ಕೋಲಾರ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆ ಮೊರಸುನಾಡು ನಿಘಂಟು ಬಿಡುಗಡೆ
ಕೋಲಾರ ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆ ಮೊರಸುನಾಡು ನಿಘಂಟು ಬಿಡುಗಡೆ
ಕೋಲಾರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಅಸ್ಮಿತಿ ಮೊರಸುನಾಡು ಕನ್ನಡ ನಿಘಂಟನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸAದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು. ಲೇಖಕ ರಘುನಾಥ್, ಕನ್ನಡ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಕುಂದರಾಜ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಚಿತ್ರದಲ್ಲಿದ್ದಾರೆ.


ಕೋಲಾರ ೨೬ ಜೂನ್ (ಹಿ.ಸ) :

ಆ್ಯಂಕರ್ : ಮೊರಸುನಾಡು ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದೆ.ಕನ್ನಡ ತೆಲಗು ತೆಮಿಳು ಪಾಕೃತ ಹಳಗನ್ನಡ ಇಂಗ್ಲೀಷ್ ಹಾಗು ಉರ್ದು ಭಾಷಿಕರು ಮೊರಸುನಾಡು ಕನ್ನಡವನ್ನು ಕಟ್ಟಿದ್ದಾರೆ.ಮೊರಸುನಾಡು ಜಾನಪದಲ್ಲಿ ಮಾನವೀಯತೆ ರಮ್ಯತೆ ಮಿಳಿತವಾಗಿದೆ.ನಿಘಂಟು ಬದುಕಿನ ರೀತಿ ಇದೆ ಎಂದು ಸಾಹಿತಿ ಸಾ.ರಘುನಾಥ್ ಮೊರಸುನಾಡು ಕನ್ನಡದ ಪರಂಪರೆಯನ್ನು ಮೆಲಕು ಹಾಕಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಪ್ರಕಟಿಸಿರುವ, ರಘುನಾಥ್ ಬರೆದಿರುವ ಮೊರಸುನಾಡು ಕನ್ನಡ ನಿಘಂಟು ಬಿಡುಗಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೊರಸುನಾಡು ಜಾನಪದಲ್ಲಿ ಮಾನವೀಯತೆ ರಮ್ಯತೆ ಮಿಳಿತವಾಗಿದೆ. ಬದುಕಿನ ವೈರುದ್ಯಗಳ್ನು ಕಾಣಬಹುದಾಗಿದೆ.ಕೇಂದ್ರದ ಅರ್ಥ ಸಚಿವರು ಕನಸುಗಳ ಮೇಲೆ ತೆರಿಗೆ ವಿಧಿಸದಿದ್ದರೆ ಮೊರಸುನಾಡು ಕನ್ನಡ ನಿಘಂಟಿನ ಎರಡನೇ ಆವೃತ್ತಿಯನ್ನು ಪ್ರಕಟಿಸಲಾಗುವುದು. ಕನಸುಗಳ ತೆರಿಗೆ ವಿಧಿಸುವುದು ಲಾಭದಾಯಕ ಎಂಬುದು ಮನವರಿಕೆಯದರೆ ಅರ್ಥಸಚಿವರು ತೆರಿಗೆ ವಿಧಿಸಯತ್ತಾರೆ ಎಂದು ವ್ಯಂಗ ಮಾಡಿದರು.

ತೆಮಿಳುನಾಡಿನ ಹಲವು ಭಾಗಳಲ್ಲಿ ಹನ್ನರಡನೇ ಶಥಮಾನದ ಕನ್ನಡವನ್ನುಈಗಲೂ ಮಾತನಾಡುತ್ತಾರೆ. ಕೋಲಾರ ಜಿಲ್ಲೆಯಲ್ಲಿ ಮಾತನಾಡುವ ಮೊರಸನಾಡು ಕನ್ನಡದಲ್ಲಿ ಹಲವು ವೈವಿದ್ಯತೆಗಳು ಇವೆ. ಕೋಲಾರ ಜಿಲ್ಲೆ ಗಡಿ ಭಾಗದಲ್ಲಿ ಇರುವ ಕಾರಣ ತೆಲುಗು, ಕನ್ನಡ, ತಮಿಳು ಭಾಷೆಗಳ ಪದಗಳನ್ನು ಮೊರಸನಾಡು ಕನ್ನಡದಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪ್ರಸಾರಂಗ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಕುಂದ ರಾಜ್ ಕನ್ನಡದಲ್ಲಿ ಈ ರೀತಿಯ ಪ್ರಯೋಗಳು ತೀರ ಅಪರೂಪವಾಗಿವೆ. ಕಿಟಲ್ ನಿಘಂಟಿನ ರೀತಿಯಲ್ಲಿ ಮೊರಸುನಾಡು ಕನ್ನಡ ನಿಘಂಟು ಖ್ಯಾತಿಯಾಗಲಿ ಎಂದು ಹಾರೈಸಿದರು.

ನಿಘಂಟಿನಲ್ಲಿ ಒಂದು ಕಾಲಘಟ್ಟದಲ್ಲಿ ಜನರು ಆಡುತ್ತಿದ್ದಂತೆ ದಾಖಲಿಸಲಾಗುವುದು. ನಿಘಂಟಿನಲ್ಲಿ ಸಾಂಸ್ಕುçತಿಕ ರಾಜಕೀಯ ಅಂಶಗಳು ಮಿಳಿತವಾಗಿದೆ.ಹಲವಾರು ಆಯಾಮಗಳಲ್ಲಿ ನಿಘಂಟುಗಳು ಇರುತ್ತವೆ.ಮೊರಸುನಾಡು ನಿಘಂಟು ಅಂತಹ ಸಂಪನ್ನೂಲದ ಆಗರ ಆಗಿದೆ.ಜನರು ಹಿಂದೆ ಆಡಿತ್ತಿದ ಪದಗಳನ್ನು ಮರೆತುಹೋಗಿದ್ದಾರೆ. ಅಂತಹ ಪದಗಳನ್ನು ಮೊರಸುನಾಡು ಕನ್ನಡ ನಿಘಂಟಿನಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಸಾಹಿತಿ ಕೆ.ವೈ. ನಾರಾಯಣಸ್ವಾಮಿ ಮಾತನಾಡಿ ಮೊರಸುನಾಡು ಕನ್ನಡ ನಿಘಂಟು ಸಾಂಸ್ಕೃತಿಕ ವಿಶ್ವಕೋಶದ ಲಕ್ಷಣಗಳನ್ನು ಹೊಂದಿದೆ.ರಘುನಾಥ್ ಸಾಂಸ್ಕೃತಿಕ ಮಾಹಿತಿಗಳನ್ನು ಮುಂದಿನ ತಲೆಮಾರಿಗೆ ರವಾನೆ ಮಾಡುವ ಸಂವಹನಕಾರರಾಗಿದ್ದಾರೆ. ಮೊರಸುನಾಡು ಕನ್ನಡದ ಸಂಸ್ಕೃತಿಯ ಅಪರೂಪದ ಮಾಹಿತಿಯನ್ನು ದಾಖಲಿಸಿದ್ದಾರೆ. ಮೊರಸುನಾಡು ಕನ್ನಡದ ವಿಸ್ತಾರವನ್ನು ಕೋಲಾರದ ಆಚೆಗೂ ಕಾಣಬಹುದಾಗಿದೆ. ತಮಿಳುನಾಡಿನ ಹ¯ವು ಭಾಗಳಲ್ಲಿ ಮೊರಸುನಾಡಿನ ಕನ್ನಡದ ಬಳಕೆಯನ್ನು ಕಾಣಬಹುದಾಗೆದೆ. ತಮಿಳುನಾಡಿನ ದಿಂಡಿಗಲ್ ಹಲವಾರು ಹಳ್ಳಿಗಳಲ್ಲಿ ಕನ್ನಡವನ್ನು ಮಾತನಾಡುತ್ತಾರೆ. ಊಟಿಯಲ್ಲೂ ಸಹ ಕನ್ನಡ ಮಾತನಾಡುವವಿದ್ದಾರೆ. ಹೊಸೂರು, ಕೃಷ್ಣಗಿರಿ ಜಿಲ್ಲೆಗಲ್ಲಿ ಮೊರಸನಾಡ ಕನ್ನಡ ಮಾತನಾಡುತ್ತಾರೆ. ಕೋಲಾರ ಅಲ್ಲದೆ ನೆರೆಯ ಆಂಧ್ರ ಪ್ರದೇಶ ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಮೊರಸನಾಡಿನ ಸಂಸ್ಕೃತಿ ಮತ್ತು ಭಾಷಾ ವೈವಿದ್ಯತೆಯನ್ನು ಕಾಣಬಹುದು ಎಂದು ತಿಳಿಸಿದರು.

ರಘುನಾಥ್ ಕಾವ್ಯ ಬರಹ ಕಥೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಮೊರಸುನಾಡು ನಿಘಂಟಿನಲ್ಲಿ ಈ ಭಾಗದ ಬದುಕಿನ ಚಿತ್ರಗಳನ್ನು ಕಾಣಬಹುದಾಗಿದೆ. ಅಪರೂದ ಸಂಸ್ಕೃತಿಯನ್ನು ನಿಘಂಟಿನಲ್ಲಿ ಕಾಪಿಡುವ ಕೆಲಸವನ್ನು ರಘುನಾಥ್ ಶ್ಲಾಘನೀಯ ಕೆಲಸ ಮಾಡಿದ್ದಾರೆ .ಮೊರಸುನಾಡು ಸಾಂಸ್ಕೃತಿಕ ಪರಂಪರೆಯನ್ನು ಧಾಖಲಿಸಲಾಗಿದೆ. ಚಾರಿತ್ರಿಕವಾಗಿ ಮೊರಸುನಾಡು ಕನ್ನಡದ ಅಸ್ಮಿತೆಯನ್ನು ಕಟ್ಟುವ ಕೆಲಸವನ್ನು ಅತ್ಯಂತ ಶ್ರಮದಿಂದ ರಘುನಾಥ್ ಮಾಡಿದ್ದಾರೆ ಎಂದರು.

ಒಂದು ಭಾಷೆಯನ್ನು ಕಳೆದುಕೊಂಡರೆ ಒಂದು ಸಂಸ್ಕೃತಿಯನ್ನು ಕಳೆದುಕೊಳ್ಳುತ್ತೇವೆ. ಅಂತಸತ್ವವಾದ ಸಾಂಸ್ಕೃತಿಕ ಚರಿತ್ರೆಗಳು ಪದಗಳಲ್ಲಿ ಅವಿತಿರುತ್ತವೆ. ಅಂತಹ ಎಷ್ಟೋ ಪದಗಳನ್ನು ಸ.ರಘುನಾಥರು ಈ ನಿಘಂಟಿನಲ್ಲಿ ದಾಖಲಿಸುವ ಮೂಲಕ ಈ ಭಾಗದ ಸಾಂಸ್ಕೃತಿಕ ಚಿತ್ರಣ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಇನ್ನಷ್ಟು ಪದಗಳನ್ನು ಸೇರಿಸುವ ಕೆಲಸವಾಗಲಿ ಎಂದು ಆಶಿಸಿದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಹಳ್ಲಿ ಮೊರಸುನಾಡು ಕನ್ನಡ ನಿಘಂಟನ್ನು ವಿಶ್ವವಿದ್ಯಾಲಯ ಪ್ರಕಟಿಸಿರುವ ಮೊದಲ ಪಠ್ಯೇತರ ಪುಸ್ತವಾಗಿದೆ. ಇದೊಂದು ವಿಶ್ವವಿದ್ಯಾಲದ ಚರಿತ್ರೆಯಲ್ಲಿ ಅಪರೂಪದ ಘಟನೆಯಾಗಿದೆ. ಮೊರಸುನಾಡು ನಿಘಂಟು ಪ್ರಕಟಿಸಲು ಹೋರಾಟ ನಡೆಸುತ್ತಿದ್ದರು. ನಾನು ಮೊದಲು ಭಾರಿ ಭೇಟಿಯಾದಾಗ ನಿಘಂಟು ಪ್ರಕಟಣೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕೊಟ್ಟ ಮಾತಿನಂತೆ ನಿಘಂಟು ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆಗೆ ಚಾರಿತ್ಯಕವಾಗಿ ಮೊರಸುನಾಡು ಎಂಬ ಹೆಸರಿತ್ತು. ತಮಿಳು, ಕನ್ನಡ ಮತ್ತು ತೆಲಗು ಸಮುದಾಯಗಳನ್ನು ಒಳಗೊಂಡಿದೆ. ಮೊರಸುನಾಡು ಕನ್ನಡದಲ್ಲಿ ತೆಲುಗು, ತಮಿಳು ಭಾಷೆಗಳ ಸೊಗಡು ಇದೆ. ಇಂತಹ ಶ್ರೀಮಂತ ಪರಂಪರೆಯಿರುವ ಮೊರಸುನಾಡು ಕನ್ನಡವನ್ನು ದಾಖಲಿಸುವ ಪ್ರಯತ್ನವು ನಡೆದಿಲ್ಲ. ಮೊರಸುನಾಡು ಕನ್ನಡ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಮುಂದಿನ ತಲೆಮಾರಿಗಾಗಿ ದಾಖಲಿಸುವುದು ಸವಾಲು ಆಗಿದೆ. ಆ ಕೆಲಸವನ್ನು ಸಾಹಿತಿ ರಘುನಾಥ್ ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಮುಂದಿನ ತಲೆಮಾರಿಗೆ ನಿಘಂಟು ಮಾಹಿತಿಯ ಆಗರವಾಗಲಿದೆ. ನನ್ನ ಅವಧಿಯಲ್ಲಿ ನಿಘಂಟು ಪ್ರಕಟಿಸುವುದಾಗಿ ಭರವಸೆ ನೀಡಿದ್ದೆ. ಅದರ ಪ್ರಕಾರ ಭರವಸೆಯನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಸಿ.ಎನ್.ಶ್ರೀಧರ್ ಹಾಗೂ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ.ಡಿ.ಕುಮುದಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರ : ಕೋಲಾರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯ ಅಸ್ಮಿತಿ ಮೊರಸುನಾಡು ಕನ್ನಡ ನಿಘಂಟನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಮಂಗಸ0ದ್ರ ಸ್ನಾತಕೋತ್ತರ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು. ಲೇಖಕ ರಘುನಾಥ್, ಕನ್ನಡ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಕುಂದರಾಜ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಳ್ಳಿ ಚಿತ್ರದಲ್ಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande