ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಲು ಹಿರಿಯ ನಾಗರೀಕರ ಒತ್ತಾಯ
ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಲು ಹಿರಿಯ ನಾಗರೀಕರ ಒತ್ತಾಯ
ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಪ್ರಾರಂಭಿssಸಲು ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳಿಗೆ ಹಿರಿಯ ನಾಗರೀಕರು ಮನವಿ ಸಲ್ಲಿಸಿದರು.


ಕೋಲಾರ, ೧೮ ಜೂನ್(ಹಿ.ಸ) :

ಆ್ಯಂಕರ್ : ಕೋಲಾರದ ಕನಕನಪಾಳ್ಯ ಮತ್ತು ಕುರುಬರಪೇಟೆಯ ಹೋಪ್ ಹೆಲ್ತ್ ಆಸ್ಪತ್ರೆಯ ಪಕ್ಕದಲ್ಲಿನ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಪ್ರಾರಂಭಿssಸಲು ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳಿಗೆ ಹಿರಿಯ ನಾಗರೀಕರು ಮನವಿ ಸಲ್ಲಿಸಿದರು.

ಕೋಲಾರದ ನಗರಸಭೆಯ ವತಿಯಿಂದ ನಿರ್ಮಿ ಸಲಾಗಿರುವಂತಹ ಎರಡು ಸಾರ್ವಜನಿಕರ ಶುದ್ದ ನೀರಿನ ಘಟಕಗಳು ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿರುತ್ತವೆ. ಕೋಲಾರದ ಕುರುಬರಪೇಟೆ ೫ನೇ ವಾರ್ಡ್ ನಲ್ಲಿನ ಹೋಪ್ ಹೆಲ್ತ್ ಆಸ್ಪತ್ರೆ ಹತ್ತಿರದ ಕೋಲಾರಮ್ಮ ಕೆರೆ ಅಂಚಿನಲ್ಲಿ ೭ ವರ್ಷಗಳ ಹಿಂದೆ ಸಾರ್ವಜನಿಕರ ಶುದ್ದ ನೀರಿನ ಘಟಕವನ್ನು ಸ್ಥಪಿಸಲಾಗಿರುತ್ತದೆ. ಇದಕ್ಕೆ ಯಾವುದೇ ಕೊಳವೆ ಬಾವಿಯ ನೀರಿನ ಸಂಪರ್ಕವನ್ನು ಒದಗಿಸಿರುವುದಿಲ್ಲ. ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಘಟಕವನ್ನು ಸುಮಾರು ಆರೂವರೆ ವರ್ಷಗಳಿಂದ ನೀರಿನ ಸರಬರಾಜು ಇಲ್ಲವೆಂಬ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೋಲಾರದ ಕನಕನಪಾಳ್ಯದ ೪ನೇ ಮುಖ್ಯ ರಸ್ತೆ, ೫ನೇ ವಾರ್ಡ್ ನಲ್ಲಿ ಕೆರೆ ಅಂಚಿನಲ್ಲಿ ಶುದ್ದ ನೀರಿನ ಘಟಕವನ್ನು ಸುಮಾರು ೬ ವರ್ಷಗಳ ಹಿಂದೆ ಸ್ಥಾಪಿಸಲಾಗಿರುತ್ತದೆ. ಆದರೆ ಈವರೆಗೆ ಶುದ್ದ ನೀರಿನ ಘಟಕವನ್ನು ಸುಮಾರು ೬ ವರ್ಷಗಳ ಹಿಂದೆ ಸ್ಥಾಪಿಸಲಾಗಿರುತ್ತದೆ. ಆದರೆ ಈವರೆಗೆ ಶುದ್ದ ನೀರನ ಘಟಕವನ್ನು ಕಾರ್ಯರಂಭ ಮಾಡಿರುವುದಿಲ್ಲ. ಇದರ ಪರಿಣಾಮವಾಗಿ ಅಳವಡಿಸಿರುವಂತಹ ಯಂತ್ರೋಪಕರಣಗಳು ತುಕ್ಕು ಹಿಡಿದು ಹಾಳಾಗುವ ಪರಿಸ್ಥಿತಿಯನ್ನು ತಲುಪಿರುತ್ತದೆ. ಸರ್ಕರದ ವಿನಿಯೋಗಿಸಿದ ಹಣ ಪೋಲಾಗಿ, ಸಾರ್ವಜನಿಕರ ಉಪಯೋಗಕ್ಕೆ ಬರದಂತಾಗಿ ನಿರ್ಮಾಣ ದ ಮೂಲ ಉದ್ದೇಶವೇ ವಿಫಲವಾದಂತೆ ಆಗಿರುತ್ತದೆ ಎಂದು ಆರೋಪಿಸಿದರು

ಈ ಸಂದರ್ಭದಲ್ಲಿ ಗೌರಿಪೇಟೆಯ ಸಾಮಾಜಿಕ ಕಾರ್ಯಕರ್ತ ಕೆ.ಎನ್ ರವೀಂದ್ರನಾಥ ನಾಥ್, ಚುಟುಕು ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಕನಕನಪಾಳ್ಯದ ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೆ.ಎನ್. ರಾಮಸ್ವಾಮಿ, ಕುರುಬರ ಪೇಟೆಯ ನಿವೃತ್ತ ಬೆಮೆಲ್ ಇಂಜಿನಿಯರ್ ಕೆ.ಶ್ರೀನಿವಾಸ್ ಹಾಗೂ ನಿವೃತ್ತ ಎಸ್‌ಐ ಎನ್ ನಾರಾಯಣ್ ಉಪಸ್ಥಿತರಿದ್ದರು.

ಚಿತ್ರ : ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಪ್ರಾರಂಭಿssಸಲು ಒತ್ತಾಯಿಸಿ ಕೋಲಾರ ಜಿಲ್ಲಾಧಿಕಾರಿಗಳಿಗೆ ಹಿರಿಯ ನಾಗರೀಕರು ಮನವಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande