ನಾನು, ನಿಮ್ಮೆಲ್ಲರ ಮತಾಶೀರ್ವಾದದ ಋಣದಲ್ಲಿರುವೆ : ನಾರಾ ಭರತರೆಡ್ಡಿ
ಬಳ್ಳಾರಿ, 26 ಜೂನ್ (ಹಿ.ಸ.) : ಆ್ಯಂಕರ್ : ನಾನು ಜನರ ಸೇವಕ. ನಿಮ್ಮೆಲ್ಲರ ಮತಾಶೀರ್ವಾದದ ಋಣದಲ್ಲಿರುವ ಶಾಸಕ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ. ಹಿಂದೂ ಸಮಾಜ ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಬಳ್ಳಾರಿ ನಗರ ವ್ಯಾಪ್ತಿಯ 24 ದೇವಸ್ಥಾನಗಳ ಅಭ
ನಾನು, ನಿಮ್ಮೆಲ್ಲರ ಮತಾಶೀರ್ವಾದದ ಋಣದಲ್ಲಿರುವೆ ; ನಾರಾ ಭರತರೆಡ್ಡಿ


ನಾನು, ನಿಮ್ಮೆಲ್ಲರ ಮತಾಶೀರ್ವಾದದ ಋಣದಲ್ಲಿರುವೆ ; ನಾರಾ ಭರತರೆಡ್ಡಿ


ನಾನು, ನಿಮ್ಮೆಲ್ಲರ ಮತಾಶೀರ್ವಾದದ ಋಣದಲ್ಲಿರುವೆ ; ನಾರಾ ಭರತರೆಡ್ಡಿ


ಬಳ್ಳಾರಿ, 26 ಜೂನ್ (ಹಿ.ಸ.) :

ಆ್ಯಂಕರ್ : ನಾನು ಜನರ ಸೇವಕ. ನಿಮ್ಮೆಲ್ಲರ ಮತಾಶೀರ್ವಾದದ ಋಣದಲ್ಲಿರುವ ಶಾಸಕ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.

ಹಿಂದೂ ಸಮಾಜ ಏರ್ಪಡಿಸಿದ್ದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಬಳ್ಳಾರಿ ನಗರ ವ್ಯಾಪ್ತಿಯ 24 ದೇವಸ್ಥಾನಗಳ ಅಭಿವೃದ್ಧಿಗೆ ಐದು ಕೋಟಿ ರೂಪಾಯಿ ಅನುದಾನವನ್ನು ತಂದಿರುವೆ. ಇದೆಲ್ಲಾ ನೀವೆಲ್ಲರೂ ಮಾಡಿರುವ ಮತಾಶೀರ್ವಾದದ ಖುಣದಿಂದಲೇ ಸಾಧ್ಯವಾಗಿದೆ ಎಂದರು.

ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ಇಲಾಖೆಗಳ ಸಚಿವರು ಬಳ್ಳಾರಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ 400 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ತುಂಗಭದ್ರಾ ಜಲಾಶಯದಿಂದ ನೇರವಾಗಿ ಬಳ್ಳಾರಿ ನಗರಕ್ಕೆ ಕುಡಿಯುವ ನೀರು ತರುವ 1200 ಕೋಟಿ ರೂ ವೆಚ್ಚದ ಯೋಜನೆ ಸಿದ್ದವಾಗಿದ್ದು, ಶೀಘ್ರದಲ್ಲೇ ಚಾಲನೆ ಪಡೆಯುವ ಸಾಧ್ಯತೆಗಳಿವೆ ಎಂದರು.

ಬಳ್ಳಾರಿ ನಗರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಸ್ನೇಹ ಮತ್ತು ಸೌಹಾರ್ದತೆಯಿಂದ ಸಹಬಾಳ್ವೆಯನ್ನು ನಡೆಸುತ್ತಿರುವುದು ಭಾರತದ ಗಮನ ಸೆಳೆದಿದೆ. ನಾವೆರಲ್ಲರೂ ಸದಾಕಾಲ ಸೌಹಾರ್ದಯುತವಾಗಿ ಜೀವನ ನಡೆಸೋಣ ಎಂದರು.

ಬದ್ರಿ ನಾರಾಯಣ ದೇವಸ್ಥಾನದ ಅರ್ಚಕ ಗುರುರಾಜ ಆಚಾರ್ ಅವರು, ಬಳ್ಳಾರಿ ನಗರದ 24 ದೇವಸ್ಥಾನಗಳಿಗೆ 5 ಕೋಟಿ ಅನುದಾನ ತಂದಿರುವ ಶಾಸಕ ನಾರಾ ಭರತರೆಡ್ಡಿ ಅವರು ಭವಿಷ್ಯದಲ್ಲಿ ಉತ್ತಮ ದಿನಗಳನ್ನು ಕಾಣಲಿ ಎಂದು ಹಾರೈಸಿದರು.

ಮಾಜಿ ಮೇಯರ್, ಪಾಲಿಕೆಯ ಸದಸ್ಯೆ ಎಂ. ರಾಜೇಶ್ವರಿ, ಉಪ ಮೇಯರ್ ಡಿ. ಸುಕುಂ, ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಪಿ. ಗಾದೆಪ್ಪ, ಎಂ. ಪ್ರಭಂಜನಕುಮಾರ್, ರಾಮಾಂಜನೇಯ, ಪೇರಂ ವಿವೇಕ್, ಉಮಾದೇವಿ, ಜಾನಕಮ್ಮ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಬಿಆರೆಎಲ್ ಸೀನಾ, ಮಂಜುಳಾ, ಮಾಜಿ ಮೇಯರ್ ನಾಗಮ್ಮ, ಚಂಪಾ ಚವ್ಹಾಣ, ಯಶೋಧಾ, ಸಿದ್ಧೇಶ್ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande