಡ್ಸ್ ನೈಟ್ ಕಾರ್ಯಕ್ರಮದಲ್ಲಿ ಕ್ಲಬ್‌ನ ಅಧ್ಯಕ್ಷ ರೋ.ನಾಗಾನಂದ ಕೆಂಪರಾಜ್ ಮಾತನಾಡಿ, ಮನುಷ್ಯ ಹುಟ್ಟಿದ ಮೇಲೆ ಸಾವು ಖಚಿತ. ಅದರ ನಡುವಿನ ಜೀವನದಲ್ಲಿ ಉತ್ತಮವಾದ ಸೇವಾ ಕಾರ್ಯಗಳನ್ನು ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ನಾನು ೨೪-೨೫ನೇ ಸಾಲಿನ ಕ್ಲಬ್‌ನ ಅಧ್ಯಕ್ಷನಾಗಿ ಸದಸ್ಯರು, ಅನೇಕ ಸ್ನೇಹಪರ ಸಂಘಟನೆಗಳ ಸಹಕಾರ ಹಾಗೂ ದಾನಿಗಳ ಪ್ರೋತ್ಸಾಹದಿಂದ ಒಂದು ವರ್ಷದ ಅವಧಿಯಲ್ಲಿ ಸುಮಾರು ೧೧೯ ಪ್ರಾಜೆಕ್ಟ್ಗಳನ್ನು ಮಾಡಿ ಇಂತಹ ಅದ್ಭುತವಾದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ನುಡಿದರು.

ನಮ್ಮ ಕ್ಲಬ್ ವತಿಯಿಂದ ಸರ್ಕಾರಿ ಶಾಲಾ ಕಾಲೇಜು ಮಕ್ಕಳಿಗೆ ೩೫೦೦ ನೋಟ್ ಪುಸ್ತಕಗಳು, ಶಾಲಾ ಪರಿಕರಗಳು ನೀಡಲಾಯಿತು. ಅಲ್ಲದೇ ಬಡ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ವಿಶೇಷ ವಿಕಲಚೇತನರಿಗೆ ಸಹಾಯ, ಆರೋಗ್ಯ ಶಿಬಿರಗಳು, ಸಸಿ ನಡುವ ಕಾರ್ಯಕ್ರಮಗಳು, ಮಹಾನ್ ಸಾಹಿತಿಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳು, ಉತ್ತಮ ಶಿಕ್ಷಕರು, ಕಾರ್ಮಿಕರು ಹಾಗೂ ಸಮಾಜಸೇವಕರಿಗೆ ಪ್ರಶಸ್ತಿಗಳ ಪ್ರಧಾನ, ಬುದ್ಧಿಮಾಂಧ್ಯ ಮಕ್ಕಳಿಗೆ ಸಹಾಯ, ಶಾಲಾ ಮಕ್ಕಳಿಗೆ ಸಮವಸ್ತç ವಿತರಣೆ, ರಕ್ತದಾನ ಶಿಬಿರಗಳ ಮೂಲಕ ಸುಮಾರು ೫೦೦ ಯೂನಿಟ್ ರಕ್ತ ಸಂಗ್ರಹಣೆ ಹೀಗೆ ಸುಮಾರು ೧೧೯ಕ್ಕೂ ಹೆಚ್ಚು ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಈ ಪ್ರಶಸ್ತಿಗೆ ಭಾಜನರಾಗಿರುತ್ತೇವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎಸ್.ಎಂ.ಚ0ದ್ರಶೇಖರ್, ರಕ್ತನಿಧಿ ಸದಸ್ಯರಾದ ಜನಾರ್ಧನ್ ಟಿ.ಎಸ್, ಖಜಾಂಚಿ ದೇವರಾಜ್ ಬಿ.ಕೆ, ಸಮುದಾಯದ ಸದಸ್ಯರಾದ ಶಿವಕುಮಾರ್ ಬಿ, ಪೊಲೀಯೋ ಸದಸ್ಯರಾದ ಸೋಮಶೇಖರ್ ವಿ.ಪಿ, ಹಿರಿಯ ರೋಟೇರಿಯನ್‌ಗಳಾದ ಅಶೋಕ್‌ಕುಮಾರ್ ಆರ್, ಗೋಪಾಲರೆಡ್ಡಿ, ಗೋವಿಂದರಾಜು ಬಿ.ಎಸ್, ಬೈಚಪ್ಪ ಬಿ, ಅಶೋಕ್ ಸಿ.ಆರ್, ರಾಮನಾಥ ಕೆ, ರಾಮಚಂದ್ರೇಗೌಡ ಎಂ.ಎನ್, ರಾಘವೇಂದ್ರ ಬಾಲಾಜಿ, ಸೋಮಶೇಖರ್ ಎನ್, ಪ್ರಭಾಕರ್ ಭಾಗವಹಿಸಿದ್ದರು.

ಚಿತ್ರ : ಕೋಲಾರದ ರೋಟರಿ ಕ್ಲಬ್ ಸಂಸ್ಥೆಗೆ ೭ ಸ್ಟಾರ್ ಡೈಮಂಡ್ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande